Neer Dose Karnataka
Take a fresh look at your lifestyle.

ಮಂಜು ಇಲ್ಲದೆ ಟಾಪ್ 5 ತಲುಪುತ್ತಿದ್ದ ಬಿಗ್ ಬಾಸ್ ಮನೆಯ ಸ್ಪರ್ದಿಗಳು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕಾರ್ಯಕ್ರಮ ಯಾರು ಊಹಿಸದ ರೀತಿಯಲ್ಲಿ ಅರ್ಧಕ್ಕೆ ನಿಂತು ಹೋಗಿರುವ ಕಾರಣ, ಎಲ್ಲಿ ನೋಡಿದರೂ ವಿಜೇತರ ಕುರಿತು ಚರ್ಚೆ ನಡೆಯುತ್ತಿದೆ. ಯಾವ ಸ್ಪರ್ದಿಗಳು ಗೆಲ್ಲುತ್ತಾರೆ ಯಾವ ಸ್ಪರ್ದಿಗಳು ಫೈನಲ್ ತಲುಪುತ್ತಾರೆ ಹೀಗೆ ಪ್ರತಿಯೊಂದು ವಿಚಾರಗಳ ಕುರಿತು ಬಾರಿ ಚರ್ಚೆ ನಡೆಯುತ್ತಿದೆ. ಈ ಚರ್ಚೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಂಡು ತಮ್ಮದೇ ಆದ ನೆಚ್ಚಿನ ಸ್ಪರ್ದಿಯ ಕುರಿತು ಹೆಚ್ಚಿನ ಚರ್ಚೆ ನಡೆಸುತ್ತಿದ್ದಾರೆ ಹಾಗೂ ಕಾರಣಗಳನ್ನು ಕೂಡ ತಿಳಿಸುತ್ತಿದ್ದಾರೆ.

ಇನ್ನು ಈಗಾಗಲೇ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸಂಖ್ಯೆಯಲ್ಲಿ ಚರ್ಚೆಗಳು ಆರಂಭವಾಗಿದೆ. ಇನ್ನು ಇದೇ ಸಮಯದಲ್ಲಿ ಹಲವಾರು ಸ್ಪರ್ದಿಗಳ ಹೆಸರು ಮತ್ತೆ ಮತ್ತೆ ವಿಜೇತರು, ರನ್ನರ್ ಅಪ್ ಹಾಗೂ ಫೈನಲ್ ತಲುಪುವ ಸ್ಪರ್ದಿಗಳು ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನು ಈ ಸಮಯದಲ್ಲಿ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ 8 ರ ಅಗ್ರ ಐದು ಸ್ಪರ್ಧಿಗಳ ಬಗ್ಗೆ ಮಾತನಾಡುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ಕೇಳಿ ಬಂದಂತೆ ಫೈನಲ್ ತಲುಪ ಬಹುದಾದ ಸ್ಪರ್ದಿಗಳು ಯಾರು ಎಂದರೇ ಅರವಿಂದ್ ಕೆಪಿ, ಪ್ರಶಾಂತ್ ಸಾಂಬರ್ಗಿ, ವೈಷ್ಣವ್, ಶಮಂತ್, ಮತ್ತು ದಿವ್ಯಾ ಸುರೇಶ್ ಅಗ್ರ ಸ್ಪರ್ಧಿಗಳಲ್ಲಿದ್ದಾರೆ ಎನ್ನಲಾಗಿದೆ. ಮಂಜು ಪಾವಗಡ ರವರು ಇತ್ತೀಚಿನ ದಿನಗಳಲ್ಲಿ ಆಟವನ್ನು ಮರೆತು, ಕೇವಲ ದಿವ್ಯ ಸುರೇಶ ರವರ ಬಾಲವಾಗಿದ್ದ ಕಾರಣ ಯಾವುದೇ ಕಾರಣಕ್ಕೂ ಇವರು ಫೈನಲ್ ಗೆ ಬರುತ್ತಿರಲಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ. ಯಾಕೆಂದರೆ ಪೈಪೋಟಿ ಎಷ್ಟು ಇದೇ ಎಂದರೇ ಅಷ್ಟು ಅದ್ಭುತವಾಗಿ ಆಟವಾಡುತ್ತಿದ್ದ ರಾಜೀವ್ ರವರು ಕೂಡ ಉಳಿದುಕೊಳ್ಳಲಿಲ್ಲ, ಇನ್ನು ಮಂಜು ರವರು ಯಾವ ಲೆಕ್ಕ ಎಂದಿದ್ದಾರೆ.

Comments are closed.