Neer Dose Karnataka
Take a fresh look at your lifestyle.

ಕೊನೆಗೂ ಅಖಾಡಕ್ಕೆ ಇಳಿದ ದರ್ಶನ್, ಸುಮಲತಾ ರವರ ಕುರಿತು ಮಾತನಾಡಿದ್ದಕ್ಕೆ ಕುಮಾರಸ್ವಾಮಿ ರವರಿಗೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕುಮಾರಸ್ವಾಮಿ ಹಾಗೂ ಸುಮಲತಾ ರವರ ನಡುವೆ ನಡೆಯುತ್ತಿವೆ ವಾಕ್ಸಮರ ಮತ್ತೊಂದು ಹಂತಕ್ಕೆ ಬಂದು ತಲುಪಿದೆ. ಸುಮಲತಾ ರವರ ಕುರಿತು ನೀಡುತ್ತಿರುವ ಹೇಳಿಕೆಗಳಿಗೆ ಪ್ರತ್ಯುತ್ತರ ಗಳು ಹಲವಾರು ಬಂದಿವೆ. ಅಷ್ಟರಲ್ಲಾಗಲೇ ಅಂಬರೀಷ್ ಅಣ್ಣ ರವರ ವಿಚಾರಗಳನ್ನು ಕೂಡ ಎಳೆದು ತರುತ್ತಿದ್ದು, ಅಂಬರೀಷ್ ರವರ ಸ್ಮಾರಕ ವಿಚಾರದಲ್ಲಿ ಹಲವಾರು ತಿಳಿಯದ ಘಟನೆಗಳನ್ನು ಚಿತ್ರರಂಗದ ಖ್ಯಾತ ನಾಮರೂ ವಿವರಿಸುತ್ತಿದ್ದಾರೆ.

ದೊಡ್ಡಣ್ಣ ರಾಕ್ ಲೈನ್ ರವರು ಸೇರಿದಂತೆ ಇನ್ನಿತರ ದಿಗ್ಗಜರು ಮಾತನಾಡಿ ಅಂಬರೀಷ್ ರವರ ಸ್ಮಾರಕ ವಿಚಾರಕ್ಕೆ ಮನವಿ ಪತ್ರ ನೀಡಿದಾಗ ಕುಮಾರಸ್ವಾಮಿ ರವರು ಪಾತ್ರವನ್ನು ಎಸೆದಿದ್ದರು ಎಂದು ವಿಚಾರ ಬಹಿರಂಗ ಪಡಿಸಿದ್ದಾರೆ, ಈ ಮೂಲಕ ಇಷ್ಟು ದಿವಸ ನಾನೇ ಸ್ಮಾರಕ ಕಟ್ಟಿಸಿದ್ದು ಎನ್ನುತ್ತಿದ್ದ ಕುಮಾರಸ್ವಾಮಿ ರವರು ತೆಪ್ಪಗಾಗಿದ್ದಾರೆ. ಅದೇ ಸಮಯದಲ್ಲಿ ಇಷ್ಟು ದಿವಸ ಈ ಎಲ್ಲ ವಿಚಾರಗಳ ಕುರಿತು ಮೌನ ವಹಿಸಿದ್ದ ದರ್ಶನ್ ರವರು ಮಾತನಾಡಿದ್ದಾರೆ.

ಹೌದು ಸ್ನೇಹಿತರೇ, ಇಷ್ಟು ದಿವಸ ಸುಮಲತಾರವರು ಪರವಾನಗಿ ಮಿತಿ ಮೀರಿರುವ ಗಣಿಗಾರಿಗೆ ಕುರಿತು ಮಾತನಾಡಿ ಮೈಸೂರ್ KRS ಡ್ಯಾಮ್ ಬಿರುಕು ಬಿಟ್ಟಿದೆ ಎಂದು ಹೇಳಿದ್ದ ವಿಚಾರದಲ್ಲಿ ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಿದ್ದ ಕುಮಾರ ಸ್ವಾಮಿ ರವರು, ಸುಮಲತಾ ರವರನ್ನು ಸುಮಲತಾ ಅವರನ್ಮ ಅಡ್ಡಡ್ಡಾ ಮಲಗಿಸಿ ಎಂದು ಹೇಳಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದರ್ಶನ್ ರವರು, ಉನ್ನತ ಸ್ಥಾನದಲ್ಲಿ ಇದ್ದ ವ್ಯಕ್ತಿ ಬೇರೊಬ್ಬರ ಬಗ್ಗೆ ಮಾತನಾಡುವಾಗ ಸ್ವಲ್ಪ ಪದಗಳ ಮೇಲೆ ಹಿಡಿತ ಇಟ್ಟುಕೊಳ್ಳಬೇಕು, ಅದರಲ್ಲಿಯೂ ಹೆಣ್ಣಿನ ವಿಚಾರವಾಗಿ ಮಾತನಾಡುವಾಗ ನೂರು ಬಾರಿ ಯೋಚಿಸಬೇಕು, ತಪ್ಪು ಮಾಡಿದ್ದವರಿಗೆ ಕಂಡಿತಾ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹೇಳಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.