Neer Dose Karnataka
Take a fresh look at your lifestyle.

ಹೇಳಿದ್ದೊಂದು ಮಾಡಿದ್ದೊಂದು, ಮಂಜು ಸೋಲಿಗೆ ಮುನ್ನುಡಿ ಬರೆಯುತ್ತಿದ್ದಾರೆ ಜನತೆ, ಮಹಾ ತಪ್ಪು ಮಾಡುತ್ತಿರುವ ಮಂಜು, ಏನು ಗೊತ್ತಾ???

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದ ಈ ಬಾರಿಯ ಬಿಗ್ ಬಾಸ್ ನ ಮೊದಲನೇ ಇನ್ನಿಂಗ್ಸ್ ಆಗಲಿ ಅಥವಾ ಎರಡನೇ ಇನ್ನಿಂಗ್ಸ್ ಆಗಲಿ ಎರಡರಲ್ಲೂ ಕೂಡ ಮಜಾ ಟಾಕೀಸ್ ಖ್ಯಾತಿಯ ಮಂಜು ಪಾವಗಡ ರವರು, ಗೆಲ್ಲುವ ನೆಚ್ಚಿನ ಸ್ಪರ್ದಿಗಳಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ದಿನೇ ದಿನೇ ಮಂಜು ರವರು ತಮ್ಮ ಬಲವಾದ ಅಭಿಮಾನಿ ಬಳಗವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಈ ಮೂಲಕ ಗೆಲ್ಲುವುದಿರಲಿ ಇದು ಹೇಗೆ ಮುಂದು ವರೆದರೇ, ಫೈನಲ್ ಬಿಡಿ, ಫೈನಲ್ ವಾರದ ವರೆಗೂ ಕೂಡ ತಲುಪುವುದು ಕಷ್ಟವಾಗಲಿದೆ. ಯಾಕೆಂದರೆ ಬಿಗ್ ಬಾಸ್ ಮನೆಯಲ್ಲಿ ಬದಲಾಗುತ್ತಿರುವ ಅಭಿಪ್ರಾಯಗಳಿಂದ ಪ್ರೇಕ್ಷಕರು ಒಂದು ವಾರ ಮಂಜು ಪಾವಗಡ ಕುರಿತು ಇವರು ವಿನ್ ಆಗುವುದು ಬೇಡ ಎಂದು ಕೊಂಡರೆ ಸಾಕು ಮನೆಯಿಂದ ಎಲಿಮಿನೇಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ರೀತಿ ಈ ಹಿಂದೆ ಹಲವಾರು ಬಾರಿ ಆಗಿದೆ.

ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೇ, ಮೊದಲ ವಾರದಿಂದಲೂ ಗೆಲ್ಲುವ ನೆಚ್ಚಿನ ಸ್ಪರ್ದಿಗಳಲ್ಲಿ ಒಂದಾಗಿದ್ದ ರಾಜೀವ್ ರವರು ಕೇವಲ ಒಂದು ವಾರದಲ್ಲಿ ತಾವು ನಡೆದುಕೊಂಡ ರೀತಿ ಪ್ರೇಕ್ಷಕರಿಗೆ ಇಷ್ಟವಾಗದ ಕಾರಣ ಮನೆಯಿಂದ ಎಲಿಮಿನೇಟ್ ಆಗಿದ್ದರು. ಪ್ರತಿ ವಾರವೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಜೀವ್ ರವರು, ಗೋಲ್ಡನ್ ಪಾಸ್ ಟಾಸ್ಕ್ ನಲ್ಲಿ ಕ್ರೀಡಾ ಸ್ಫೂರ್ತಿ ಮರೆತದ್ದು ಅವರು ಹೊರಬರಲು ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆಗಬಾರದ್ದು ಆಗಿಹೋಯಿತು ಅಲ್ಲವೇ??

ಥೇಟ್ ಇದೀಗ ಅದರಂತೆಯೇ ಅವರ ಸ್ಥಾನದಲ್ಲಿ ಮಂಜು ಪಾವಗಡ ರವರು ಇದ್ದಾರೆ ಎಂಬುದು ಸಾಮಾಜಿಕ ಜಾಲತಾಗಳಲ್ಲಿ ಕೇಳಿ ಬಂದ ಮಾತು. ಯಾಕೆಂದರೆ ಮಂಜು ಪಾವಗಡ ರವರಿಗೆ ಇರುವ ಸಾಮರ್ಥ್ಯ ಎಲ್ಲರಿಗೂ ತಿಳಿದೇ ಇದೇ. ಆದರೆ ಸ್ಟೇಜ್ ಮೇಲೆ ಬಂದು ದಿವ್ಯ ಸುರೇಶ ರವರ ಜೊತೆ ಸೇರದೆ ಸಿಂಗಲ್ ಆಗಿ ಬೈಕ್ ಓಡಿಸುತ್ತೇನೆ ಎಂದಿದ್ದ ಮಂಜು ಪಾವಗಡ ರವರು ಮನೆಯ ಒಳಗಡೆ ಈ ಬಾರಿ ಅವರೇ ದಿವ್ಯ ಸುರೇಶ ರವರ ಬಾಲವಾಗಿದ್ದಾರೆ. ಕಳೆದ ಬಾರಿ ದಿವ್ಯ ಸುರೇಶ್ ರವರನ್ನು ಇವರ ಬಾಲ ಎಂದು ಕರೆಯಲಾಗಿತ್ತು.

ಆದರೆ ಈ ಬಾರಿ ಅದು ಉಲ್ಟಾ ಆಗಿದೆ, ಯಾಕೆಂದರೆ ಮಂಜು ಪಾವಗಡ ರವರು, ಆಟದಲ್ಲಿ ಗೆಲ್ಲುತ್ತಿದ್ದರೂ ಕೂಡ ತಮ್ಮನ್ನು ಜನರು ಗುರುತಿಸುವಂತೆ ಮಾಡಿದ್ದ ಮನರಂಜನೆ ಯನ್ನು ಮರೆತಿದ್ದಾರೆ. ಪ್ರತಿ ಸನ್ನಿವೇಶವನ್ನು ಮನರಂಜನೆಯ ಮೂಲಕವಾಗಿ ಪರಿವರ್ತನೆ ಮಾಡುತ್ತಿದ್ದ ಮಂಜು ಪಾವಗಡ ರವರು, ಇದೀಗ ಸುಖ ಸುಮ್ಮನೆ ಪ್ರತಿ ವಿಚಾರದಲ್ಲಿ ಮೂಗು ತೂರಿಸಿ ಆಟವನ್ನು ಮರೆಯುತ್ತಿದ್ದಾರೆ. ಇಷ್ಟು ಸಾಲದು ಎಂಬಂತೆ ಪ್ರೇಕ್ಷಕರು ಸ್ಪಷ್ಟವಾಗಿ ನೋಡಿದ್ದರೂ ಕೂಡ,

ಕೇವಲ ಪ್ರಶಾಂತ್ ಸಂಭರ್ಗಿ ರವರದ್ದು ತಪ್ಪು ಎಂದು ಬಿಂಬಿಸಲು ದಿವ್ಯ ಉರುಡುಗ ರವರಿಗೆ ಬೆಂಬಲ ನೀಡಿದ್ದು ನಿನ್ನೆಯ ಸಂಚಿಕೆಯ ಮೂಲಕ ಬಟಾಬಯಲಾಗಿದೆ. ಹಾಗೂ ಇದೇ ಸಮಯದಲ್ಲಿ ಪ್ರಶಾಂತ್ ಸರಿ ಎಂದು ಪರೋಕ್ಷವಾಗಿ ಇಡೀ ಮನೆಯನ್ನು ಸುದೀಪ್ ತರಾಟೆಗೆ ತೆಗೆದುಕೊಂಡಾಗ ಪ್ಲೇಟ್ ಬದಲಾಯಿಸಿದ ಮಂಜು ರವರು, ಅವರು ಮಾಡಿದ್ದು ಸರಿ ಆದರೆ ಅವರ ಪಾಯಿಂಟ್ ಕರೆಕ್ಟ್ ಎಂದು ಬಿಟ್ಟರು. ಇದರಿಂದ ಮಂಜು ರವರಿಗೆ ಪ್ರಶ್ನೆಗಳ ಸುರಿಮಳೆಯೇ ಆಗಿದ್ದು, ಈ ವಿಷಯ ಗೊತ್ತಿದ್ದರೇ, ಮೊದಲೇ ದಿವ್ಯ ರವರ ನಿರ್ಧಾರವನ್ನು ಪ್ರಶ್ನೆ ಮಾಡಬಹುದಾಗಿತ್ತು, ಕೇವಲ ಪ್ರಶಾಂತ್ ಯಾಕೆ ಪ್ರಶ್ನೆ ಮಾಡಿದರು. ನಿಮಗೆ ಗೊತ್ತಿಲ್ಲ ಎಂದರೇ ಇವಾಗ ತಿಳಿಯಿತು ಅನ್ನಬಹುದಾಗಿತ್ತು, ನಿಮಗೆ ಈ ವಿಷಯ ಮೊದಲೇ ಗೊತ್ತಿತ್ತೇ ಎಂದು ಜರಿದಿದ್ದಾರೆ.

 

Comments are closed.