Neer Dose Karnataka
Take a fresh look at your lifestyle.

ಸ್ಟೇಜ್ ಮೇಲೆಕರಿಸಿ ಮಾತನಾಡದೆ ಇದ್ದರೂ ಕೂಡ ವಿಶ್ವನಾಥ್ ರವರಿಗೆ ಭರ್ಜರಿ ಸಿಹಿಸುದ್ದಿ ನೀಡಿದ ಸುದೀಪ್ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅನಾರೋಗ್ಯದ ಕಾರಣ ಈ ಬಾರಿ ಕಿಚ್ಚ ಸುದೀಪ್ ರವರು ಇದೇ ಮೊಟ್ಟ ಮೊದಲ ಬಾರಿಗೆ ಬಿಗ್ ಬಾಸ್ ಕಾರ್ಯಕ್ರಮ ನಡೆಸಿ ಕೊಡಲು ಸಾಧ್ಯವಾಗಲಿಲ್ಲ ಇದು ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿಸಿದೆ. ಆದರೆ ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರು ಸ್ಪರ್ಧಿಗಳು ಕೂಡ ತಾವು ಎಲಿಮಿನೇಟ್ ಆದಾಗ ಕಿಚ್ಚ ಸುದೀಪ್ ರವರ ಜೊತೆ ವೇದಿಕೆ ಹಂಚಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ.

ಮನೆಯಿಂದ ಹೊರ ಬರುವ ಸಂದರ್ಭದಲ್ಲಿ ಮನೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಾಗೂ ಮನೆಯ ಸದಸ್ಯರ ಜೊತೆಗಿನ ಎಲ್ಲಾ ಪ್ರೀತಿಯ ಅನುಭವಗಳನ್ನು ಹಂಚಿಕೊಂಡು ತಮ್ಮ ಜರ್ನಿ ಎನ್ನು ತಾವೇ ಮೆಲುಕು ಹಾಕುವ ಸುಂದರ ಕ್ಷಣಗಳನ್ನು ಸುದೀಪ್ ಅವರ ಜೊತೆ ವೇದಿಕೆ ಮೇಲೆ ಹಂಚಿಕೊಳ್ಳುವುದು ಎಲ್ಲರಿಗೂ ಒಂದು ರೀತಿಯ ಕನಸಾಗಿರುತ್ತದೆ. ತಾವು ಮನೆಯಲ್ಲಿ ಕಳೆದಿರುವ ಸಂಪೂರ್ಣ ದಿವಸಗಳನ್ನು ಕೇವಲ ಕೆಲವೇ ಕೆಲವು ನಿಮಿಷಗಳಲ್ಲಿ ಮೆಲುಕು ಹಾಕುವ ಆ ಸಂತೋಷದ ಕ್ಷಣಗಳು ನಿಜಕ್ಕೂ ಬಹಳ ಅದ್ಭುತವಾಗಿರುತ್ತವೆ ಅದೇ ಕಾರಣಕ್ಕಾಗಿ ಎಲಿಮಿನೇಷನ್ ಮುಗಿದರೂ ಕೂಡ ಪ್ರೇಕ್ಷಕರು ಕೂಡ ತಪ್ಪದೆ ಈ ಬೀಳ್ಕೊಡುಗೆಯ ಕಾರ್ಯಕ್ರಮವನ್ನು ನೋಡುತ್ತಿರುತ್ತಾರೆ. ಯಾಕೆಂದರೆ ಇಷ್ಟು ದಿವಸ ತಾವು ಮನೆಯಲ್ಲಿ ನೋಡಿದ ಸ್ಪರ್ಧಿ ಸುದೀಪ್ ರವರ ಜೊತೆ ಯಾವ ರೀತಿ ತಮ್ಮ ಅಭಿಪ್ರಾಯಗಳನ್ನು ಹೊರಹಾಕಬಹುದು ಎಂಬ ಆಸಕ್ತಿ ಪ್ರತಿಯೊಬ್ಬ ಪ್ರೇಕ್ಷಕರಿಗೂ ಇರುತ್ತದೆ.

ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಸುದೀಪ್ ರವರು ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡದೆ ಇರುವ ಕಾರಣ ವಿಶ್ವನಾಥ್ ಅವರು ಮನೆಯಿಂದ ಹೊರ ಹೋದಾಗ ಅವರನ್ನು ವೇದಿಕೆಯ ಮೇಲೆ ಸ್ವಾಗತಿಸಲು ಕಿಚ್ಚ ಸುದೀಪ್ ರವರು ಇರಲಿಲ್ಲ. ಹಲವಾರು ಸ್ಪರ್ಧಿಗಳಿಗೆ ಬೀಳ್ಕೊಡುಗೆಯ ಸಮಾರಂಭ ಸುದೀಪ್ ರವರು ನಡೆಸದೆ ಇದ್ದರೂ ಕೂಡ ಈ ಬಾರಿ ಕೊಂಚ ಏನೋ ಮಿಸ್ ಆದಂತೆ ಕಾಣುತ್ತಿತ್ತು.

ಯಾಕೆಂದರೆ ಸಮಯವಕಾಶಗಳಿಂದ ಸುದೀಪ್ ರವರ ಜೊತೆ ವೇದಿಕೆ ಹಂಚಿಕೊಳ್ಳುವುದು ಹಲವಾರು ಸ್ಪರ್ಧಿಗಳಿಗೆ ಸಾಧ್ಯವಾಗಿಲ್ಲ ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಸುದೀಪ್ ರವರ ಅಲಭ್ಯತೆಯಿಂದ ವಿಶ್ವನಾಥ ಅವರು ಬಿಗ್ ಬಾಸ್ ಮನೆಯಲ್ಲಿ ಹೊರಬರುವಾಗ ವೇದಿಕೆ ಹಂಚಿಕೊಳ್ಳಲು ಅವಕಾಶ ಕಳೆದು ಕೊಂಡಿದ್ದಾರೆ.

ಆದರೆ ಇದೇ ಸಂದರ್ಭದಲ್ಲಿ ತಮ್ಮ ಜವಾಬ್ದಾರಿಯನ್ನು ಕಿಚ್ಚ ಸುದೀಪ್ ರವರು ಮರೆತಿಲ್ಲ ಹೌದು ಸ್ನೇಹಿತರೇ ಪ್ರತಿಯೊಬ್ಬ ಸ್ಪರ್ಧೆಗೂ ಒಂದು ರೀತಿಯ ಕನಸಾಗಿರುವ ಬೀಳ್ಕೊಡುಗೆಯ ಸಮಾರಂಭದ ಜವಾಬ್ದಾರಿಯನ್ನು ಹೊತ್ತಿ ಕೊಂಡಿರುವ ಕಿಚ್ಚ ಸುದೀಪ್ ರವರು ತಮ್ಮ ಜವಾಬ್ದಾರಿಯನ್ನು ಮರೆಯದೆ ವಿಶ್ವನಾಥ್ ಅವರು ಮನೆಯಿಂದ ಹೊರ ಬಂದ ತಕ್ಷಣ ನೇರವಾಗಿ ವಿಶ್ವನಾಥ್ ಅವರಿಗೆ ಕಾಲ್ ಮಾಡಿ ಸಿಹಿಸುದ್ದಿ ನೀಡಿದ್ದಾರೆ.

ಹೌದು ಸ್ನೇಹಿತರೇ ಇದೀಗ ಬಿಗ್ ಬಾಸ್ ಕಾರ್ಯಕ್ರಮ ದಲ್ಲಿ ಎಲಿಮಿನೇಷನ್ ಪ್ರಕ್ರಿಯೆಯಿಂದ ಹೊರ ಬಂದಿರುವ ವಿಶ್ವನಾಥ್ ಅವರಿಗೆ ಕರೆ ಮಾಡಿರುವ ಸುದೀಪ್ ರವರು ನಿಮಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅವಕಾಶ ಸಿಗಲಿ ಎಂದು ನಾನು ಹಾರೈಸುತ್ತೇನೆ, ವೇದಿಕೆ ಹಂಚಿಕೊಳ್ಳಲು ಸಾಧ್ಯವಾಗಿಲ್ಲ ಆದರೆ ಖಂಡಿತ ನಿಮಗೆ ಮುಂದಿನ ದಿನಗಳಲ್ಲಿ ಭೇಟಿಯಾಗುತ್ತೇನೆ ಹಾಗೂ ನನ್ನ ಮುಂದಿನ ಸಿನಿಮಾಗಳಲ್ಲಿ ಸಾಧ್ಯವಾದಷ್ಟು ನಿಮಗೆ ಮಾಡುವ ಅವಕಾಶಗಳನ್ನು ನೀಡುವ ಪ್ರಯತ್ನವನ್ನು ನಾನು ಮಾಡುತ್ತೇನೆ ನಿಮ್ಮ ನಿಜವಾದ ಕಲೆ ವ್ಯರ್ಥವಾಗಬಾರದು ಎಂದು ಸ್ಪರ್ಧೆ ಭರವಸೆಯ ಮಾತುಗಳನ್ನು ಹೇಳಿದ್ದಾರೆ.

Comments are closed.