Neer Dose Karnataka
Take a fresh look at your lifestyle.

ಒಂದಲ್ಲ ಎರಡಲ್ಲ 23 ವರ್ಷ ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಅಂಬಿ, ಯಾಕೆ ಹಾಗೂ ಅದಾದ ಮೇಲೆ ಮನೆಕಟ್ಟಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರ ಎಂದು ಬಂದಾಗ ಎಲ್ಲಾ ಭಾಷೆಗಳಲ್ಲಿ ಅತ್ಯಂತ ಹೆಚ್ಚು ಸ್ನೇಹಿತರನ್ನು ಹೊಂದಿರುವ ಏಕೈಕ ಕನ್ನಡ ನಟ ಎಂದರೆ ಅದು ನಮ್ಮ ಮಂಡ್ಯದ ಗಂಡು ಕಲಿಯುಗದ ಕರ್ಣ ಎಂದೆ ಖ್ಯಾತರಾಗಿರುವ ರೆಬೆಲ್ ಸ್ಟಾರ್ ಅಂಬರೀಶ್ ರವರು. ಹೌದು ಸ್ನೇಹಿತರೆ ರೆಬೆಲ್ ಸ್ಟಾರ್ ಅಂಬರೀಶ್ ರವರು ಕನ್ನಡ ಚಿತ್ರರಂಗದಲ್ಲಿ ತುತ್ತತುದಿಯಲಿ ಇದ್ದಂತಹ ಕಾಲ. ಅವರು ನಡೆಸುತ್ತಿದ್ದ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಬಹಳಷ್ಟು ಯಶಸ್ಸನ್ನು ಸಾಧಿಸುತ್ತಿದ್ದವು.

ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ ಅಂದರೆ ಆಗಲೇ ತುಂಬಾ ಮರ್ಯಾದೆ ಇತ್ತು. ಅಂಬರೀಶ್ ರವರು ಕಠಿಣ ಧ್ವನಿಯಲ್ಲಿ ಮಾತನಾಡಿದರೆ ಸಹ ಅವರ ಮನಸ್ಸು ಹೂವಿನಷ್ಟೇ ಮೃದು ಹಾಗೂ ಕರುಣಾಮಯಿ ಎನ್ನುವುದು ಆಗಲಿ ಸಾಬೀತಾಗಿತ್ತು. ಇನ್ನು ನಿಮಗೆ ಒಂದು ವಿಷಯ ಗೊತ್ತಾ ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದರು ಸಹ ಅವರು ಮನೆ ಮಾಡಿಕೊಂಡಿರಲಿಲ್ಲ. ಇದು ಅವರ ಮದುವೆಗೂ ಮುನ್ನದ ಮಾತು.

ಆಗಿನ್ನೂ ರೆಬೆಲ್ ಸ್ಟಾರ್ ಅಂಬರೀಶ್ ಅವರು ಹೋಟೆಲ್ ನಲ್ಲಿ ರೂಮ್ ಮಾಡಿಕೊಂಡಿರುತ್ತಿದ್ದರು. ಒಮ್ಮೆ ಎಂ ಪಿ ಪ್ರಕಾಶ್ ರವರು ತಮ್ಮ ಮಗಳ ಮದುವೆಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಆಹ್ವಾನಿಸಿದರು. ರೆಬೆಲ್ ಸ್ಟಾರ್ ರವರು ಎಂ ಪಿ ಪ್ರಕಾಶ್ ಅವರ ಆಹ್ವಾನದ ಮೇರೆಗೆ ಸ್ನೇಹದ ಪ್ರತೀಕವಾಗಿ ಅವರ ಮಗಳ ಮದುವೆಗೆ ಸಡಗರದಿಂದಲೇ ಭಾಗವಹಿಸಿದರು ಆದರೆ ಊಟಕ್ಕೆ ನಿಂತಿರಲಿಲ್ಲ.

ಇದನ್ನು ಗಮನಿಸಿದ ಎಂಪಿ ಪ್ರಕಾಶ್ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ವೈಯಕ್ತಿಕವಾಗಿ ಔತಣಕೂಟವನ್ನು ಏರ್ಪಡಿಸಿದ್ದರು. ಆ ಸಮಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ರವರಿಗೆ ಬೆಂಗಳೂರಿನಲ್ಲಿ ಎಲ್ಲಿ ಉಳಿದುಕೊಂಡಿದ್ದಿರಾ ಎಂದು ಪ್ರಶ್ನೆ ಹಾಕಿದಾಗ ನನಗೆ ಇನ್ನೂ ಮನೆ ಇಲ್ಲ ನಾನು ಹೋಟೆಲ್ವೊಂದರಲ್ಲಿ ಉಳಿದುಕೊಂಡಿರುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕೆ ಬೇಸರಗೊಂಡು ಎಂಪಿ ಪ್ರಕಾಶ್ ಅವರು ನಾನು ನಿಮಗೆ ಒಳ್ಳೆ ಸೈಟೊಂದನ್ನು ಹುಡುಕಿ ಕೊಡುತ್ತೇನೆ ಎಂದು ಹೇಳಿದ್ದಾರೆ. ಒಮ್ಮೆ ಮೈಸೂರು ನಲ್ಲಿ ರವಿ ಸ್ಟಾರ್ ಅಂಬರೀಶ್ ಅವರು ಚಿತ್ರೀಕರಣ ಮಾಡುತ್ತಿದ್ದಾಗ ಅಧಿಕಾರಿಗಳನ್ನು ಕಳಿಸಿ ಬೆಂಗಳೂರಿನ ಜೆಪಿ ನಗರ ದಲ್ಲಿ ಸೈಟೊಂದನ್ನು ಗೊತ್ತು ಮಾಡಿದ್ದೇನೆ ಎಂಬ ಸಂದೇಶವನ್ನು ಕಳಿಸಿದರು. ಖಾಲಿ ಸೈಟನ್ನು ನೋಡಿದ ಅಂಬರೀಶ್ ಅವರಿಗೆ ಯಾರು ಇಷ್ಟವಾಗಿರಲಿಲ್ಲ ಅದಕ್ಕೆ ಸೈಟ್ ನನಗೆ ಬೇಡ ಎಂದು ಹೇಳಿದರು.

ಆಗ ಎಂಪಿ ಪ್ರಕಾಶ್ ಅವರು ನಿಮಗೆ ಗೊತ್ತಿಲ್ಲ ಅಂಬರೀಶ್ರವರ ಮುಂದಿನ ಕಾಲದಲ್ಲಿ ಇಲ್ಲಿ ಸಾಕಷ್ಟು ಬದಲಾವಣೆ ಹಾಗೂ ಆಧುನಿಕವಾಗಿ ಮುನ್ನಡೆ ನಡೆಯಲಿದೆ ಹಾಗಾಗಿ ಇದನ್ನು ತೆಗೆದುಕೊಂಡು ಇಲ್ಲ ಮನೆಯನ್ನು ಮಾಡಿ ಮುಂದೆ ಚಿನ್ನದ ಬೆಲೆ ಇದೆ ಎಂದು ಹೇಳಿದರು. ಅವರ ಇಚ್ಛೆಯಂತೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಅಲ್ಲೇ ಮನೆಮಾಡಿದರು ಈಗ ಜೆಪಿನಗರ ಎಷ್ಟು ಮುಂದುವರಿದ ನಗರ ಎಂಬುದು ನಿಮಗೆ ಗೊತ್ತಿದೆ ಸ್ನೇಹಿತರೆ. ಇದು ರೆಬಲ್ ಸ್ಟಾರ್ ಅಂಬರೀಶ್ ಅವರು ಹೋಟೆಲ್ನಿಂದ ಮನೆ ಕಟ್ಟಿದಂತಹ ಕಹಾನಿ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.