Neer Dose Karnataka
Take a fresh look at your lifestyle.

ದರ್ಶನ್ ರವರ ಕುರಿತು ಷಾಕಿಂಗ್ ಹೇಳಿಕೆ ನೀಡಿದ ನೆನಪಿರಲಿ ಪ್ರೇಮ್, 5 ವರ್ಷ ಬ್ಯಾನ್ ಮಾಡಿ ಎಂದಿದ್ದಕ್ಕೆ ಪ್ರೇಮ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಷಯಗಳು ಹರಿದಾಡುತ್ತಿದ್ದು ಎಲ್ಲೋ ಪ್ರಾರಂಭವಾಗಿ ಯಾವುದು ತಿರುವನ್ನು ಪಡೆದು ಈಗ ಯಾವುದೋ ಹಂತಕ್ಕೆ ಬಂದು ನಿಂತಿದೆ. ಜೇನುಗೂಡಿನಂತೆ ಇದ್ದ ಸ್ಯಾಂಡಲ್ವುಡ್ ಈಗ ಕಲ್ಲು ಹಾಕಿದ ಜೇನಿನಗೂಡುನಂತಾಗಿದೆ. ಹೌದು ಸ್ನೇಹಿತರೆ ಲಾಕ್ ಡೌನ್ ಸಮಯದಲ್ಲಿ ಕನ್ನಡ ಚಿತ್ರರಂಗ ಸಾಮಾನ್ಯ ಜನರ ಪಾಲಿಗೆ ದೇವರಂತೆ ಬಂದು ಅವರ ಕಷ್ಟ ಸುಖಗಳಿಗೆ ಆಸರೆಯಾಗಿ ನಿಂತಿತ್ತು.

ಆದರೆ ಈಗ ಕನ್ನಡ ಚಿತ್ರರಂಗವೇ ಸಾಕಷ್ಟು ಕೆಟ್ಟ ಸುದ್ದಿಗಳಿಗೆ ಸಾಕ್ಷಿಯಾಗುತ್ತಾ ಹೋಗಿದೆ. ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 25 ಕೋಟಿ ಪ್ರಕರಣ ಈಗ ಅರುಣಾಕುಮಾರಿ ಉಮಾಪತಿ ಇಂದ ಹಿಡಿದು ನಂತರ ಸಂದೇಶ್ ನಾಗರಾಜ್ ರವರ ಸಂದೇಶ್ ಪ್ರಿನ್ಸ್ ಹೋಟೆಲ್ ನಿಂದ ಈಗ ಪ್ರಾರಂಭವಾಗಿ ಮತ್ತೊಮ್ಮೆ ಪುನೀತ್ ರಾಜಕುಮಾರ್ ಅವರ ಆಸ್ತಿ ವಿಚಾರಕ್ಕೆ ಬಂದು ಇಂದ್ರಜಿತ್ ಲಂಕೇಶ್ ರವರ ಪುಂಖಾನುಪುಂಖವಾಗಿ ಬರುವ ಆರೋಪಗಳಿಗೆ ಬಂದುನಿಂತಿದೆ. ಇದರಲ್ಲಿ ಯಾವುದಕ್ಕೆ ತಲೆ ಯಾವುದು ಬುಡ ಎಂಬುದು ತಿಳಿಯದಂತಾಗಿದೆ. ಈಗ ಕೆಲವೊಮ್ಮೆ ಕೆಲವರು ದರ್ಶನ್ ರವರಿಗೆ ಸ್ಯಾಂಡಲ್ವುಡ್ ಚಿತ್ರರಂಗದಿಂದ ಐದು ವರ್ಷ ಬ್ಯಾನ್ ಮಾಡಬೇಕೆಂಬ ಒತ್ತಾಯವನ್ನು ಕೂಡ ಮಾಡತೊಡಗಿದ್ದಾರೆ. ಇದಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿರುವ ನೆನಪಿರಲಿ ಪ್ರೇಮ್ ರವರು ಪ್ರತಿಕ್ರಿಯಿಸಿದ್ದಾರೆ.

ಹೌದು ಸ್ನೇಹಿತರೆ ದರ್ಶನ್ ರವರ ಒಡನಾಡಿ ಹಾಗೂ ಸ್ಯಾಂಡಲ್ವುಡ್ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡಿರುವ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ರವರು ಈ ವಿಚಾರಗಳ ಕುರಿತಂತೆ ಮಾತನಾಡುತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಗ್ಗೆ ನಮಗೆ ಗೊತ್ತಿದೆ ಅವರು ಅಂತಹ ತಪ್ಪು ಕೆಲಸಗಳನ್ನು ಮಾಡಲು ಹೋಗುವವರಲ್ಲ. ಎಲ್ಲಾದರೂ ಅವರಿಂದ ತಪ್ಪಾಗುವ ಕೆಲಸ ಮಾಡಿದ್ದಾರೆ ಅದಕ್ಕೆ ತಿದ್ದುವ ಕೆಲಸಗಳು ನಡೆಯಲಿ ಹೊರತು ಆದರೆ ಬ್ಯಾನ್ ಮಾಡುವುದು ಯಾರಿಗೂ ಆಇಲ್ಲ. ನಟನೆಗಿಂತ ಹೆಚ್ಚಾಗಿ ಒಬ್ಬ ಅಭಿಮಾನಿಯಾಗಿ ನಾನು ನಿಮ್ಮ ಹಿಂದೆ ಇದ್ದೇನೆ ಸಹೋದರ ಎಂಬುದಾಗಿ ಬೆಂಬಲದ ಮಾತುಗಳನ್ನಾಡಿದ್ದಾರೆ. ಸ್ನೇಹಿತರಿಗೆ ಪ್ರಕರಣದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.