Neer Dose Karnataka
Take a fresh look at your lifestyle.

ಮಂಜು, ದಿವ್ಯ ಸುರೇಶ, ಅರವಿಂದ್ ಹಾಗೂ ದಿವ್ಯ ರವರಿಗೆ ಬಿಗ್ ಶಾಕ್ ನೀಡಿದ ಪ್ರೇಕ್ಷಕರು. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇದೀಗ ಬಿಗ್ ಬಾಸ್ ಮನೆಯಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಜೋಡಿ ಹಕ್ಕಿಗಳ ಕಲರವ ಜೋರಾದಂತೆ ಕಾಣುತ್ತಿದೆ, ಒಂದು ಕಡೆ ದಿವ್ಯ ಸುರೇಶ್ ಹಾಗೂ ಮಂಜು ಪಾವಗಡ ನಡುವಿನ ಸಂಭಾಷಣೆ ಹಾಗೂ ಮತ್ತೊಂದು ಕಡೆ ದಿವ್ಯ ಉರುಡುಗ ಹಾಗೂ ಅರವಿಂದ ಕೆಪಿ ರವರ ನಡುವಿನ ಸಂಭಾಷಣೆಯನ್ನು ಹೆಚ್ಚಿನ ಸಮಯ ಪ್ರಸಾರ ಮಾಡಲಾಗುತ್ತಿದೆ. ಉತ್ತಮ ಟಿಆರ್ಪಿ ಗಳಿಸುವ ಲೆಕ್ಕಚಾರದಲ್ಲಿ ಈ ರೀತಿ ಮಾಡುತ್ತಿರಬಹುದು ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.

ಆದರೆ ಇತ್ತೀಚಿನ ವಾರಗಳಲ್ಲಿ ಟಾಸ್ಕ್ ಹಾಗೂ ಮನರಂಜನೆ ಬಿಟ್ಟು ಕೇವಲ ಸಂಭಾಷಣೆಗಳಿಗೆ ಹೆಚ್ಚು ಮಹತ್ವ ನೀಡುತ್ತಿರುವ ಕಾರಣ ಬಿಗ್ ಬಾಸ್ ಮನೆಯಲ್ಲಿ ಪ್ರೇಕ್ಷಕರು ಹೆಚ್ಚಿನ ಆಸಕ್ತಿಯನ್ನು ಕಳೆದು ಕೊಂಡಿದ್ದಾರೆ. ಅದರಲ್ಲಿಯೂ ಗೆಲ್ಲುವ ನೆಚ್ಚಿನ ಸ್ಪರ್ಧೆಯಾಗಿ ಕೇಳಿ ಬರುತ್ತಿದ್ದ ಮಂಜು, ದಿವ್ಯ ಸುರೇಶ, ಅರವಿಂದ್ ಹಾಗೂ ದಿವ್ಯ ರವರಂತಹ ಪ್ರಮುಖ ಸ್ಪರ್ಧಿಗಳು ಹೆಸರು ಇದೀಗ ಗೆಲ್ಲುವ ನೆಚ್ಚಿನ ಸ್ಪರ್ಧಿಗಳ ಸಾಲಿನಲ್ಲಿ ಕಣ್ಮರೆಯಾಗುತ್ತಿವೆ.

ಇದೇ ಸಮಯದಲ್ಲಿ ಬಿಗ್ ಬಾಸ್ ಮನೆಗೆ ಹೋದ ಕ್ಷಣದಿಂದಲೂ ಕೂಡ ಒಂದೇ ರೀತಿ ತಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಂಡು, ಹಾಗೆಂದು ಬಹಳ ಸೈಲೆಂಟಾಗಿ ಇರದೆ ಎಷ್ಟು ಬೇಕು ಅಷ್ಟು ಮಾತನಾಡುತ್ತಾ ಪ್ರೇಕ್ಷಕರಿಗೆ ಸಾಧ್ಯವಾದಷ್ಟು ಮನರಂಜನೆ ನೀಡುತ್ತಾ ಹಾಗೂ ಇತ್ತೀಚಿನ ವಾರಗಳಲ್ಲಿ ಟಾಸ್ಕ್ ಗಳಲ್ಲಿಯೂ ಕೂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವೈಷ್ಣವಿ ರವರು ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಮೊದಲನೇ ಸ್ಥಾನಕ್ಕೆ ಏರಿದ್ದಾರೆ ಎಂದರೆ ತಪ್ಪಾಗಲಾರದು, ಪ್ರೇಕ್ಷಕರು ವೈಷ್ಣವಿ ರವರನ್ನು ಮೆಚ್ಚಿಕೊಂಡಿದ್ದು ವೈಷ್ಣವಿ ರವರು ಗೆದ್ದರೂ ಕೂಡ ಯಾರು ಆಶ್ಚರ್ಯಪಡಬೇಕಾಗಿಲ್ಲ.

Comments are closed.