Neer Dose Karnataka
Take a fresh look at your lifestyle.

ಅಂಬರೀಷ್ ಕರೆದರೇ ಬರುತ್ತಾರೋ ಇಲ್ಲವೋ ಎಂದು ಎತ್ತಾಕೊಂಡ್ ಬಂದು ಎಂದಿದ್ದ ಪೊಲೀಸ್, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಕಲಿಯುಗ ಕರ್ಣ ಎಂದು ಖ್ಯಾತರಾಗಿದ್ದಂತಹ ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ರವರು ಎಲ್ಲರ ನೆಚ್ಚಿನ ನಟ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿ ಕೂಡ ಎಲ್ಲರ ಮನಗೆದ್ದವರು. ಅಂದಹಾಗೆ ಅಂಬರೀಶ್ ರವರು ಕನ್ನಡ ಚಿತ್ರರಂಗದಲ್ಲಿ ಮಾಸ್ ಪಾತ್ರಗಳಲ್ಲಿ ಎಲ್ಲರ ಮನ ಗೆದ್ದಂತಹ ನಟ. ಇನ್ನು ಕನ್ನಡ ಚಿತ್ರರಂಗದಲ್ಲಿ ಅಂಬರೀಶ್ರವರ ಹಠ ಹಾಗೂ ಧೈರ್ಯ ಎಲ್ಲರಿಗೂ ಪರಿಚಯವಾಗಿರೋದೆ.

ಅಂಬರೀಶ್ ನವರು ಸಹಾಯವೇ ಆಗಲಿ ಏನನ್ನೇ ಆಗಲಿ ಹೇಳಿದ ಮೇಲೆ ಎಷ್ಟೇ ಕಷ್ಟವಾದರೂ ಕೂಡ ಅದನ್ನು ಹೇಳಿದೆ ಸಮಯದಲ್ಲಿ ಮಾಡುವುದು ಅವರ ಗುಣ ವಿಶೇಷತೆ. ಇನ್ನು ಇಡೀ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ನಿಂದ ಹಿಡಿದು ಮಾಲಿವುಡ್ನ ತನಕ ಅತ್ಯಂತ ಹೆಚ್ಚು ಸೆಲೆಬ್ರಿಟಿ ಗೆಳೆಯರನ್ನು ಹೊಂದಿರುವ ಏಕೈಕ ನಟಿಸಿರೋದು ಕನ್ನಡದ ಹೆಮ್ಮೆಯ ನಟ ಅಂಬರೀಶ್ ಅವರು. ಗೆಳೆತನ ಕೋಸ್ಕರ ಏನು ಬೇಕಾದರೂ ಮಾಡಲು ಸಿದ್ಧರಿರುವ ವ್ಯಕ್ತಿತ್ವ ಅಂಬರೀಶ್ರವರದ್ದು. ಇನ್ನು ಒಮ್ಮೆ ಪೋಲಿಸ್ ರವರು ಅಂಬರೀಷ್ ಅವರನ್ನು ಎತ್ತಾಕಿಕೊಂಡು ಬರಲು ಹೇಳಿದ್ದರು ಎಂದರೆ ನೀವು ನಂಬುತ್ತೀರೋ ಸ್ನೇಹಿತರೆ. ನೀವು ನಂಬದಿದ್ದರೂ ಇದು ನಡೆದಿರುವುದು ಸತ್ಯ.

ಹೌದು ಸ್ನೇಹಿತರೆ ನಂಜನಗೂಡಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಡಿಐಜಿ ಹಾಗೂ ಎಸ್ಪಿ ಅಂಬರೀಶ್ ಅವರನ್ನು ಎಲ್ಲಿದ್ದಾನೆ ಅವರನ್ನು ಬರ ಕೇಳು ಇಲ್ಲಾಂದ್ರೆ ಎತ್ತಾಕಿಕೊಂಡು ಬಾ ಎಂದು ಹೇಳಿದ್ದಾರಂತೆ, ಯಾಕೆಂದರೆ ಪಾರ್ಟಿ ಮಾಡುತ್ತಲೇ ಇರುತ್ತಾರೆ, ಕರೆದರೇ ಬರುತ್ತಾರೋ ಇಲ್ಲವೋ ಎಂದು ಎತ್ತಕೊಂಡು ಬನ್ನಿ ಅಂದಿದ್ದರಂತೆ, ಇದಾದ ಬಳಿಕ ಎಲ್ಲರ ಮುಂದೆ ಹೀಗೆ ಹೇಳಿದ ಬಳಿಕ ಅದೇ ದಿನ ರಾತ್ರಿ ಅಂಬರೀಶ್ ಹಾಗೂ ಎಸ್ಪಿ ಹಾಗೂ ಡಿಐಜಿ ಎಲ್ಲರೂ ಸೇರಿಕೊಂಡು ಪಾರ್ಟಿ ಕೂಡ ಮಾಡುತ್ತಿದ್ದರಂತೆ. ಕೊನೆಗೆ ಗೊತ್ತಾಗಿದ್ದು ಅವರಿಬ್ಬರು ಸ್ನೇಹಿತರು ಎಂದು. ಅಷ್ಟರಮಟ್ಟಿಗೆ ಎಲ್ಲಾ ಪ್ರದೇಶದಲ್ಲಿ ತನ್ನ ಪರಿಚಯದವರನ್ನು ಇಟ್ಟುಕೊಂಡಿದ್ದರು ಅಂಬರೀಶ್ ಅವರು. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಇನ್ಫ್ಲುಎನ್ಸ್ ಹೊಂದಿರುವ ನಟ ಎಂದು ಅಂಬರೀಶ್ ಅವರು. ಕನ್ನಡ ಚಿತ್ರರಂಗಕ್ಕೆ ಏನೇ ಸಮಸ್ಯೆಯಾದರೂ ಕೂಡ ಮುಂದೆ ನಿಂತು ಲೀಡರ್ ನಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದವರು ಅವರು.

Comments are closed.