Neer Dose Karnataka
Take a fresh look at your lifestyle.

ನಟಿ ಹರಿಪ್ರಿಯಾ ಜೊತೆ ಕ್ಲೋಸ್ ಆಗಿ ಕಾಣಿಸಿಕೊಳ್ಳುವ ನಟ ಅಗಸ್ತ್ಯ, ಇಬ್ಬರ ನಡುವಿನ ಕಹಾನಿಯಾ ಕುರಿತು ನಿಮಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ನಟಿ ಹರಿಪ್ರಿಯಾ ಕೂಡ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು ಇಂದಿನ ಯುವ ಮನಸ್ಸುಗಳನ್ನು ಕದ್ದ ಕನ್ನಡದ ಚೆಲುವೆ. ಇನ್ನು ಇವರ ನಿಜವಾದ ಹೆಸರು ಶೃತಿ ಚಂದ್ರಸೇನ. ಆದರೆ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಅವರು ಹರಿಪ್ರಿಯ ಎಂಬ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಇನ್ನೂ ಇಬ್ಬರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ತುಳು ಭಾಷೆಯಲ್ಲಿ ಕೂಡ ನಟಿಸುತ್ತಿದ್ದಾರೆ. ಇವರು ಉಗ್ರಂ, ರನ್ನ, ರಿಕ್ಕಿ, ನೀರ್ ದೋಸೆ, ಭರ್ಜರಿ, ಸಂಹಾರ, ಲೈಫ್ ಜೊತೆ ಒಂದು ಸೆಲ್ಫಿ, ಬೆಲ್ ಬಾಟಮ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಇವರ ಯಶಸ್ಸಿಗೆ ಕಾರಣವಾಗಿದ್ದು ಉಗ್ರಂ ಸಿನಿಮಾ. ಈ ಸಿನಿಮಾದಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದ ಹರಿಪ್ರಿಯಾ ಅವರು ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಟಿಯಾಗಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಅದೆಷ್ಟು ಧಾರವಾಹಿಗಳು ಪ್ರಸಾರವಾಗುತ್ತಿದ್ದು, ಪ್ರತಿಯೊಂದು ಧಾರವಾಹಿಗಳು ಕೂಡ ತನ್ನದೇ ವಿಶಿಷ್ಟವಾದ ಕಥೆಯನ್ನು ಹೊಂದಿದ್ದು ಜನರಿಗೆ ತುಂಬಾ ಇಷ್ಟವಾಗುತ್ತಿವೆ. ಇಂತಹ ಧಾರಾವಾಹಿಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನನ್ನರಸಿ ರಾಧೆ’ ಕೂಡ ಒಂದು. ಹೌದು ಸಾಕಷ್ಟು ವೀಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳುವ ಧಾರಾವಾಹಿ ಕನ್ನಡ ಕಿರುತೆರೆಯ ಟಾಪ್ 10 ಧಾರವಾಹಿಗಳಲ್ಲಿ ಒಂದಾಗಿದೆ.

ಇನ್ನು ಈ ಧಾರವಾಹಿಯ ಸಾಕಷ್ಟು ಪಾತ್ರಗಳು ಜನರಿಗೆ ತುಂಬಾ ಇಷ್ಟವಾಗಿದ್ದು ಅಂತಹ ಪಾತ್ರಗಳಲ್ಲಿ ಅಗಸ್ತ್ಯ ಪಾತ್ರ ಕೂಡ ಒಂದು. ಹೌದು ಅಗಸ್ತ್ಯ ರಾಥೋಡ್ ಎಂಬ ಪಾತ್ರದಲ್ಲಿ ಮಿಂಚುತ್ತಿರುವ ನಟ ಅಭಿನವ್ ವಿಶ್ವನಾಥನ್. ಇನ್ನು ಹರಿಪ್ರಿಯ ಹಾಗೂ ಅಗಸ್ತ್ಯ ಅಲಿಯಾಸ್ ಅಭಿನವ ಅವರು ಸಾಕಷ್ಟು ಕ್ಲೋಸ್ ಆಗಿ ಹಲವರು ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಅಭಿನವ್ ವಿಶ್ವನಾಥನ್ ಅವರು ಹರಿಪ್ರಿಯ ಅವರೊಂದಿಗೆ ಹೊಸ ವರ್ಷದ ಆಚರಣೆಯನ್ನು ಸಂಭ್ರಮಿಸಿದರು.

ಈ ಬೆಳೆ ಇವರಿಬ್ಬರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೌದು ಹರಿಪ್ರಿಯ ಅವರ ಸ್ನೇಹಿತರಾಗಿರುವ ಅಭಿನವ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಷ್ಟೇ ಅಲ್ಲದೆ ಮನೆಯಲ್ಲಿ ಕೇಕ್ ಕಟ್ ಮಾಡುವ ಮೂಲಕ ಪಾರ್ಟಿ ಕೂಡ ಮಾಡಿದ್ದರು. ಇನ್ನು ಜೊತೆಯಾಗಿ ತೆಗೆಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಸುದ್ದಿಗೆ ಕಾರಣರಾಗಿದ್ದಾರೆ.

ಇನ್ನು ಇವರಿಬ್ಬರ ಫೋಟೋಗಳನ್ನು ವೀಕ್ಷಿಸಿದ ಸಾಕಷ್ಟು ಅಭಿಮಾನಿಗಳು ನಿಮಗೆ ಹರಿಪ್ರಿಯ ಏನಾಗಬೇಕು? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂಬಂತಹ ಪ್ರಶ್ನೆಗಳು ಕೂಡ ಹಲವಾರು ಸಂದೇಹಗಳಿಗೆ ಕಾರಣವಾಗಿದೆ. ಆದರೆ ಅಭಿಮಾನಿಗಳು ಕೇಳುವ ಪ್ರಶ್ನೆ ಹಾಗೂ ಸಂದೇಹಗಳಿಗೆ ಅಭಿನವ್ ಆಗಲಿ ಅಥವಾ ಹರಿಪ್ರಿಯಾ ಆಗಲಿ ಯಾವುದೇ ಅಧಿಕೃತವಾದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇನ್ನು ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳಿಗೆ ಇವರಿಬ್ಬರಲ್ಲಿ ಒಬ್ಬರು ಉತ್ತರಿಸಬೇಕಾಗಿದೆ. ಆದರೆ ಇದುವರೆಗೂ ಯಾರೋ ಏನೂ ಹೇಳಿಕೊಂಡಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಈ ಬಗ್ಗೆ ಅವರು ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.