Neer Dose Karnataka
Take a fresh look at your lifestyle.

ಕನ್ನಡತಿಯಲ್ಲಿ ಇದೀಗ ಮತ್ತೊಂದು ತಿರುವು, ಹರ್ಷನ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರಾ ಭುವಿ?? ಮತ್ತೊಂದು ದೊಡ್ಡ ಟ್ವಿಸ್ಟ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೊನೆಗೂ ಜನರಿಗೆ ಅತ್ಯಂತ ಕುತೂಹಲ ಮೂಡಿಸಿದ್ದ ದಿನ ಬಂದೇ ಬಿಟ್ಟಿದೆ. ಹರ್ಷ ಭುವಿಯ ಪ್ರೀತಿ ನಿವೇದನೆಯ ಎಪಿಸೋಡ್ ಗಳು ಇನ್ನೇನು ಪ್ರಸಾರವಾಗಲಿವೆ. ಭುವಿಯ ಹುಟ್ಟುಹಬ್ಬವನ್ನು ಯಾರಿಗೂ ಹೇಳದೇ ಹಾಗೆಯೇ ಮುಚ್ಚಿಟ್ಟುಕೊಂಡರೂ ಹೇಗೋ ಗೊತ್ತು ಮಾಡಿಕೊಂಡ ಹರ್ಷ ಕೊನೆಗೂ ಭುವನೇಶ್ವರಿಯ ಹುಟ್ಟುಹಬ್ಬವನ್ನು ಅಚರಿಸಲು ಅವರ ಮನೆಯಲ್ಲಿಯೇ ಸಿದ್ಧತೆ ಮಾಡಿಕೊಂಡಿದ್ದ.

ಭುವಿಯ ತಂಗಿ ಬಿಂದು ಹಾಗೂ ಹರ್ಷ ದಿನವೆಲ್ಲಾ ಕೂತು ’ಕನ್ನಡತಿ’ಯ ಹುಟ್ಟುಹಬ್ಬವನ್ನು ಆಚರಿಸಲು ಮನೆಯನ್ನೆಲ್ಲಾ ಅಲಂಕರಿಸಿದ್ದರು. ದೀಪಗಳ ಅಲಂಕಾರಗಳ ನಡುವೆ ಟೀಚರ್ ಚಿಹ್ನೆಯ ಸುಂದರವಾದ ಕೇಕ್, ಸುತ್ತಲೂ ಹೂವಿನ ಅಲಂಕಾರ, ಭುಮಿ ಮನೆಗೆ ಬರುತ್ತಿದ್ದಂತೆ ದೊಡ್ಡದೊಂದ ಸರ್ಪೈಸ್ ಕಾದಿತ್ತುಆಕೆಗೆ. ಹೌದು ರಾತ್ರೆವರೆಗೂ ಮನೆಗೆ ಬರದಂತೆ ಭುವನೇಶ್ವರಿಯನ್ನು ತಡೆದ ಬಿಂದು ಕೊನೆಗೆ ಭುವಿ ಮನೆಗೆ ಬಂದಾಗ ಕೂಡಲೇ ಅವಳ ಕಣ್ಣು ಕಟ್ಟಿ ಶಾಕ್ ನೀಡಿದ್ದಾಳೆ. ಇನ್ನು ಕಣ್ಣುತೆಗೆದಾಗ ಹರ್ಷ ಕಣ್ಮುಂದೆ ನಿಂತಿದ್ದು ಭುವಿಗೆ ಇನ್ನಷ್ಟು ಸಂತೋಷವನ್ನು ತಂದಿದೆ.

ಇನ್ನು ಭುವಿಗೆ ಯಾರು ಇಷ್ಟ ಎಂದು ಬಲೂನಿನ ಮೇಲೆ ಬರೆದ ಹರ್ಷ, ಹರ್ಷ ಎಂಬ ಹೆಸರಿನ ಬಲೂನನ್ನು ಮಾತ್ರ ಭುವಿ ಕೈ ಸೇರದೇ ಇದ್ದಿದ್ದು ಎಲ್ಲರೂ ಬೇಸರಪಡುವಂತಾಯಿತು. ಇನ್ನು ಭುವಿಯೇ ತಾನು ಹುಡುಕುತ್ತಿದ್ದ ಸೌಪರ್ಣಿಕಾ ಎಂದು ಗೊತ್ತಾದ ಮೇಲಂತೂ ಅವನ ಖುಷಿಗೆ ಪಾರವೇ ಇರಲಿಲ್ಲ. ಭುವಿಯ ಹುಟ್ಟುಹಬ್ಬದ ದಿನವೇ ಗುಟ್ಟಾಗಿ ತನ್ನ ಪ್ರೀತಿ ನಿವೇದನೆಯನ್ನು ಮಾಡಿಕೊಳ್ಳಲು ಭುವಿಗಾಗಿ ವಿಶೇಷ ಇವೆಂಟ್ ನ್ನು ಸಿದ್ಧ ಪಡಿಸಿಕೊಂಡಿದ್ದಾನೆ ಹರ್ಷ. ಜೊತೆಗೆ ಚಿನ್ನದ ಉಂಗುರವನ್ನೂ ಜೊತೆಯಲ್ಲೇ ಇಟ್ಟುಕೊಂಡು ತನ್ನ ಪ್ರೀತಿಯ ಹುಡುಗಿ ಒಪ್ಪಿದರೆ ಆಕೆಯ ಬೆರಳಿಗೆ ತೊಡಿಸಲು ಕಾಯ್ದಿದ್ದಾನೆ ಹರ್ಷ. ಆದರೆ ತನ್ನ ಪ್ರೀತಿಯ ಗೆಳತಿ ವರೂದಿನಿ ಹೀರೋನ ಒಪ್ಪಿಕೊಂಡರೆ ಆಕೆಗೆ ಬೇಸರವಾಗಬಹುದು ಎಂಬ ಕಾರಣಕ್ಕೆ ಹರ್ಷನ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರು ತಿರಸ್ಕರಿಸಿಬಿಡುತ್ತಾಳಾ ಎನ್ನುವುದೇ ವೀಕ್ಷಕರ ಆತಂಕ!

Comments are closed.