Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ನಿಧಿ ರವರಿಗೆ ಕಿಚ್ಚ ಸುದೀಪ್ ರವರು ಮಾಡಿದ ಸಹಾಯ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಒಂದು ಕಾಲದಲ್ಲಿ ಸಾಲು ಸಾಲು ಯಶಸ್ಸಿನ ಚಿತ್ರಗಳಲ್ಲಿ ನಟನೆ ಮಾಡಿ, ಅಕ್ಷರಸಹ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದ ನಿಧಿ ಸುಬ್ಬಯ್ಯ ರವರ ಚಿತ್ರಗಳನ್ನು ಯಾರು ಎಂದಿಗೂ ಕೂಡ ಮರೆಯಲು ಸಾಧ್ಯವಿಲ್ಲ. ಮೊದಲಿಗೆ ಜಾಹಿರಾತು ಲೋಕದಲ್ಲಿ ಮಿಂಚುತ್ತಿದ್ದ ನಿಧಿ ಸುಬ್ಬಯ್ಯ ರವರು, ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದ್ದೇ ತಡ ಮಂತೆ ಹಿಂತುರುಗಿ ನೋಡಲೇ ಇಲ್ಲ.

ನಟಿಸಿದ್ದು ಕೆಲವೇ ಕೆಲವು ಚಿತ್ರಗಳಾದರೂ ಕೂಡ ಅಂದಿನ ಸಮಯದಲ್ಲಿ ಎಲ್ಲ ಹುಡುಗರ ಫೇವರಿಟ್ ನಟಿ ಎನಿಸಿಕೊಂಡಿದ್ದರು. ಕೆಲವೊಂದು ಪಾತ್ರಗಳಲ್ಲಿ ಕುಟುಂಬ ಪ್ರೇಕ್ಷಕರ ನೆಚ್ಚಿನ ನಟಿ ಕೂಡ ಆಗಿದ್ದರು. ಆದರೆ ತಮ್ಮ ವೈಯಕ್ತಿಕ ಕಾರಣಗಳಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದ ಇವರು, ಇತ್ತೀಚಿನ ದಿನಗಳಲ್ಲಿ ಮತ್ತೆ ಬಣ್ಣದ ಜಗತ್ತಿಗೆ ಮರಳಲು ಸಿದ್ಧರಿದ್ದಾರೆ ಆದರೆ ಅವರಿಗೆ ಸೂಕ್ತ ವಾಗುವಂತಹ ಪಾತ್ರಗಳು ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೇ ಸಮಯದಲ್ಲಿ ಅವರಿಗೆ ಮರಳಿ ಬಣ್ಣದ ಜಗತ್ತಿಗೆ ಭರ್ಜರಿಯಾಗಿ ಎಂಟ್ರಿ ಕೊಡಲು ಸಿಕ್ಕ ಸೂಕ್ತ ವೇದಿಕೆ ಬಿಗ್ ಬಾಸ್.

ಹೀಗೆ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡು ಇದೀಗ ಮತ್ತೊಮ್ಮೆ ಮರು ಎಂಟ್ರಿ ಯನ್ನು ಭರ್ಜರಿಯಾಗಿ ಪಡೆದುಕೊಂಡಿರುವ ನಿಧಿ ರವರು ಎರಡನೇ ಇನ್ನಿಂಗ್ಸ್ ನಲ್ಲಿ ಮೊದಲ ಸ್ಪರ್ದಿಯಾಗಿ ಹೊರ ಬಂದಿದ್ದಾರೆ. ಈ ಮೂಲಕ ತಮ್ಮ ಜರ್ನಿಯನ್ನು ಅಂತ್ಯಗೊಳಿಸಿದ್ದಾರೆ. ಇನ್ನು ಇದೇ ಸಮಯದಲ್ಲಿ ಕಿಚ್ಚ ಸುದೀಪ್ ರವರು ನೀಡಿದ ಭರವಸೆ ಎಲ್ಲೆಡೆ ಸದ್ದು ಮಾಡುತ್ತಿದೆ. ಹೌದು ಸ್ನೇಹಿತರೇ, ಜೀವನದಲ್ಲಿ ಸಾಕಷ್ಟು ನೋಡಿರುವ ನಿಧಿ ಸುಬ್ಬಯ್ಯ ರವರಿಗೆ ಕಿಚ್ಚ ಸುದೀಪ್ ರವರು ಇನ್ನು ಮುಂದೆ ಇಡೀ ಕನ್ನಡ ಚಿತ್ರ ರಂಗ ನಿಮ್ಮ ಜೊತೆ ಇರಲಿದೆ, ನಿಮ್ಮ ಪ್ರತಿ ಹೆಜ್ಜೆಯಲ್ಲೂ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆಯ ಮಾತುಗಳನ್ನು ಹೇಳಿದ್ದಾರೆ ಎಂಬುದು ತಿಳಿದು ಬಂದಿದೆ.

Comments are closed.