Neer Dose Karnataka
Take a fresh look at your lifestyle.

ಕೊನೆಗೂ ಬಯಲಾಯಿತು ಮನೆಗಿಂತ ರಾಜೀವ್ ಹೊರ ಬರಲು ಕಾರಣ. ಏನು ಗೊತ್ತಾ ! ಶಾಕಿಂಗ್ ವಿಷಯ ಇಲ್ಲಿದೆ ನೋಡಿ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಆರಂಭವಾದ ಮೊದಲ ದಿನದಿಂದಲೂ ಕೂಡ ಫೈನಲ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ ಎನ್ನಲಾಗುತ್ತಿದ್ದ ಸ್ಪರ್ದಿ ರಾಜೀವ್ ರವರು ಹೊರ ಬಂದಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ರಾಜೀವ್ ರವರು ಹಾಗೂ ಪ್ರಶಾಂತ ರವರು ಕೊನೆಯದಾಗಿ ಉಳಿದುಕೊಂಡಿದ್ದರು.

ಮೊದಲಿಗೆ ಮಂಜು ಪಾವಗಡ, ದಿವ್ಯ ಸುರೇಶ್ ಹಾಗೂ ರಘು ರವರು ಸೇವ್ ಆಗುವ ಮೂಲಕ ಮನೆಯಲ್ಲೇ ಉಳಿದು ಕೊಂಡಿದ್ದರು. ಕೊನೆಯದಾಗಿ ಪ್ರಶಾಂತ್ ಹಾಗೂ ರಾಜೀವ್ ರವರು ಉಳಿದು ಕೊಂಡಿರುವ ಸಮಯದಲ್ಲಿ ಮನೆಯಲ್ಲಿ ನಡೆದ ಎಲ್ಲ ಘಟನೆಗಳನ್ನು ಸೇರಿಸಿ ಭೇಟಿ ಮಾಡಿ ಟಿವಿಯಲ್ಲಿ ರಾಜೀವ್ ರವರ ಮರೆಯಲಾಗದ ಕ್ಷಣಗಳನ್ನು ಪ್ಲೇ ಮಾಡುವ ಮೂಲಕ ರಾಜೀವ್ ರವರನ್ನು ಮನೆಯಿಂದ ಹೊರ ಕಳುಹಿಸಲಾಗಿದೆ.

ಇದೇನಿದು ಫೈನಲ್ ಐದು ಜನರ ಪೈಕಿ ಒಬ್ಬರು ಇರುತ್ತಾರೆ ಎನ್ನಲಾಗಿದ್ದ ಸ್ಪರ್ದಿ ಇದ್ದಕ್ಕಿದ್ದ ಹಾಗೆ ನಾಮಿನೇಟ್ ಆಗಿ ತಮಗೆ ಗೋಲ್ಡನ್ ಪಾಸ್ ಬಳಸುವ ಅವಕಾಶ ಇದ್ದರೂ ಕೂಡ ಬಳಸದೆ ಮನೆಯಿಂದ ಹೊರಗೆ ಬಂದರು ಎಂದು ಎಲ್ಲರಿಗೂ ಆಶ್ಚರ್ಯ ಮೂಡಿದೆ. ಆದರೆ ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾಜೀವ್ ರವರು ಮನೆಯಿಂದ ಹೊರಬರಲು ಹಲವಾರು ಕಾರಣಗಳನ್ನು ನಾವು ಕೇಳುತ್ತಿದ್ದೇವೆ ಪ್ರತಿಯೊಬ್ಬರೂ ಕೂಡ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ಕಾರಣ ನಾವು ಪ್ರಮುಖವಾಗಿ ಹೆಚ್ಚು ಬಾರಿ ಕೇಳಿಬಂದಿರುವ ಅಭಿಪ್ರಾಯಗಳನ್ನು ನಿಮಗೆ ತಿಳಿಸುತ್ತಿದ್ದೇವೆ.

ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದು ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಅದರಲ್ಲಿಯೂ ಕಂಡುಬಂದ ಪ್ರಮುಖ ಕಾರಣಗಳು ಏನು ಎಂಬುದನ್ನು ನಾವು ನೋಡುವುದಾದರೆ ಇದಕ್ಕೆಲ್ಲ ಕಾರಣ ಕೇವಲ ರಾಜೀವ್ ರವರು ಒಮ್ಮೆ ಕ್ರೀಡಾಸ್ಪೂರ್ತಿ ಮರೆತಿದ್ದು ಎಂಬುದು ತಿಳಿದು ಬಂದಿದೆ, ಮೊದಲಿನಿಂದಲೂ ತಮಗಾಗಿ ಆಟ ಆಡುತ್ತಿದ್ದಾರೆ ಹಾಗೂ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದರೂ ಕೂಡ ರಾಜೀವ್ ರವರು ಸೋಲುತ್ತಾರೆ ಎಂದು ಎಲ್ಲಿಯೂ ಕೂಡ ಅಭಿಪ್ರಾಯಗಳು ಕೇಳಿ ಬಂದಿರಲಿಲ್ಲ,

ಆದರೆ ಇದ್ದಕ್ಕಿದ್ದ ಹಾಗೆ ರಾಜೀವ್ ರವರು ಗೋಲ್ಡನ್ ಪಾಸ್ ವಿಚಾರದಲ್ಲಿ ಶಮಂತ್ ರವರ ಜೊತೆ ನಡೆದುಕೊಂಡ ರೀತಿ ಹಾಗೂ ಕೊನೆಯಲ್ಲಿ ಶುಭ ಪೂಂಜಾ ರವರ ಜೊತೆ ಉಳಿದು ಕೊಂಡಾಗ ಶುಭ ಪೂಂಜಾ ರವರನ್ನು ಮೀರಿಸಿ ಓಡದೇ ಇರುವುದು ಅಭಿಮಾನಿಗಳಿಗೆ ಯಾಕೋ ಇಷ್ಟವಾಗಿಲ್ಲ, ಆದರೆ ಇಲ್ಲಿ ರಾಜೀವ್ ರವರು ಹಾಗೂ ಶುಭಾ ಪೂಂಜಾ ರವರು ಈ ಕುರಿತು ಮೊದಲೇ ಮಾತನಾಡಿ ಕೊಂಡಿದ್ದರು ಎಂಬ ಸತ್ಯ ಕೇವಲ ನೆನ್ನೆ ಮಾತ್ರ ಜನರಿಗೆ ತಿಳಿದಿದೆ, ‌ ಆದರೆ ನೆನ್ನೆ ತಿಳಿಯುವ ಸಮಯಕ್ಕೆ ಆಗಾಗಲೇ ಪ್ರೇಕ್ಷಕರು ತಮ್ಮ ಅಭಿಪ್ರಾಯವನ್ನು ಎಸ್ಎಮ್ಎಸ್ ಹಾಗೂ ವೂಟ್ ಅಪ್ಲಿಕೇಶನ್ ನ ಮೂಲಕ ವ್ಯಕ್ತಪಡಿಸಿದ ಕಾರಣ, ರಾಜೀವ್ ರವರು ಜನರ ಅಭಿಪ್ರಾಯದಂತೆ ಇದೀಗ ಮನೆಯಿಂದ ಹೊರ ಬಂದಿದ್ದಾರೆ,

Comments are closed.