Neer Dose Karnataka
Take a fresh look at your lifestyle.

ಬೀಗುತ್ತಿದ್ದ ರಶ್ಮಿಕಾಗೆ ಮತ್ತೊಂದು ಶಾಕ್ ನೀಡಿದ ಕನ್ನಡತಿ ಕೃತಿ ಶೆಟ್ಟಿ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ರಶ್ಮಿಕ ಮಂದಣ್ಣ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ತೆಲುಗು ಚಿತ್ರರಂಗದಲ್ಲಿ ಇದೀಗ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹಲವಾರು ಖ್ಯಾತ ನಟರ ಜೊತೆ ನಟನೆ ಮಾಡಿರುವ ರಶ್ಮಿಕ ಮಂದನ್ನ ರವರು ಇದೀಗ ಬಾಲಿವುಡ್ ಚಿತ್ರರಂಗಕ್ಕೆ ಕೂಡ ಪ್ರವೇಶ ಮಾಡಿದ್ದಾರೆ, ಮಿಷನ್ ಮಜನೂ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿರುವ ರಶ್ಮಿಕಾ ರವರು ತೆಲುಗಿನಲ್ಲಿಯೂ ಕೂಡ ಇದೇ ಸಮಯದಲ್ಲಿ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ.

ಖ್ಯಾತ ನಟ ಜೂನಿಯರ್ ಎನ್ಟಿಆರ್ ಅವರ ಜೊತೆ ಸಿನಿಮಾ ಮಾಡಲು ಭರ್ಜರಿ ತಯಾರಿ ನಡೆಸಿದ್ದು, ತೆಲುಗು ಚಿತ್ರರಂಗದಲ್ಲಿ ಕೆಲವೊಂದು ಟಾಪ್ ಹೀರೋಯಿನ್ ಗಳನ್ನು ಹೊರತುಪಡಿಸಿದರೇ‌ ನಿರ್ಮಾಪಕರ ಮುಂದಿನ ಆಯ್ಕೆ ರಶ್ಮಿಕ ಮಂದನ್ನ ರವರು ಎಂಬಂತೆ ಆಗಿಬಿಟ್ಟಿದೆ. ಇದೇ ಕಾರಣಕ್ಕಾಗಿ ರಶ್ಮಿಕ ಮಂದಣ್ಣ ರವರು ಕಾಲ್ ಶೀಟ್ ಇಲ್ಲದೆ ಹಲವಾರು ಚಿತ್ರಗಳನ್ನು ಕೂಡ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಹೀಗೆ ರಶ್ಮಿಕ ಮಂದನ್ನ ರವರಿಗೆ ಯಶಸ್ಸಿನ ಮೆಟ್ಟಿಲು ಹತ್ತುತ್ತಿರುವ ಸಂದರ್ಭದಲ್ಲಿ ಮತ್ತೊಬ್ಬರು ಕನ್ನಡತಿ ತೆಲುಗು ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಬಳಿಕ ರಶ್ಮಿಕಾ ಮಂದನ ರವರಿಗೆ ಮೊದಲ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಸ್ನೇಹಿತರೇ ಉಪ್ಪಿನ ಸಿನಿಮಾದ ಮೂಲಕ ಮೊದಲ ಚಿತ್ರದಲ್ಲಿಯೇ ನೂರು ಕೋಟಿಗೂ ಹೆಚ್ಚು ಹಣ ಗಳಿಸಿ ಸದ್ದು ಮಾಡಿದ್ದ ಕೃತಿ ಶೆಟ್ಟಿ ರವರು ಇದೀಗ ರಶ್ಮಿಕ ರವರಿಗೆ ಹೋಗಬೇಕಾಗಿದ್ದ ಸಿನಿಮಾ ಆಫರ್ ಅನ್ನು ಕೃತಿ ಶೆಟ್ಟಿ ರವರು ಪಡೆದುಕೊಂಡಿದ್ದಾರೆ. ರಾಮ್ ಪೊಥಿನೆನಿ ರವರ 19ನೇ ಸಿನಿಮಾದಲ್ಲಿ ರಶ್ಮಿಕ ಮಂದನ್ನ ರಗುರು ನಟಿಸುವ ಸಾಧ್ಯತೆಗಳು ಹೆಚ್ಚಾಗಿತ್ತು. ಆದರೆ ರಶ್ಮಿಕ ಮಂದಣ್ಣ ರವರ ಬದಲು ಕೃತಿ ಶೆಟ್ಟಿರವರಿಗೆ ಅವಕಾಶ ನೀಡಲು ಚಿತ್ರತಂಡ ನಿರ್ಧಾರ ಮಾಡಿದೆ.

Comments are closed.