Neer Dose Karnataka
Take a fresh look at your lifestyle.

ಪುನೀತ್ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ ಉತ್ತರ ಭಾರತೀಯ, ಗರಂ ಆದ ಕಿಚ್ಚ ಸುದೀಪ್ ಪುತ್ರಿ. ಅಷ್ಟಕ್ಕೂ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ದೃವತಾರೆ ಆಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇಂದಿಗೆ ನಾಲ್ಕು ದಿನಗಳು ಕಳೆದಿವೆ. ಆದರೂ ಕೂಡ ಅವರು ಇಂದಿಗೂ ನಮ್ಮೊಂದಿಗೆ ನಗುನಗುತ್ತಾ ಇದ್ದಾರೆ ಎಂಬ ಭಾವನೆ ಎಲ್ಲರಲ್ಲೂ ಕೂಡ ಕಣ್ಣಂಚಲ್ಲಿ ನೀರು ಜಿನುಗುವಂತೆ ಮಾಡಿದೆ.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಕೋಟ್ಯಾಂತರ ಕನ್ನಡಿಗರನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಸಂಸ್ಕಾರಗಳನ್ನು ಸರ್ಕಾರ ಅತ್ಯಂತ ಅಚ್ಚುಕಟ್ಟಾಗಿ ಶಾಸ್ತ್ರೋಕ್ತವಾಗಿ ಸಕಲ ಸರ್ಕಾರಿ ಗೌರವ ಗಳಿಂದ ಕಂಠೀರವ ಸ್ಟುಡಿಯೋದಲ್ಲಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬುದಾಗಿ ಸರ್ಕಾರ ಬೆಂಗಳೂರಿನಾದ್ಯಂತ ಆಲ್ಕೋಹಾಲ್ ಮಾರಾಟ ನಿಷೇಧಿಸಿತ್ತು.

ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಪುನೀತ್ ರಾಜಕುಮಾರ್ ರವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಮಾತುಗಳು ಆಡಿದ್ದಾರೆ. ಇದನ್ನು ಕಿಚ್ಚ ಸುದೀಪ್ ರವರ ಪುತ್ರಿ ಸಾನ್ವಿ ಸುದೀಪ್ ರವರು ಖಂಡಿಸಿದ್ದಾರೆ. ಹೌದು ಗೆಳೆಯರೇ ಉತ್ತರ ಭಾರತದ ಕಿಡಿಗೇಡಿಯೊಬ್ಬ ರಾಜ್​ಕುಮಾರ್​​ ನಮ್ಮನ್ನು ತಡೆಯಲು ಸಾಧ್ಯವಿಲ್ಲ, ಅಂದರೆ ಕುಡಿಯುವುದನ್ನು ತಡೆಯಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೆ ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು ಮೂತ್ರ ಮಾಡುತ್ತೇವೆ ಎಂಬುದಾಗಿ ಅಮಾನವೀಯವಾಗಿ ಬರೆದು ಕೊಂಡಿದ್ದಾನೆ. ಇದಕ್ಕೆ ಸಾನ್ವಿ ಸುದೀಪ್ ರವರು ಕೇವಲ ಆಲ್ಕೋಹಾಲ್ ಸಿಗಲಿಲ್ಲ ಎಂಬ ಕಾರಣಕ್ಕೆ ಈ ತರಹ ಮಾಡಿದ್ದೀರಿ ಅಲ್ಲವೇ ನಿಮಗೆ ಮಾನವೀಯತೆ ಎನ್ನುವುದು ಇಲ್ಲವೆ ಎಂದು ಖಂಡಿಸಿದ್ದಾರೆ. ಇಂತಹ ನಾಲಾಯಕ್ ನನ್ ಮಕ್ಕಳಿಗೆ ಏನು ಮಾಡಬೇಕು ಎಂಬುದನ್ನು ನೀವೇ ಹೇಳಿ ಗೆಳೆಯರೇ.

Comments are closed.