Neer Dose Karnataka
Take a fresh look at your lifestyle.

ಭಿಕ್ಷೆ ಬೇಡು ಎಂದು ಟಾಪ್ ನಟಿಯನ್ನು ಹೊರದಬ್ಬಿದ ತಂದೆ, ಆ ಟಾಪ್ ಹೀರೊಯಿನ್ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವಿದ್ದರೆ ಎಂತಹ ಕಷ್ಟದಲ್ಲಿದ್ದರೂ ಸಹ ಜಗತ್ತೆ ಮೆಚ್ಚುವಂತಹ ಸಾಧನೆ ಮಾಡಿ ಯಶಸ್ವಿ ಜೀವನವನ್ನು ಸಾಗಿಸಬಹುದು ಎಂಬುದನ್ನು ಈಗಾಗಲೇ ಹಲವಾರು ಗಣ್ಯರು ಸೆಲೆಬ್ರಿಟಿಗಳು ಮಾಡಿತೋರಿಸಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳು ಸೆಲೆಬ್ರಿಟಿ ಆಗುವ ಮುನ್ನ ಅವರು ಕೂಡ ಕಷ್ಟದ ಜೀವನದಲ್ಲಿ ಮಿಂದೆದ್ದು ಬಂದವರು. ಹೌದು ಸ್ನೇಹಿತರೆ ಇಂದು ನಾವು ಹೇಳಹೊರಟಿರುವ ವಿಷಯದಲ್ಲಿ ಒಬ್ಬ ನಟಿ ಮಧ್ಯಮ ವರ್ಗದ ಬಡ ಕುಟುಂಬದಲ್ಲಿ ಜನಿಸಿದವರು.

ಈಗ ಅವರು ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುವಂತ ನಟಿಯಾಗಿದ್ದರು ಸಹ ಒಂದು ಕಾಲದಲ್ಲಿ ಆಕೆಯನ್ನು ಆಕೆಯ ತಂದೆ ಕೋಪದಿಂದ ಮನೆಯಿಂದ ಹೊರಗೆ ಹಾಕಿ ಭಿಕ್ಷೆ ಬೇಡಿ ತಿಂದು ಸಾ’ಯಿರಿ ಎಂದು ಹೇಳಿದ್ದರು. ಈ ಮಾತಿಗೆ ತಮ್ಮ, ತಮ್ಮ ಹಾಗೂ ತಾಯಿಯೊಡನೆ ಮನೆಯಿಂದ ಹೊರಬಂದ ಆಕೆ ಇನ್ನೆಂದೂ ತನ್ನ ತಂದೆಯ ಮುಖವನ್ನು ನೋಡುವುದಿಲ್ಲ ಎಂಬ ಶಪಥವನ್ನು ಹಾಕಿದ್ದರು. ಆದರೆ ಕೋಪದಿಂದ ಮನೆಯಿಂದ ಹೊರಬಂದ ಇವರು ಮಾಡುವುದಾದರೂ ಏನು ಎಂಬುದರ ಯೋಚನೆಗೆ ಬಿದ್ದರು. ಕೆಲವೊಮ್ಮೆ ತಮ್ಮ ಜೀವನವನ್ನು ಕೊನೆಗಾಣಿಸುವ ನಿರ್ಧಾರವನ್ನು ಕೂಡ ಮಾಡಿದ್ದರು.

ಆದರೆ ಏನಾದರೂ ಹೋರಾಟ ಮಾಡದೆ ಕೈ ಸೋಲಬಾರದೆಂಬ ಅವರ ಮನಸ್ಸಿನಲ್ಲಿ ದೃಢವಾಗಿತ್ತು. ಹೀಗಾಗಿ ಮನೆ ಬಿಟ್ಟು ಹೊರ ಬಂದ 1986 ರಲ್ಲೇ ತೆಲುಗು ರಾಜ್ಯಕ್ಕೆ ತೆರಳಿ ಅಲ್ಲಿನ ಚಿತ್ರರಂಗದಲ್ಲಿ ಸಿನಿಮಾಗೆ ಪಾದಾರ್ಪಣೆ ಮಾಡಿದರು. ನಂತರ ಮೊದಲ ಯಶಸ್ಸು ದೊರಕಿದೆ ನಂತರ ಅವರನ್ನು ಹಿಡಿಯುವವರೇ ಇರಲಿಲ್ಲ. ಹೌದು ಸ್ನೇಹಿತರಾದ ಆದ ನಂತರ ಅವರು ಕನ್ನಡ ತಮಿಳು ಮಲಯಾಳಂ ಹಿಂದಿ ಹೀಗೆ ಹಲವಾರು ಬಹುಭಾಷಾ ಚಿತ್ರಗಳಲ್ಲಿ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡರು.
ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವುದು ಖ್ಯಾತ ನಟಿ ಖುಷ್ಬೂ ರವರ ಬಗ್ಗೆ. ಅವರು ಎಷ್ಟು ಜನಪ್ರಿಯರಾಗಿದ್ದಾರೆ ಎಂದರೆ ಅವರ ಹೆಸರಿನಲ್ಲಿ ದೇವಸ್ಥಾನವನ್ನು ಕೂಡ ಅವರ ಅಭಿಮಾನಿಗಳು ಕಟ್ಟಿದ್ದರು. ಇದು ಅಲ್ವಾ ಸ್ನೇಹಿತರೆ ನಿಜವಾದ ಸ್ಪೂರ್ತಿದಾಯಕ ಜೀವನದ ಕಥೆಯೆಂದರೆ.

Comments are closed.