Neer Dose Karnataka
Take a fresh look at your lifestyle.

ನಾಯಕ ಧೋನಿಗೆ ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದ ಕನ್ನಡದ ಹೆಸರಾಂತ ನಟ ಯಾರು ಗೊತ್ತೇ?? ಆ ಲೆಜೆಂಡ್ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರ ರಂಗ ಎಂದು ಬಂದಾಗ ಯಾರೇ ಕಷ್ಟದಲ್ಲಿದ್ದರೂ ಕೂಡ ಸಹಾಯ ಮಾಡಬಲ್ಲಂತಹ ವ್ಯಕ್ತಿತ್ವ ಎಂದರೆ ಅದು ಕನ್ನಡ ಚಿತ್ರರಂಗದ ಕಲಿಯುಗದ ಕರ್ಣ ಮಂಡ್ಯದ ಗಂಡು ಎಂದೇ ಖ್ಯಾತರಾಗಿರುವ ರೆಬಲ್ ಸ್ಟಾರ್ ಅಂಬರೀಶ್ ಅವರು. ಹೌದು ಸ್ನೇಹಿತರೆ ಇದು ಹಲವಾರು ಬಾರಿ ಕನ್ನಡ ಚಿತ್ರರಂಗದಲ್ಲಿ ಸಾಬೀತಾಗಿದೆ. ಜಲೀಲ ನಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಂತಹ ಅಂಬರೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕನಟನಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರು ಭಾರತೀಯ ಕ್ರಿಕೆಟ್ ತಂಡದ ಕೂಲ್ ಕಪ್ತಾನ ಎಂದೇ ಖ್ಯಾತರಾಗಿರುವ ಮಹೇಂದ್ರ ಸಿಂಗ್ ಧೋನಿ ರವರಿಗೆ ಅವರ ಕಷ್ಟದ ದಿನಗಳಲ್ಲಿ ಸಹಾಯ ಮಾಡಿದ್ದಾರೆ ಎಂಬ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿವೆ. ಹೌದು ಸ್ನೇಹಿತರೆ ಈ ವಿಷಯವನ್ನು ಟ್ವಿಟರ್ನಲ್ಲಿ ಅವರ ಪತ್ನಿಯಾಗಿರುವ ಹಾಗೂ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಅವರು ಕೂಡ ಖಾತ್ರಿಪಡಿಸಿದ್ದಾರೆ. ಹೌದು ಸ್ನೇಹಿತರೆ 2004 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವಿನ ಪಂದ್ಯದಲ್ಲಿ ಧೋನಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದರು.

ಅವರ ಆಟವನ್ನು ಮೆಚ್ಚಿದ ರೆಬಲ್ ಸ್ಟಾರ್ ಸ್ಟಾರ್ ಅಂಬರೀಶ್ ಅವರು ಅವರ ಪರಿಸ್ಥಿತಿನ ತಿಳಿದು ಕಷ್ಟದಲ್ಲಿರುವ ಧೋನಿಯವರಿಗ 2 ಲಕ್ಷ ಮೌಲ್ಯದ ಚೆಕ್ಕನ್ನು ನೀಡಿದ್ದಾರಂತೆ. ಇದನ್ನು ಒಮ್ಮೆ ಧೋನಿ ಅವರು ಕೂಡ ಸಂದರ್ಶನವೊಂದರಲ್ಲಿ ಹೇಳಿ ಕೊಂಡಿದ್ದಾರೆ. ಇನ್ನು ಕೆಲ ಮಾಧ್ಯಮಗಳಲ್ಲಿ ಧೋನಿಯವರಿಗೆ ರೆಬಲ್ ಸ್ಟಾರ್ ಅಂಬರೀಶ್ ಅವರು ಹತ್ತು ಲಕ್ಷದ ಚೆಕ್ಕನ್ನು ಕೊಟ್ಟಿದ್ದಾರೆ ಎಂಬ ಸುದ್ದಿ ಕೂಡ ಪ್ರಸಾರವಾಗಿತ್ತು. ಇನ್ನು ಧೋನಿಯವರ rs.50000 ಚೆಕ್ಕನ್ನು ನೀಡಿದ್ದಾರೆ ಎಂದು ಕೂಡ ಹೇಳಿದ್ದರು ಎಂದು ಪ್ರಸಾರವಾಗಿತ್ತು. ಇನ್ನು ಒಟ್ಟಾರೆಯಾಗಿ ರೆಬಲ್ ಸ್ಟಾರ್ ಅಂಬರೀಶ್ ಅವರು ಧೋನಿಯವರ ಆರಂಭಿಕ ದಿನಗಳಲ್ಲಿ ಆರ್ಥಿಕವಾಗಿ ಸಹಾಯ ಮಾಡುವುದರ ಮೂಲಕ ಅವರ ಪ್ರತಿಭೆಗೆ ಮನ್ನಣೆಯನ್ನು ನೀಡಿದ್ದರು ಎನ್ನುವುದಂತೂ ಸತ್ಯ.

Comments are closed.