Neer Dose Karnataka
Take a fresh look at your lifestyle.

ಪವನ್ ಶೆರಾವತ್ ರವರು ಬೆಂಗಳೂರು ತಂಡವನ್ನು ಬಿಡಲು ಕಾರಣವೇನು ಗೊತ್ತೇ?? ಕೊನೆಗೂ ತಾನೇ ಉತ್ತರ ನೀಡಿದ ಪವನ್. ಹೇಳಿದ್ದೇನು ಗೊತ್ತೇ??

ನಮ್ಮ ದೇಶದಲ್ಲಿ ಸ್ಪೋರ್ಟ್ಸ್ ಅಂದ್ರೆ ಜನರಿಗೆ ಬಹಳ ಆಸಕ್ತಿ. ಕ್ರಿಕೆಟ್, ಫುಟ್ ಬಾಲ್, ಕಬಡ್ಡಿ ಹೀಗೆ ಎಲ್ಲಾ ಆಟಗಳನ್ನು ಬಹಳ ಆಸಕ್ತಿಯಿಂದ ನೋಡುತ್ತಾರೆ. ಕ್ರಿಕೆಟ್ ಹಾಗೂ ಐಪಿಎಲ್ ಕ್ರೇಜ್ ಒಂದು ಕಡೆಯಾದರೆ. ಮತ್ತೊಂದು ಕಡೆ ಕಬಡ್ಡಿ ಕ್ರೇಜ್. ಪ್ರೊ ಕಬಡ್ಡಿ ಲೀಗ್ ಪಂದ್ಯಗಳು ಎಷ್ಟು ಜನಪ್ರಿಯತೆ ಪಡೆದುಕೊಂಡಿದೆ ಎನ್ನುವುದು ನಮಗೆಲ್ಲ ಗೊತ್ತಿದೆ. ಇದೀಗ ಪ್ರೊ ಕಬಡ್ಡಿ 9ನೇ ಸೀಸನ್ ಶುರುವಾಗಲಿದೆ.

9ನೇ ಸೀಸನ್ ನ ಆಕ್ಷನ್ ಗಳು ಮುಗಿದಿದ್ದು, ಬೆಂಗಳೂರು ಬುಲ್ಸ್ ತಂಡಕ್ಕೆ ವಿಕಾಸ್ ಕಂಡೊಲ ಅವರು ಆಯ್ಕೆಯಾಗಿದ್ದು, ಇವರು ಈ ವರ್ಷ ನಮ್ಮ ಕರ್ನಾಟಕದ ತಂಡದ ಪರವಾಗಿ ಕಬಡ್ಡಿ ಆಡಲಿದ್ದಾರೆ. ಬೆಂಗಳೂರು ಬುಲ್ಸ್ ತಂಡದ ಸ್ಟಾರ್ ಪ್ಲೇಯರ್ ಆಗಿದ್ದ ಪವನ್ ಶ್ವರಾವತ್ ಅವರು ಈ ವರ್ಷ ಬೇರೆ ತಂಡದ ಪರವಾಗಿ ಆಡಲಿದ್ದಾರೆ, ಪವನ್ ಅವರು ಬೆಂಗಳೂರು ತಂಡವನ್ನು ಬಿಟ್ಟು ಹೋಗಿರುವುದು ಬೆಂಗಳೂರಿನ ಅಭಿಮಾನಿಗಳಿಗೆ ನಿಜಕ್ಕೂ ಬಹಳ ಬೇಸರ ತಂದಿದೆ. ಅಷ್ಟಕ್ಕೂ ಪವನ್ ಶೆರಾವತ್ ಅವರು ತಂಡವನ್ನು ಬಿಟ್ಟು ಹೋಗಲು ಕಾರಣ ಏನಿರಬಹುದು ಎಂದು ಎಲ್ಲಾ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಅದಕ್ಕೀಗ ಸ್ವತಃ ಪವನ್ ಶೆರಾವತ್ ಅವರೇ ಉತ್ತರ ನೀಡಿದ್ದಾರೆ.

ಆಕ್ಷನ್ ಬಗ್ಗೆ ಮಾತನಾಡಿರುವ ಪವನ್ ಅವರು, “ನಾನು ಹಲವಾರು ವರ್ಷಗಳಿಂದ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಆಡಿದ್ದೀನಿ, ಕಳೆದ ಬಾರಿ ನನ್ನನ್ನು ರೀಟೇನ್ ಮಾಡಿದಾಗ, ಕಡಿಮೆ ಮೊತ್ತಕ್ಕೆ ರೀಟೇನ್ ಮಾಡಲಾಯಿತು. ಈ ಸಲ ನನಗೆ ಹೆಚ್ಚು ಹಣ ಬೇಕು. ಪ್ರೊ ಕಬಡ್ಡಿಯ ಸ್ಟಾರ್ ಪ್ಲೇಯರ್ ನಾನು. ಬೇರೆ ತಂಡಕ್ಕೂ ಆಡಬೇಕು ಅಂತ ಇದೀನಿ. ಆದರೆ ಬೆಂಗಳೂರು ಬುಲ್ಸ್ ತಂಡದ ಮೇಲೆ ಒಂದು ನಂಬಿಕೆ ಇದೆ, ನನ್ನನ್ನ ಅವರು ವಾಪಸ್ ಕರೆದುಕೊಳ್ಳುತ್ತಾರೆ ಅಂತ. ನಾನು ಕೇಳಿದಂತ ಮೊತ್ತ ಎಷ್ಟು ಅಂತ ನಾನು ರಿವೀಲ್ ಮಾಡೋದಿಲ್ಲ. ನಿಮಗೆ ಗೊತ್ತು, ಬೆಂಗಳೂರು ಬುಲ್ಸ್ ತಂಡ ನನಗೆ ಹತ್ತಿರವಾದ ತಂಡ. ನಾನು ಸ್ಟಾರ್ ಆಗಿದ್ದು ಬೆಂಗಳೂರು ಬುಲ್ಸ್ ತಂಡದಿಂದ, ನಾನು ಯಾವಾಗಲೂ ಬೆಂಗಳೂರು ಬುಲ್ಸ್ ತಂಡಕ್ಕೆ ಚಿರಋಣಿ ಆಗಿರ್ತೀನಿ. ಮುಂದಿನ ವರ್ಷ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಆಡ್ತೀನಿ. ಈ ವರ್ಷ ಆಡೋದಿಲ್ಲ..” ಎಂದು ಹೇಳಿದ್ದಾರೆ ಪವನ್

Comments are closed.