Neer Dose Karnataka
Take a fresh look at your lifestyle.

ಗಟ್ಟಿಮೇಳ ಧಾರಾವಾಹಿಗೆ ಕಂಡು ಕೇಳರಿಯದ ರೀತಿಯಲ್ಲಿ ಶಾಕ್ ನೀಡಿದ ಪ್ರೇಕ್ಷಕರು. ಗಟ್ಟಿಮೇಳ ಯಾರು ನೋಡುವುದಿಲ್ಲವೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹಲವಾರು ತಿಂಗಳುಗಳಿಂದ ಪ್ರೇಕ್ಷಕರನ್ನು ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿರುವ ಗಟ್ಟಿಮೇಳ ಧಾರವಾಹಿ ಗೆ ಇದೀಗ ಹೊಸ ರೀತಿಯಲ್ಲಿ ಹಾಗೂ ಊಹಿಸದ ರೀತಿಯಲ್ಲಿ ಸಂಕಷ್ಟ ಎದುರಾಗಿದೆ. ಹೌದು ಸ್ನೇಹಿತರೇ ಕನ್ನಡ ಕಿರು ತೆರೆಯಲ್ಲಿ ಬಹಳ ಅತ್ಯುತ್ತಮವಾಗಿ ಮೂಡಿ ಬರುತ್ತಿರುವ ಧಾರವಾಹಿಗಳಲ್ಲಿ ಒಂದಾಗಿರುವ ಗಟ್ಟಿಮೇಳ ದಾರವಾಹಿ ದಿನೇ ದಿನೇ ಪ್ರೇಕ್ಷಕರನ್ನು ಹೆಚ್ಚಿಸಿ ಕೊಳ್ಳುತ್ತಿದೆ.

ಹೀಗೆ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುವುದು ಯಾವುದೇ ಸುಲಭವಾದ ಕೆಲಸವಲ್ಲ ಯಾಕೆಂದರೆ ಪ್ರತಿ ಕ್ಷಣ ಕೂಡ ಪ್ರತಿ ಎಪಿಸೋಡಿನಲ್ಲಿ ಬಹಳ ಉತ್ತಮ ರೀತಿಯಲ್ಲಿ ನಟನೆ ಮಾಡಿ ಕತೆಯನ್ನು ಬಹಳ ಸುಂದರವಾಗಿ ನಿರ್ಮಾಣ ಮಾಡಿದರೆ ಮಾತ್ರ ಪ್ರೇಕ್ಷಕರು ಧಾರವಾಹಿಯನ್ನು ಇಷ್ಟಪಡುತ್ತಾರೆ. ಹೀಗೆ ಹಲವಾರು ತಿಂಗಳುಗಳಿಂದ ಪ್ರತಿ ದಿನವೂ ಕೂಡ ಶ್ರಮವಹಿಸಿ ಧಾರವಾಹಿ ನಿರ್ಮಾಣ ಮಾಡಿ ಪಡೆದು ಕೊಂಡ ಪ್ರೇಕ್ಷಕರು ಒಮ್ಮೆಲೆ ನದಿಯಲ್ಲಿ ಹೋಮ ಮಾಡಿದಂತಾಗಿದೆ.

ಹೌದು ಸ್ನೇಹಿತರೇ ನಿಮಗೆಲ್ಲ ಗೊತ್ತಿರುವಂತೆ ಗಟ್ಟಿಮೇಳ ಧಾರವಾಹಿಯ ನಟರಾಗಿರುವ ಪವನ್ ರವರು ಕೋರೋಣ ಕುರಿತಾದ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಯಾವುದೇ ನಾಯಕರ ಕುರಿತು ಮಾತನಾಡಿದ್ದಾರೆ ಅದನ್ನು ಯಾರೂ ಅಷ್ಟಾಗಿ ಗಮನಿಸುತ್ತಿರಲಿಲ್ಲ ಆದರೆ ಪವನ ರವರು ರಾಮ ಮಂದಿರದ ಕುರಿತು ಮಾತನಾಡಿದ್ದು ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ, ರಾಮ ಮಂದಿರವನ್ನು ಭಕ್ತರು ನೀಡಿದ ದೇಣಿಗೆಯಿಂದ ಕಟ್ಟಲಾಗುತ್ತಿದೆ ಅದರ ಕುರಿತು ಮಾತನಾಡುವ ಅಥವಾ ಅದರ ಹಣದ ಕುರಿತು ಪ್ರಶ್ನಿಸುವುದು ಸರಿ ಇಲ್ಲ, ಯಾರನ್ನು ಹಣ ನೀಡಲೇಬೇಕು ಎಂದು ಕಂಡಿಶನ್ ಹಾಕಿ ಹಣ ಪಡೆದುಕೊಂಡಿಲ್ಲ ಸುಖಾಸುಮ್ಮನೆ ಕೋರೋಣ ವಿಚಾರಕ್ಕೆ ರಾಮ ಮಂದಿರವನ್ನು ಎಳೆದು ತಂದಿರುವುದು ನಿಜಕ್ಕೂ ಬೇಸರದ ಸಂಗತಿ ಈ ಕೂಡಲೇ ಗಟ್ಟಿಮೇಳ ಧಾರವಾಹಿ ತಂಡ ಪವನ್ ಕುಮಾರ್ ರವರನ್ನು ಧಾರವಾಹಿ ಇಂದ ಕೈಬಿಡಬೇಕು ಇಲ್ಲವಾದಲ್ಲಿ ಧಾರವಾಹಿ ಕಥೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಅಭಿಯಾನ ಆರಂಭಿಸಿದ್ದಾರೆ.

Comments are closed.