Neer Dose Karnataka
Take a fresh look at your lifestyle.

ನಾಮಿನೇಷನ್ ನಲ್ಲಿ ಅರವಿಂದ್ ರವರನ್ನು ಬಿಟ್ಟು ಕ್ಯಾಪ್ಟನ್ ದಿವ್ಯ ರವರು ಶುಭಾರನ್ನು ಸೇವ್ ಮಾಡಿದ್ದೇಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ನಿಧಿ ಸುಬ್ಬಯ್ಯ ರವರು ಮನೆಯಿಂದ ಹೊರ ಬಂದ ಬಳಿಕ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಿ ಮನೆಯ ಪ್ರತಿ ಸ್ಪರ್ದಿಯು ಕೂಡ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ದಿವ್ಯ ರವರು ಹಾಗೂ ಕ್ಯಾಪ್ಟನ್ ಸೇವ್ ಮಾಡಿದ ಶುಭ ಪೂಂಜಾ ರವರನ್ನು ಹೊರತು ಪಡಿಸಿ, ಉಳಿದ ಎಲ್ಲ ಸದಸ್ಯರು ನಾಮಿನೇಟ್ ಆಗಿದ್ದು ಪ್ರೇಕ್ಷಕರು ಕೈ ಹಿಡಿದರೆ ಮಾತ್ರ ಮುಂದಿನ ವಾರದಲ್ಲಿ ಈ ಸ್ಪರ್ದಿಗಳು ಉಳಿಯಲಿದ್ದಾರೆ.

ಇನ್ನು ಇದೇ ಸಮಯದಲ್ಲಿ ನಿನ್ನೆ ಎಲಿಮಿನೇಷನ್ ಗೆ ನಾಮಿನೇಷನ್ ಪ್ರಕ್ರಿಯೆ ನಡೆಯುವಾಗ ಮನೆಯ ಪ್ರತಿ ಸ್ಪರ್ದಿಯು ಕೂಡ ನಾಮಿನೇಟ್ ಆಗಿದ್ದರು. ಅಂದುಕೊಂಡಂತೆ ಪ್ರತಿ ಸ್ಪರ್ದಿಗಳು ಮನೆಯಿಂದ ಹೊರಹಾಕಲು ಇನ್ನಿತರ ಸ್ಪರ್ದಿಗಳನ್ನು ನಾಮಿನೇಟ್ ಮಾಡುವಾಗ ಕೆಲವೊಂದು ಆಯ್ಕೆಗಳು ಹಾಗೂ ಕೆಲವೊಂದು ಕಾರಣಗಳು ಅಚ್ಚರಿ ಮೂಡಿಸಿದವು. ಇನ್ನು ಹೀಗೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಎಲ್ಲ ಸ್ಪರ್ದಿಗಳು ನಾಮಿನೇಟ್ ಆದರು.

ಆಗ ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ದಿವ್ಯ ಉರುದುಗ ರವರು, ತಮ್ಮ ವಿಶೇಷ ಕ್ಯಾಪ್ಟನ್ ಅವಕಾಶವನ್ನು ಬಳಸಿಕೊಂಡು ನಾಮಿನೇಷನ್ ನಿಂದ ಒಬ್ಬ ಸ್ಪರ್ದಿಯನ್ನು ಸೇವ್ ಮಾಡಬಹುದಾಗಿತ್ತು. ಹೌದು ಕ್ಯಾಪ್ಟನ್ ಆದ ಕಾರಣ ದಿವ್ಯ ಉರುದುಗ ರವರು ಒಬ್ಬರು ಸ್ಪರ್ದಿಯನ್ನು ನಾಮಿನೇಷನ್ ಪ್ರಕ್ರಿಯೆಯಿಂದ ಬಚಾವ್ ಮಾಡಬಹುದಾಗಿತ್ತು, ಆಗ ಎಲ್ಲರೂ ಅರವಿಂದ್ ರವರನ್ನು ಸೇವ್ ಮಾಡುತ್ತಾರೆ ಎಂದು ಎಲ್ಲರೂ ಅಂದು ಕೊಂಡಿದ್ದರು. ಆದರೆ ದಿವ್ಯ ರವರು ಶುಭ ಪೂಂಜಾ ರವರನ್ನು ಸೇವ್ ಮಾಡಿದರು. ಯಾಕೆ ಹೀಗೆ ಎಂಬುದನ್ನು ನೋಡುವುದಾದರೆ, ನೇರವಾಗಿ ನಾಮಿನೇಟ್ ಆದ ಕಾರಣ ಅರವಿಂದ್ ರವರನ್ನು ಸೇವ್ ಮಾಡಬಾರದು ಎಂದು ಬಿಗ್ ಬಾಸ್ ಮೊದಲೇ ಸೂಚಿಸಿದ್ದರು.

Comments are closed.