Neer Dose Karnataka
Take a fresh look at your lifestyle.

ಇದ್ದಕ್ಕಿದ್ದಂತೆ ಯಶ್ ಗೆ ಫೋನ್ ಮಾಡಿದ ಡಿ ಬಾಸ್ ದರ್ಶನ ರವರ ಮಾತಿಗೆ ಯಶ್ ಉತ್ತರ ನೀಡಿದ್ದೆಗೆ ಗೊತ್ತಾ?? ಸಿಹಿ ಸುದ್ದಿ.

ನಮಸ್ಕಾರ ಸ್ನೇಹಿತರೇ ಈ ಮಹಾಮಾರಿ ಈಗಾಗಲೇ ದೇಶದ ಅರ್ಥ ವ್ಯವಸ್ಥೆಯ ಜೊತೆಗೆ ಜನರ ಜನಜೀವನವನ್ನು ಕೂಡ ಅಸ್ತವ್ಯಸ್ತ ಮಾಡಿರುವುದು ನಿಮ್ಮ ಕಣ್ಣೆದುರಿಗೆ ಜೀವಂತವಾಗಿದೆ. ಈಗ ಪ್ರತ್ಯೇಕವಾಗಿ ಹೋಲಿಸುವುದಾದರೆ ಕನ್ನಡ ಚಿತ್ರರಂಗ ಕೂಡ ಇದರ ಪರಿಣಾಮಕ್ಕೆ ತತ್ತರಿಸಿದೆ. ಕನ್ನಡದ ಚಿತ್ರಂಗದ ಸ್ಟಾರ್ ನಟರು ಈಗಾಗಲೇ ಹಲವಾರು ಜನರಿಗೆ ಸಹಾಯ ಮಾಡುವುದರ ಮೂಲಕ ಈ ಕಷ್ಟಕಾಲದಲ್ಲಿ ಬಡಕುಟುಂಬಗಳ ಜೀವನದ ವ್ಯವಸ್ಥೆಗೆ ಸಹಾಯಕರಾಗಿದ್ದಾರೆ.

ಆದರೆ ಈಗ ನಾವು ಹೇಳಲು ಹೊರಟಿರುವುದು ಕನ್ನಡದ ನಟರೊಬ್ಬರು ತಮ್ಮ ಸಂಪಾದನೆಯ ಬಹುದೊಡ್ಡ ಮೊತ್ತವನ್ನು ಕನ್ನಡ ಚಿತ್ರರಂಗದ ಕಾರ್ಮಿಕ ಕುಟುಂಬಕ್ಕೆ ಮೀಸಲಿಟ್ಟಿರುವುದು. ಹೌದು ನಾವು ಮಾತನಾಡುತ್ತಿರುವುದು ನಟ ರಾಕಿಂಗ್ ಸ್ಟಾರ್ ಯಶ್ ಬಗ್ಗೆ. ಕಷ್ಟದಿಂದಲೇ ಯಾರ ಸಹಾಯವಿಲ್ಲದೆ ಚಿತ್ರರಂಗದಲ್ಲಿ ಮೇಲೆದ್ದು ಬಂದು ಈಗ ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ವಿಶ್ವಾದ್ಯಂತ ತನ್ನ ಹೆಸರನ್ನು ಪಸರಿಸಿದ್ದಾರೆ.

ಕೆಜಿಎಫ್ ಇಂದ ಈಗಾಗಲೇ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷಾ ಚಿತ್ರಗಳಲ್ಲಿ ಕೂಡ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡಿರುವ ನಟ ರಾಕಿಂಗ್ ಸ್ಟಾರ್ ಯಶ್. ಹೀಗೆ ಕನ್ನಡ ಚಿತ್ರರಂಗದ ಈ ಕಠಿಣ ಪರಿಸ್ಥಿತಿಯಲ್ಲಿ ಕೈಕಟ್ಟಿ ಕುಳಿತಿರುವುದನ್ನು ನೋಡಿ ಬೇಸರಗೊಂಡು ಕನ್ನಡ ಚಿತ್ರರಂಗದ ಕಾರ್ಮಿಕರ ಕುಟುಂಬಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ರವರು ಕನ್ನಡ ಚಿತ್ರರಂಗದ ಮೂರು ಸಾವಿರ ಕಾರ್ಮಿಕ ಕುಟುಂಬಕ್ಕೆ ತಲಾ 5000 ಅವರ ಖಾತೆಗೆ ನೇರವಾಗಿ ಹಾಕುವ ಮೂಲಕ ಕಷ್ಟದ ಸಂದರ್ಭದಲ್ಲಿ ಅವರ ಬಾಳಿಗೆ ನೆರವಾಗಿದ್ದಾರೆ.

3000 ಖಾತೆಗಳಿಗೆ ತಲಾ 5000 ಅಂದರೆ ಒಟ್ಟು ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಆದವು. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಒಂದೇ ಬಾರಿಗೆ ಕಠಿಣ ಸಂದರ್ಭದಲ್ಲಿ ನೀಡಿದ ಏಕೈಕ ಕನ್ನಡ ನಟ ಎಂದರೆ ರಾಕಿಂಗ್ ಸ್ಟಾರ್ ಯಶ್. ರಾಕಿಂಗ್ ಸ್ಟಾರ್ ಯಶ್ ರವರ ಸಾಮಾಜಿಕ ಕಳಕಳಿಯುಳ್ಳ ಜನಸೇವೆ ಕೇವಲ ಕನ್ನಡ ಚಿತ್ರರಂಗದ ಗಣ್ಯರಿಂದ ಮಾತ್ರವಲ್ಲದೆ ಪರಭಾಷಾ ಚಿತ್ರ ನಟ ಹಾಗೂ ಗಣ್ಯರಿಂದಲೂ ಮೆಚ್ಚುಗೆ ಹಾಗೂ ಶ್ಲಾಘನೆಯನ್ನು ಪಡೆದಿದೆ. ಈಗ ಯಶ್ ಅವರಿಗೆ ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರ ಕಾಲ್ ಮಾಡಿ ಏನು ಹೇಳಿದ್ದಾರೆ ಗೊತ್ತಾ ಆ ನಟ ಯಾರು ಗೊತ್ತಾ ಹೇಳುತ್ತೇವೆ ಬನ್ನಿ.

ಹೌದು ಕನ್ನಡ ಚಿತ್ರರಂಗದಲ್ಲಿ ದಾನ ಧರ್ಮ ಹಾಗೂ ಜನಸೇವೆ ಹೆಸರುವಾಸಿಯಾದ ನಟ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಯಶ್ ರವರ ಈ ಸಮಾಜಸೇವೆಯನ್ನು ತಿಳಿದ ತಕ್ಷಣವೇ ಕೂಡಲೇ ಯಶ್ ಅವರಿಗೆ ಕರೆ ಮಾಡಿದ ಅಭಿಮಾನಿಗಳ ಪ್ರೀತಿಯ ಡಿ ಬಾಸ್, ನಿಮ್ಮ ಈ ಕಾರ್ಯ ಮೆಚ್ಚುವಂತದ್ದು ಈ ಸಂದರ್ಭದಲ್ಲಿ ಅಸಹಾಯಕರಾಗಿ ಕುಳಿತಿದ್ದ ಅದೆಷ್ಟೋ ಮಂದಿಗೆ ನಿಮ್ಮ ನೆರವು ಅತಿಮುಖ್ಯವಾದದ್ದು. ನಿಮ್ಮ ಈ ಸಹಾಯದಿಂದ ಇಂದು ನಗುನಗುತ್ತ ಜೀವಿಸುತ್ತಿರುವ ಕುಟುಂಬಗಳ ಆಶೀರ್ವಾದ ನಿಮ್ಮ ಮೇಲೆ ಖಂಡಿತ ಇರುತ್ತದೆ ಎಂದು ಫೋನ್ ಮಾಡಿ ಹೇಳಿದರು.

ಇದಕ್ಕೆ ಉತ್ತರಿಸಿದ ರಾಕಿಂಗ್ ಸ್ಟಾರ್ ಯಶ್, ಈ ತರಹದ ಕಾರ್ಯಗಳೆಲ್ಲಾ ನಾವು ನಿಮ್ಮಿಂದ ನೋಡಿಯೇ ಕಲಿತಿರುವುದು. ಇಂತಹ ಜನ ಸೇವೆಗಳಿಗೆ ನೀವೇ ನಮಗೆ ಸ್ಫೂರ್ತಿ ಎಂದು ಹೇಳಿದರು. ರಾಕಿಂಗ್ ಸ್ಟಾರ್ ಯಶ್ ಹಾಗೂ ದರ್ಶನ್ ರವರನ್ನು ಕನ್ನಡ ಚಿತ್ರರಂಗದ ಜೋಡೆತ್ತು ಎಂದು ಹೇಳುವುದು ರೂಢಿ. ಇಂದು ಜನರ ಸೇವೆಗೆ ಕೂಡ ಇಬ್ಬರು ಜೋಡೆತ್ತುಗಳು ಒಂದಾಗಿ ಜನಸೇವೆ ಮಾಡುತ್ತಿರುವುದು ವಿಶೇಷ. ಇವರಿಬ್ಬರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಸಾಮಾನ್ಯವಾಗಿ ತಿಳಿಸುವ ಮೂಲಕ ಇವರಿಬ್ಬರ ಸ್ನೇಹ ಹೀಗೆ ಮುಂದುವರಿಯಲಿ ಎಂದು ಆಶಿಸೋಣ.

Comments are closed.