Neer Dose Karnataka
Take a fresh look at your lifestyle.

ಪ್ರೇಕ್ಷರಿಗೆ ಮನರಂಜನೆಯ ಮೇಲೆ ಮನರಂಜನೆ ನೀಡುತ್ತಿರುವ ಕನ್ನಡತಿ: ಟ್ವಿಸ್ಟ್ ಮೇಲೆ ಟ್ವಿಸ್ಟ್: ಅಮ್ಮಮ್ಮ ರವರಿಗೆ ಮತ್ತೊಂದು ಹೊಸ ಆತಂಕ. ಏನಾಗಲಿದೆ ಗೊತ್ತೇ??

ಕನ್ನಡತಿ ಧಾರವಾಹಿ ಪ್ರತಿದಿನ ಹೊಸ ಟ್ವಿಸ್ಟ್ ಗಳ ಜೊತೆಗೆ ಸಾಗುತ್ತಿದೆ. ಈ ಧಾರವಾಹಿಯಲ್ಲಿ ಅಮ್ಮಮ್ಮನಿಗೆ ಇರುವ ಆರೋಗ್ಯದ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಈಗ ಈ ಖಾಯಿಲೆ ಮತ್ತೊಂದು ಹಂತಕ್ಕೆ ಸಾಗಿದೆ ಎಂದು ಎಪಿಸೋಡ್ ಗಳ ಮೂಲಕ ಗೊತ್ತಾಗುತ್ತಿದೆ. ಅಮ್ಮಮ್ಮನಿಗೆ ಈಗ ಮರೆವಿನ ಸಮಸ್ಯೆ ಹೆಚ್ಚಾಗಿದೆ. ಅಮ್ಮಮನ ಮರೆವಿನಿಂದ ಆಸ್ಪತ್ರೆಯಲ್ಲಿ ಸಾನಿಯಾ ಕಷ್ಟ ಅನುಭವಿಸುವ ಹಾಗೆ ಆಯಿತು, ಚಿಕಿತ್ಸೆ ಪಡೆದು, ಅಮ್ಮಮ್ಮ ಮರೆತು ಮನೆಗೆ ಹೋದ ಕಾರಣ ಕಟ್ಟಲು ಹಣ ಇಲ್ಲದೆ, ಅಸ್ಪತ್ರೆಯವರಿಂದ ಮಾತು ಕೇಳಿ, ರಾತ್ರಿಯೆಲ್ಲಾ ಅಲ್ಲೇ ಮಲಗುವ ಹಾಗೆ ಆಯಿತು.

ನಂತರ ಹೇಗೋ ಮಾರಿ ಸಾನಿಯಾ ಆಟೋದಲ್ಲಿ ವಾಪಸ್ ಮನೆಗೆ ಬಂದರು, ಆಟೋ ಡ್ರೈವರ್ ಇಂದಲೂ ಮಾತುಗಳನ್ನು ಕೇಳುವ ಹಾಗೆ ಆಯಿತು. ಕೊನೆಗೆ ಸಾನಿಯಾ ಮನೆಗೆ ಬಂದಾಗ, ಇದೆಲ್ಲಾ ಹೇಗಾಯಿತು, ಬಾತ್ ರೂಮ್ ನಲ್ಲಿ ಜಾರಿ ಬೀಳುವಷ್ಟು ಎಣ್ಣೆ ಚೆಲ್ಲಿದವರು ಯಾರು ಎಂದೆಲ್ಲಾ ಅಮ್ಮಮ್ಮ ಪ್ರಶ್ನೆ ಕೇಳಿದಾಗ, ಸಾನಿಯಾಗೆ ಅನುಮಾನ ಬಂದಿದೆ, ಅಮ್ಮಮ್ಮನಿಗೆ ನಿಜವಾಗಲೂ ಮರೆವು ಶುರುವಾಗಿದ್ಯಾ, ಅಥವಾ ನಾಟಕ ಆಡುತ್ತಿದ್ದಾರಾ ಎನ್ನಿಸಿತು ಆದರೆ ಇದನ್ನೆಲ್ಲಾ ಸಾನಿಯಾ ಮನೆಯವರ ಮುಂದೆ ಹೇಳಲು ಸಹ ಸಾಧ್ಯವಿಲ್ಲ.

ಇತ್ತ ಭುವಿಗೆ ಅಮ್ಮಮ್ಮನ ಸ್ಥಿತಿ ನೋಡಿ ಭಯವಾಗಿದ್ದು, ಆ ವಿಚಾರದ ಬಗ್ಗೆ ಹರ್ಷನ ಜೊತೆ ಮಾತನಾಡಿ ಬೇಸರ ವ್ಯಕ್ತಪಡಿಸಿದಳು ಭುವಿ. ಇತ್ತ ಅಮ್ಮಮ್ಮನಿಗೂ ತಮ್ಮ ಸ್ಥಿತಿಯ ಬಗ್ಗೆ ಆತಂಕ ಶುರುವಾಗಿದ್ದು, ತನಗೆ ಏನೋ ಆಗಿದೆ, ಗಂಭೀರವಾದ ವಿಷಯಗಳನ್ನು ಮರೆತು ಹೋಗುತ್ತಿದ್ದೇನೆ ಎಂದು ಭುವಿ ಬಳಿ ಹೇಳಿದರು. ಇತ್ತ ಸಾನಿಯಾಗೆ ಅಮ್ಮಮ್ಮನಿಗೆ ಮರೆವಿದೆ ಎಂದು ಗೊತ್ತಾದರೆ ಇನ್ನು ಏನೆಲ್ಲಾ ಮಾಡುತ್ತಾಳೆ? ಹಾಗೂ ಅಮ್ಮಮ್ಮನ ಮರೆವಿನಿಂದ ಇನ್ನು ಏನೆಲ್ಲಾ ಆಗುತ್ತದೆ ಎಂದು ಮುಂದಿನ ಎಪಿಸೋಡ್ ಗಳಲ್ಲಿ ಕಾದು ನೋಡಬೇಕಿದೆ.

Comments are closed.