Neer Dose Karnataka
Take a fresh look at your lifestyle.

ಆ ಒಂದು ಕಾರಣಕ್ಕಾಗಿ ಪದೇ ಪದೇ ಆಡಿಶನ್‌ನಲ್ಲಿ ರಿಜೆಕ್ಟ್ ಆಗುತ್ತಿದ್ದ ‘ಗಿಣಿರಾಮ’ ನಟಿ ನಯನಾ! ಯಾಕೆ ಗೊತ್ತೇ??

‘ಗಿಣಿರಾಮ’ ಧಾರಾವಾಹಿಯಾ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಉತ್ತರ ಕರ್ನಾಟಕ ಭಾಷೆ, ವಿಭಿನ್ನವಾದ ಕಥೆಯಿಂದ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಧಾರಾವಾಹಿಯ ನಟಿ ಮಹತಿ ರವರು ಹಾಗೂ ಅವಿದ್ಯಾವಂತ ಹಾಗೂ ಆಯಿ ಸಾಹೇಬ ರವರು ಹೇಳಿದಂತೆ ಕೇಳುವ ಸುಂದರ ಮನಸ್ಸಿನ ಒರಟ ಶಿವರಾಮ್ ರವರ ನಡುವಿನ ಕೋಳಿ ಜಗಳ ಜನರಿಗೆ ಭರಪೂರಿತ ಮನರಂಜನೆಯನ್ನು ಉಣಬಡಿಸುವುದರಲ್ಲಿ ಯಶಸ್ವಿಯಾಗಿದೆ. ಇಂದು ಈ ಕೋಳಿ ಜಗಳ ಆರಂಭಿಸುವ ಮಹತಿ ರವರ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ ಕೇಳಿ.

ಬಿಕಾಂ ಓದಿರುವ ನಯನಾ (ಮಹತಿ) ರವರಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲವಂತೆ. ಅಷ್ಟೇ ಅಲ್ಲದೇ ಮೊದಲಿನಿಂದಲೂ ಸಿನಿಮಾ ಲೋಕದ ಕಡೆ ಹೆಚ್ಚಿನ ಗಮನವಿದ್ದ ಕಾರಣ ಇವರು ನಟನೆಯತ್ತ ಮುಖ ಮಾಡಿದ್ದಾರೆ. ಮೊದಲಿಂದಲೂ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ನಯನ ರವರು ದಾಕ್ಷಾಯಿಣಿ ಭಟ್ ಅವರ ಮೇಳದಲ್ಲಿ ಹೆಚ್ಚು ಸಕ್ರಿಯವಾಗಿದ್ದರು. ತಡ ನಂತರ ‘ಕಿನ್ನರಿ’ ಧಾರಾವಾಹಿಯಲ್ಲಿ ಮಣಿ ದೊಡ್ಡವಳಾದ ನಂತರದಲ್ಲಿ ನಟಿಸಲು ಪಾತ್ರದ ಹುಡುಕಾಟ ನಡೆಯುತ್ತಿರುವಾಗ ಆಡಿಶನ್‌ನಲ್ಲಿ ಭಾಗವಹಿಸಿದ್ದರು. ಇನ್ನೇನು ನಾನು ಪಾತ್ರಕ್ಕೆ ಫೈನಲ್ ಆಗಿದ್ದರು ಎನ್ನುವ ಸಮಯದಲ್ಲಿ ‘ಕಿನ್ನರಿ’ ಪ್ರೊಡಕ್ಷನ್ ಹೌಸ್ ಬದಲಾಗಿ ಹೋಗುತ್ತದೆ, ಆಗ ಮಣಿ ಪಾತ್ರಕ್ಕೆ ಬೇರೆಯವರನ್ನು ಆಯ್ಕೆ ಮಾಡಲಾಗುತ್ತದೆ. ತಡ ನಂತರ ‘ಶಾಂತಂ ಪಾಪಂ’, ‘ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ’, ‘ಪಾಪ ಪಾಂಡು’ ಧಾರಾವಾಹಿಯಲ್ಲಿ ಇವರು ನಟಿಸಿದ್ದಾರೆ.

ಇದಾದ ಬಳಿಕ ಇವರು ಸಿಕ್ಕಾಪಟ್ಟೆ ಆಡಿಶನ್ ನೀಡಿದ್ದರಂತೆ. ಆದರೆ ಬಹುತೇಕ ಬಾರಿ ಇವರ ಹಲ್ಲನ್ನು ನೋಡಿ ಪಾತ್ರಗಳಿಗೆ ಸರಿ ಬರುವುದಿಲ್ಲ ಎಂದು ಹೇಳಿದ್ದರಂತೆ. ಹೀಗೆ ಕೆಲವು ಆಡಿಷನ್ ಗಳ ಬಳಿಕ ಹಲ್ಲು ಸರಿ ಮಾಡಿಸೋಣ ಎಂದು ಮನೆಯಲ್ಲಿ ಹೇಳಿದಾಗ ಪೋಷಕರು ಒಪ್ಪಿಗೆ ನೀಡಿರಲಿಲ್ಲ. ನೀನು ಹಲ್ಲು ಸರಿ ಮಾಡಿಸೋದು ಬೇಡ, ಅವಕಾಶ ಸಿಕ್ಕರಷ್ಟೇ ನಟಿಸು, ನೀನು ಹೇಗಿದೆಯೋ ಹಾಗೆ ಒಪ್ಪಿದರೆ ಮಾತ್ರ ನಟಿಸು ಅಂತ ಮನೆಯಲ್ಲಿ ಹೇಳಿದರು. ಆದರೆ ಅದು ಅಷ್ಟು ಸುಲಭವಲ್ಲ, ಇನ್ನು ಡೆಂಟಿಸ್ಟ್ ಹತ್ತಿರ ಹೋಗಿ ಹಲ್ಲು ಸರಿಮಾಡಿಸಿಕೊಂಡರೂ ಕೂಡ ನಾನು ಚೆನ್ನಾಗಿ ಕಾಣದಿದ್ದರೆ ಎಂಬ ಪ್ರಶ್ನೆ ಕೂಡ ಬಂತು. ತದ ನಂತರ ‘ಶನಿ’ ಸೀರಿಯಲ್‌ಗೆ ಮುಂಬೈನವರು ಆಡಿಶನ್ ಮಾಡಿದಾಗ ನಾನು ಮೇಜರ್ ಪಾತ್ರಕ್ಕೆ ಆಯ್ಕೆ ಮಾಡಿದ್ದರೂ ಕೂಡ ಹಲ್ಲಿನಿಂದಾಗಿ ರಿಜೆಕ್ಟ್ ಆದೆ ಎಂದು ಹೇಳಿದ್ದಾರೆ.

Comments are closed.