Neer Dose Karnataka
Take a fresh look at your lifestyle.

ಈ ವಾರ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಗೊತ್ತಾ?? ಪ್ರೇಕ್ಷಕರ ಅಭಿಪ್ರಾಯ ಇಂತಿದೆ

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಿ ವಾರವೂ ಕೂಡ ಬಹುತೇಕ ಸಮಯದಲ್ಲಿ ಒಬ್ಬರಲ್ಲ ಒಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗುತ್ತಾರೆ ಆದರೆ ಕೆಲವು ವಾರಗಳಲ್ಲಿ ಮಹತ್ವದ ತಿರುವುಗಳನ್ನು ನೀಡಲು ಯಾರನ್ನು ಹೊರಗೆ ಕಳುಹಿಸುವುದಿಲ್ಲ ಆದರೆ ನೆನ್ನೆ ಅಂದರೆ ಭಾನುವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗದ ಕಾರಣ ಈ ವಾರ ಖಂಡಿತ ಮನೆಯಿಂದ ಒಬ್ಬರು ಹೋಗುವುದು ಖಚಿತ. ತಿರುವು ನೀಡಲು ಬಯಸಿದರೆ ಡಬಲ್ ಅಂದರೆ ಇಬ್ಬರು ಸ್ಪರ್ಧಿಗಳು ಕೂಡ ಹೊರ ಹೋಗುವ ಸಾಧ್ಯತೆ ಇದೆ.

ಹಾಗಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ಕೇಳಿ ಬರುತ್ತಿರುವಂತೆ ಯಾವ ಸ್ಪರ್ಧಿಗಳು ಮನೆಯಿಂದ ಹೊರ ಹೋಗಬಹುದು ಎಂಬುದನ್ನು ತಿಳಿದು ಕೊಳ್ಳುವ ಕುತೂಹಲ ನಿಮಗಿದ್ದರೆ ಇಲ್ಲಿದೆ ನೋಡಿ ಉತ್ತರ. ಸ್ನೇಹಿತರೆ ನಾಮಿನೇಟ್ ಆಗಿರುವ ಮಂಜು ಅರವಿಂದ್ ಪ್ರಶಾಂತ್ ದಿವ್ಯ ಸುರೇಶ್ ಹಾಗೂ ಪ್ರಿಯಾಂಕಾ ರವರಲ್ಲಿ ಕಳೆದ ವಾರದ ಲೆಕ್ಕಾಚಾರಗಳಿಗೆ ಹೋಲಿಸಿಕೊಂಡರೆ ಪ್ರಶಾಂತ ಸಂಭರ್ಗಿ ಹಾಗೂ ಪ್ರಿಯಾಂಕಾ ಅವರು ಬಹುತೇಕ ಸೇಫ್ ಆಗುತ್ತಾರೆ.

ಯಾಕೆಂದರೆ ಇದೀಗ ಕಳೆದ ವಾರ ಅರವಿಂದ್ ರವರು ಕ್ರೀಡಾಸ್ಪೂರ್ತಿ ಮರೆತದ್ದು ಮಂಜುರವರು ಅರವಿಂದ್ ಅವರಿಗೆ ಬೆಂಬಲ ನೀಡಲು ತೆಗೆದುಕೊಂಡ ನಿರ್ಧಾರ ಹಾಗೂ ಮೊಟ್ಟೆಯ ವಿಚಾರ ಸೇರಿದಂತೆ ಬಹುತೇಕ ವಿಚಾರಗಳಲ್ಲಿ ಪ್ರಶಾಂತ್ ಸಂಭರ್ಗಿ ರವರ ಪರವಾಗಿ ಜನರ ಸಿಂಪತಿ ಇದೆ. ಇನ್ನು ಪ್ರಿಯಾಂಕಾರ ಬಗ್ಗೆ ಕೂಡ ಸಾಕಷ್ಟು ಬೆಂಬಲದ ಮಾತುಗಳು ಕೇಳಿ ಬಂದಿವೆ.

ಆದರೆ ಇವರನ್ನು ಹೊರತುಪಡಿಸಿದರೆ ಮಂಜು ದಿವ್ಯ ಸುರೇಶ್ ಹಾಗೂ ಅರವಿಂದ್ ರವರು ಮೂರು ಜನ ಕೂಡ ಬಿಗ್ ಬಾಸ್ ಫೈನಲ್ ನಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಎಂದು ಎನಿಸಿಕೊಂಡಿದ್ದಾರೆ. ಆದರೆ ಈ ವಾರ ದಿವ್ಯ ಸುರೇಶ್ ರವರು ಹೆಚ್ಚಿನ ಸದ್ದು ಮಾಡಿದ ಕಾರಣ ಪ್ರೇಕ್ಷಕರು ಇವರ ಕುರಿತು ಗಮನ ಕೂಡ ಹರಿಸುವುದಿಲ್ಲ ಎನ್ನಲಾಗಿದೆ. ಇನ್ನುಳಿದವರು ಮಂಜು ಹಾಗೂ ಅರವಿಂದ,

ಇವರಿಬ್ಬರು ಹೋಗಲು ಅಸಾಧ್ಯ ಎಂದು ನಿಮಗೆ ಅನಿಸಬಹುದು. ಆದರೆ ರಾಜೀವ್ ರವರು ಕೇವಲ ಒಂದು ಟಾಸ್ಕ ನಲ್ಲಿ ಅಂದರೆ ಗೋಲ್ಡನ್ ಪಾಸ್ ಟಾಸ್ಕ್ ನಲ್ಲಿ ನಡೆದುಕೊಂಡ ರೀತಿ ಅದೇ ಮುಂದಿನ ವಾರ ಅವರನ್ನು ಮನೆಯಿಂದ ಹೊರ ಹೋಗುವಂತೆ ಮಾಡಿತು. ಈಗಲೂ ಕೂಡ ಬಾಲನ್ನು ತಳ್ಳುವ ಆಟದಲ್ಲಿ ನಡೆದುಕೊಂಡ ರೀತಿಯಿಂದ ಇವರಿಬ್ಬರಲ್ಲಿ ಒಬ್ಬರು ಹೊರಗಡೆ ಬಂದರು ಕೂಡ ಅಚ್ಚರಿಪಡಬೇಕಾಗಿಲ್ಲ. ಇವರಿಬ್ಬರ ನಡುವಿನ ಲೆಕ್ಕಾಚಾರ ನೋಡುವುದಾದರೆ ಮೊದಲಿನಿಂದಲೂ ಮಂಜು ರವರ ಪರವಾಗಿ ಸಾಕಷ್ಟು ಉತ್ತಮ ಅಭಿಪ್ರಾಯ ಇರುವುದರಿಂದ, ಬಹುತೇಕ ಅರವಿಂದ್ ರವರು ಮನೆಯಿಂದ ಹೊರ ಬರುವ ಸಾಧ್ಯತೆ ಹೆಚ್ಚಾಗಿದೆ.

Comments are closed.