Neer Dose Karnataka
Take a fresh look at your lifestyle.

ಮೊಟ್ಟ ಮೊದಲ ಬಾರಿಗೆ ಅರವಿಂದ್ ರವರಿಗೆ ಪರೋಕ್ಷ ಚಳಿ ಬಿಡಿಸಿದ ಸುದೀಪ್, ಖಡಕ್ ನಿರ್ಧಾರ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಅರವಿಂದ್ ರವರು ಮೊದಲನೇ ಇನ್ನಿಂಗ್ಸ್ ನಲ್ಲಿ ಅದ್ಭುತ ರೀತಿಯಲ್ಲಿ ಟಾಸ್ಕ್ ಗಳನ್ನು ಗೆಲ್ಲುವ ಮೂಲಕ ಬಹುತೇಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅವರು ಆಟವಾಡುತ್ತಿದ್ದ ರೀತಿಯನ್ನು ನೋಡಿದ ಪ್ರತಿಯೊಬ್ಬರೂ ಕೂಡ ಇವರು ಫೈನಲ್ ವರೆಗೂ ತಲುಪುತ್ತಾರೆ ಹಾಗೂ ಮನೆಯಲ್ಲಿರುವ ಮಂಜು ರವರಿಗೆ ಬಾರಿ ಪೈಪೋಟಿ ನೀಡುವ ಏಕೈಕ ಸ್ಪರ್ದಿ ಎಂಬ ಮಾತುಗಳು ಕೇಳಿ ಬಂದಿದ್ದವು.

ಅಷ್ಟೇ ಅಲ್ಲದೇ, ಇವರ ಆಟವಷ್ಟೇ ಅಲ್ಲ, ನೇರ ನೇರ ವ್ಯಕ್ತಿತ್ವ ಹಾಗೂ ದಿವ್ಯ ಉರುದುಗರವರ ಜೊತೆ ಯಾವುದೇ ಪ್ರೇಮಿಗಳಿಗಿಂತ ಕಡಿಮೆ ಇಲ್ಲದೆ ರೀತಿ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದ ಅರವಿಂದ್ ರವರು, ನಿಜಕ್ಕೂ ಗೆಲ್ಲುವ ನೆಚ್ಚಿನ ಸ್ಪರ್ದಿಗಳಲ್ಲಿ ಮಂಜು ರವರಿಗೆ ಬಾರಿ ಪೈಪೋಟಿ ನೀಡುತ್ತಿದ್ದರು. ಆದರೆ ಅದ್ಯಾಕೋ ತಿಳಿದಿಲ್ಲ, ಅರವಿಂದ್ ರವರು ಎರಡನೇ ಇನ್ನಿಂಗ್ಸ್ ನಲ್ಲಿ ಅಷ್ಟಾಗಿ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡುತ್ತಿಲ್ಲ. ಸದಾ ಟಾಸ್ಕ್ ಗೆಲ್ಲುವ ಇಚ್ಚೆಯನ್ನು ಹೊಂದಿರುತ್ತಿದ್ದ ಅರವಿಂದ್ ರವರು ಟಾಸ್ಕ್ ಮೇಲೆ ಹೆಚ್ಚಿನ ಗಮನ ನೀಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಇಷ್ಟು ಸಾಲದು ಎಂಬಂತೆ ಅರವಿಂದ್ ರವರು ಅದ್ಯಾಕೋ ತಿಳಿದಿಲ್ಲ, ಕಳಪೆ ಸ್ಪರ್ದಿಯನ್ನು ಹೆಸರಿಸಿ ಎಂದಾಗ ದಿವ್ಯ ಸುರೇಶ ರವರ ಹೆಸರನ್ನು ತೆಗೆದುಕೊಂಡರು. ಕಳೆದ ವಾರ ಉತ್ತಮ ಪ್ರದರ್ಶನ ನೀಡಿದರೂ ಕೂಡ ಹೀಗ್ಯಾಕೆ ಮಾಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ನಡೆಯ ಮೂಲಕ ದಿವ್ಯ ಸುರೇಶ ಹಾಗೂ ಮಂಜು ಅಭಿಮಾನಿಗಳು ಇವರು ಮಂಜು ಹಾಗೂ ದಿವ್ಯ ಸುರೇಶ ರವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಸುದೀಪ್ ರವರು ದಿವ್ಯ ಸುರೇಶ ರವರು ಆಟವಾಡಿದ ರೀತಿ ನೋಡಿ ವಾರದ ಚಪ್ಪಲಿಯನ್ನು ದಿವ್ಯ ಸುರೇಶ ರವರಿಗೆ ನೀಡಿದರು. ಇದರಿಂದ ಅರವಿಂದ್ ರವರ ನಿರ್ಧಾರ ತಪ್ಪು ಎಂಬುದು ಎಲ್ಲರಿಗೂ ಸ್ಪಷ್ಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆ ಆರಂಭವಾಗಿದೆ.

Comments are closed.