Neer Dose Karnataka
Take a fresh look at your lifestyle.

‘ಶೃಂಗಾರ ಕಾವ್ಯ’ ನಟ ರಘುವೀರ್ ಅವರ ಜೀವನದಲ್ಲಿ ನಡೆದ ಊಹಿಸಲಾಗದ ಕಹಿ ಘಟನೆಯೇನು ಗೊತ್ತೇ?? ಈಗ ಅವರ ಕುಟುಂಬ ಎಲ್ಲಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಕಾಲದಲ್ಲಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದ ನಟ ಎಂದರೆ ಅದು ರಘುವೀರ್. ಹೌದು ಕನ್ನಡ ಚಿತ್ರರಂಗದಲ್ಲಿ ‘ಶೃಂಗಾರ ಕಾವ್ಯ’ ಹಾಗೂ ‘ಚೈತ್ರದ ಪ್ರೇಮಾಂಜಲಿ’ ಎಂಬ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ರಘುವೀರ್ ಅವರು ಕನ್ನಡದ ಮೇರು ನಟರಲ್ಲಿ ಒಬ್ಬರು. ಕೆಲವೇ ಕೆಲವು ಬೆರಳಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು ಕೂಡ ಅವರ ಅಭಿನಯ ಇಂದಿಗೂ ಕೂಡ ಜನರಿಗೆ ಕಣ್ಣು ಕಟ್ಟಿದಂತಿದೆ.

ಅಂದಿನ ಸಿನಿಮಾ ಜಗತ್ತಿನಲ್ಲಿ ಎಲ್ಲರಿಗೂ ದಂಗಾಗುವಂತೆ ಮಾಡಿದ್ದ ರಘುವೀರ್ ಅವರು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ ಅವರು ಮುಂದಿನ ದಿನಗಳಲ್ಲಿ ಚಿತ್ರರಂಗದಿಂದ ದೂರ ಉಳಿದರು. ಇನ್ನೂ ಅವರು ದೂರವುಳಿಯಲು ಅವರ ವೈಯಕ್ತಿಕ ಕಾರಣ ಇದೆ ಎಂದು ಸಾಕಷ್ಟು ಮೂಲಗಳು ತಿಳಿಸುತ್ತವೆ.

ಹೌದು ಸ್ಟಾರ್ ನಟರು ಮಿಂಚುತ್ತಿದ್ದ ಕಾಲದಲ್ಲಿ ಜನರ ಜನಪ್ರಿಯತೆ ಪಡೆದ ನಟ ರಘುವೀರ್ ಅವರ ವೈಯಕ್ತಿಕ ಜೀವನ ಅಷ್ಟೊಂದು ಹೇಳಿಕೊಳ್ಳುವಂತಿರಲಿಲ್ಲ. ಹೌದು ಶೃಂಗಾರ ಕಾವ್ಯ ಸಿನಿಮಾದಲ್ಲಿ ನಟಿಸಿದ ನಟಿ ಸಿಂಧು ಅವರೊಂದಿಗೆ ಮದುವೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಸಿಂಧು ಅವರು ಇಹಲೋಕ ತ್ಯಜಿಸಿದ್ದು, ಹೀಗೆ ನಾನಾ ಕಾರ್ಯಗಳನ್ನು ಕಾರಣಗಳಿಂದ ಅವರು ಬೇಸತ್ತು ಹೋಗಿದ್ದರು. ಅಷ್ಟೇ ಅಲ್ಲದೆ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದರು ಕೂಡ ಎಲ್ಲರಿಂದ ದೂರ ಉಳಿದು ಬಿಟ್ಟರು.

ನಟ ರಘುವೀರ್ ಅವರು ತಮ್ಮ ಮೊದಲ ಪತ್ನಿ ನಟಿ ಸಿಂಧು ಅವರನ್ನು ಕಳೆದುಕೊಂಡಾಗ ಜೀವನದಲ್ಲಿ ಮತ್ತಷ್ಟು ದುಃಖ ಅನುಭವಿಸಿದರು. ಇದೆಲ್ಲ ಒಂದುಕಡೆಯಾದರೆ ಮತ್ತೊಂದುಕಡೆ ಅವರ ಸಿನಿಮಾಗಳು ಯಶಸ್ಸನ್ನು ಕಾಣಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಟ ರಘುವೀರ್ ಅವರ ಸೋದರತ್ತೆಯ ಮಗಳಾದ ಗೌರಿ ಅವರು ಅವರ ಕೈಹಿಡಿದರು. ಆದರೆ ರಘುವೀರ್ ಅವರು ಜೀವನದಲ್ಲಿ ಬೇಸತ್ತು ಮುಂದಿನ ದಿನಗಳಲ್ಲಿ ಅವರು ದುಃಖದಿಂದ ಹೊರಬರಲಾಗದೆ ಇಹಲೋಕ ತ್ಯಜಿಸಿದರು. ಇದೀಗ ಅವರು ಇಹಲೋಕ ತ್ಯಜಿಸಿ ಸುಮಾರು ಏಳು ವರ್ಷಗಳು ಕಳೆದಿವೆ.

ಇನ್ನು ರಘುವೀರ್ ಅವರು ಶೃಂಗಾರ ಕಾವ್ಯ ಸಿನಿಮಾದಲ್ಲಿ ತಮ್ಮ ಜೊತೆ ನಟಿಸಿದ ನಟಿ ಸಿಂಧು ಅವರನ್ನು ವಿವಾಹವಾದರು. ಈ ದಂಪತಿಗಳಿಗೆ ಒಬ್ಬಳು ಮಗಳಿದ್ದಾಳೆ. ಆದರೆ ತಂದೆ ತಾಯಿಯನ್ನು ಕಳೆದುಕೊಂಡ ಅವರು ಇದೀಗ ಚೆನ್ನೈನಲ್ಲಿ ವಾಸವಾಗಿದ್ದಾರೆ. ಇದೀಗ ಅವರ ಒಂದು ಫೋಟೋ ಬಿಟ್ಟರೆ ಬೇರೆ ಯಾವ ಮಾಹಿತಿಗಳು ಲಭ್ಯವಿಲ್ಲ. ಇನ್ನೂ ರಘುವೀರ್ ಅವರ ಎರಡನೇ ಪತ್ನಿ ಗೌರಿ ಅವರಿಗೆ ಕೂಡ ಒಬ್ಬಳು ಮಗಳಿದ್ದಾಳೆ. ಇದೀಗ ಗೌರಿ ಹಾಗೂ ಅವರ ಮಗಳು ಮೋಕ್ಷ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇನ್ನು ಮೋಕ್ಷ ಅವರು ಎಸ್ ಎಸ್ ಎಲ್ ಸಿ ಮುಗಿಸಿದ್ದು, ತಾಯಿಯೊಂದಿಗೆ ಬೆಂಗಳೂರಿನಲ್ಲಿದ್ದಾರೆ.

Comments are closed.