Neer Dose Karnataka
Take a fresh look at your lifestyle.

ಕನ್ನಡ ನಟನಿಗಾಗಾಗಿ ಹುಡುಕಿಕೊಂಡು ಬಂದ ತೆಲುಗು ಟಾಪ್ ನಿರ್ದೇಶಕ, ಯಾವ ಮೂವಿ ಗೊತ್ತ ಹಾಗೂ ನಟ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೆ ಒಂದು ಕೆಜಿಎಫ್ ಚಾಪ್ಟರ್ 1 ಚಿತ್ರ ಇಡೀ ಕನ್ನಡ ಚಿತ್ರರಂಗದ ಭವಿಷ್ಯವನ್ನೇ ನೆಕ್ಸ್ಟ್ ಲೆವೆಲ್ಲಿಗೆ ತೆಗೆದುಕೊಂಡು ಹೋಗಿದೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಎಂದರೆ ದಕ್ಷಿಣ ಭಾರತ ಚಿತ್ರರಂಗಗಳೇ ಒಮ್ಮೆ ಅಸಡ್ಡೆಯಿಂದ ನೋಡುತ್ತಿದ್ದವು ಇನ್ನು ಬಾಲಿವುಡ್ ಚಿತ್ರರಂಗ ಕನಸಿನ ಮಾತು ಬಿಡಿ. ಆದರೆ ಕೆಜಿಎಫ್ ಚಾಪ್ಟರ್ ಒಂದು ಚಿತ್ರದ ನಂತರ ಬೇರೆಲ್ಲ ಪರಭಾಷೆ ಚಿತ್ರರಂಗಗಳು ಕನ್ನಡ ಚಿತ್ರರಂಗವನ್ನು ನೋಡುವ ದೃಷ್ಟಿಕೋನವೇ ಬದಲಾಗಿಬಿಟ್ಟಿದೆ.

ಹೀಗಾಗಿ ಇತ್ತೀಚಿನ ದಿನಗಳಲ್ಲಿ ಪರಭಾಷೆಯ ನಿರ್ದೇಶಕರು ಹಾಗೂ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬಂದು ಉತ್ತಮ ಚಿತ್ರಗಳನ್ನು ಮಾಡುವ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಮಾತ್ರವಲ್ಲದೆ ಪರಭಾಷಾ ನಟನಟಿಯರು ಕೂಡ ಕನ್ನಡ ಚಿತ್ರರಂಗಕ್ಕೆ ಬರುವ ಸನ್ನಾಹದಲ್ಲಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಉತ್ತಮ ಕ್ವಾಲಿಟಿಯ ಚಿತ್ರಗಳು ಪರಭಾಷಾ ಸಿನಿಮಾ ಪಕ್ಕ ಹಾಗೂ ನಿರ್ದೇಶಕರ ಮನಗೆದ್ದಿವೆ ಹೀಗಾಗಿಯೇ ಕನ್ನಡ ಚಿತ್ರರಂಗದ ಅಸಲಿ ಬೆಲೆ ಪರಭಾಷಿಗರಿಗೆ ಕೂಡ ತಿಳಿಯುತ್ತಿದೆ. ಇದೇ ವಿಷಯಕ್ಕೆ ಪೂರಕವಾಗಿ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕರೊಬ್ಬರು ಕನ್ನಡ ಚಿತ್ರನಟನ ಡೇಟ್ ಗಾಗಿ ಕಾಯುತ್ತಿದ್ದಾರೆ. ನೋಡಿದ್ರೆ ಸ್ನೇಹಿತರೆ ಒಂದು ಚಿತ್ರರಂಗ ವಾಗಿ ನಾವು ಬೆಳೆದಾಗ ಪರಭಾಷಾ ಚಿತ್ರದ ನಿರ್ದೇಶಕರು ಕೂಡ ನಮ್ಮ ನಟರ ಡೇಟ್ ಗಾಗಿ ಕಾಯುತ್ತಾರೆ ಎಂಬುದು ಈಗ ಸಾಬೀತಾಗಿದೆ.

ಹೌದು ಸ್ನೇಹಿತರೆ ಅವರು ಇನ್ಯಾರು ಅಲ್ಲ ತೆಲುಗು ಚಿತ್ರರಂಗದ ಮಾಸ್ ನಿರ್ದೇಶಕ ಎಂದೇ ಖ್ಯಾತರಾಗಿರುವ ಬೋಯಾಪತಿ ಶ್ರೀನಿವಾಸ್. ಹೌದು ಸ್ನೇಹಿತರೆ ವಿನಯವಿಧೇಯರಾಮ ಲೆಜೆಂಡ್ ಹೀಗೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ತೆಲುಗು ಚಿತ್ರರಂಗಕ್ಕೆ ನೀಡಿರುವ ಬೋಯಾಪತಿ ಶ್ರೀನಿವಾಸ್ ರವರು ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ಯಶ್ ರವರ ಜೊತೆಗೆ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಹರಿದಾಡುತ್ತಿದ್ದು ಮುಂದಿನ ದಿನಗಳಲ್ಲಿ ನಾವು ಇಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾದಲ್ಲಿ ಕಾಣಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.