Neer Dose Karnataka
Take a fresh look at your lifestyle.

ಪುನೀತ್ ಅವರ ಕೊನೆಯ ಆಸೆಯನ್ನು ನಿನ್ನೆ ನೆರವೇರಿಸಿ ಕಣ್ಣೀರಿಟ್ಟು ಹೊರಬಂದ ಪತ್ನಿ ಅಶ್ವಿನಿ. ಅಷ್ಟಕ್ಕೂ ನಡೆದ್ದಡೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರನ್ನು ಕಳೆದುಕೊಂಡ ದುಃಖ 13 ದಿನಗಳಾದರೂ ಕೂಡ ಒಂದಂಶವೂ ಕೂಡ ಕಡಿಮೆ ಆಗಿಲ್ಲ. ಅಂತಹ ಮಹಾನುಭಾವನನ್ನು ಕಳೆದುಕೊಂಡು ಕರುನಾಡು ಕಣ್ಣೀರಿಡುತ್ತಿದೆ. ಅದೆಷ್ಟೋ ಮನೆಯ ಒಲೆ ಉರಿಸಿದಂತಹ ಅಪ್ಪು ಪಂಚಭೂತಗಳಲ್ಲಿ ಲೀನವಾಗಿದ್ದಾರೆ ಎನ್ನೋದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಮ್ಮನ್ನೆಲ್ಲ ಅಗಲಿ ಈಗಾಗಲೇ 13 ದಿನಗಳು ಕಳೆದಿವೆ. ದಿನಗಳೆಷ್ಟೇ ಕಳೆದರು ಅಪ್ಪು ಅವರ ನೆನಪುಗಳು ಸದಾ ಚಿರ ನೂತನ. ಅವರನ್ನು ಕಳೆದುಕೊಂಡಿರುವ ದುಃಖ ನಮಗೇ ಇಷ್ಟಿದೆ ಅಂದ್ರೆ ಇನ್ನು ಅವರ ಜೊತೆಗೆ ಹಲವಾರು ವರ್ಷಗಳಿಂದ ಸಂಸಾರ ನಡೆಸಿಕೊಂಡು ಬಂದಿರುವ ಅಶ್ವಿನಿ ಅವರಿಗೆ ಹೇಗಾಗಿರಬೇಡ.

ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರನ್ನು ಕಳೆದುಕೊಂಡಿರುವ ದುಃಖದಲ್ಲಿ ಹಲವಾರು ಅಭಿಮಾನಿಗಳು ಅಪ್ಪು ಅವರ ಹಾಂದೆಯೇ ತಮ್ಮ ಜೀವನವನ್ನು ಮುಗಿಸಿಕೊಂಡು ಹೊರಟಿದ್ದಾರೆ. ಅದರಲ್ಲೂ ಈಗಾಗಲೇ 14 ಜನ ಅಪ್ಪುವಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕಾಗಿಯೇ ಅಶ್ವಿನಿ ಅವರು ಶಿವಣ್ಣ ಹಾಗೂ ರಾಘಣ್ಣ ನವರು ಅಭಿಮಾನಿಗಳ ಎದುರು ದುಃಖವನ್ನು ತೋಡಿಕೊಳ್ಳದೇ ಎಲ್ಲರಿಗೂ ಸಮಾಧಾನ ಮಾಡುತ್ತಿದ್ದರು. ಇನ್ನು ನೆನ್ನೆ ದಿನವೂ ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ದೊಡ್ಡ ಕನಸೊಂದನ್ನು 12 ನೇ ದಿನದ ಕಾರ್ಯಕ್ರಮದಲ್ಲಿ ಈಡೇರಿಸಿ ನಂತರ ಕೂಡಲೇ ಮನೆಗೆ ತೆರಳಿದ್ದಾರೆ.

ಹೌದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಭೋಜನ ಪ್ರಿಯರಾಗಿದ್ದರು. ಅದರಲ್ಲೂ ನಾನ್ ವೆಜ್ ಅಂದ್ರೆ ಸಾಕು ಎಲ್ಲಿಲ್ಲದ ಪ್ರೀತಿ. ಒಮ್ಮೆ ಪುನೀತ್ ರಾಜ್ ಕುಮಾರ್ ಅವರು ನಮ್ಮ ಅಭಿಮಾನಿಗಳಿಗೆ ಒಮ್ಮೆ ದೊಡ್ಡ ರೀತಿಯಲ್ಲಿ ನಾನ್ ವೆಜ್ ಔತಣಕೂಟವನ್ನು ಏರ್ಪಡಿಸಬೇಕು ಎನ್ನುವುದಾಗಿ ಅಶ್ವಿನಿ ಅವರ ಬಳಿ ಹೇಳಿಕೊಂಡಿದ್ದರಂತೆ.

ಅದಕ್ಕಾಗಿ ನಿನ್ನೆ ಅಶ್ವಿನಿ ಅವರು ಅಭಿಮಾನಿಗಳಿಗೆ ದೊಡ್ಡದಾಗಿ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳು 28 ರಿಂದ 30 ಸಾವಿರ ಜನರವರೆಗೆ ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿದ್ದಾರೆ. ಅಪ್ಪು ಅವರ ಊಟವನ್ನು ಈ ರೀತಿ ತಿನ್ನಬಹುದು ಎಂದು ಯಾರೂ ಕೂಡ ಊಹಿಸಿರಲಿಲ್ಲ.

ಇನ್ನು ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಅಶ್ವಿನಿ ಅವರು ತಾವೇ ಊಟ ಬಡಿಸಿ ನಂತರ ಅಪ್ಪುವಿನ ನೆನಪನ್ನು ತಾಳಲಾಗದೆ ಕಣ್ಣೀರಿಡುತ್ತಾ ಕಾರಿನಲ್ಲಿ ಮನೆಗೆ ಬಂದಿದ್ದು ಎಲ್ಲರ ಹೃದಯವನ್ನು ಕಲಕುವಂತಿತ್ತು. ಇನ್ನು ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಬರುತ್ತಿದ್ದ ಎಲ್ಲಾ ಕಾರ್ಯಗಳನ್ನು ಕೂಡ ತಾನೇ ಮುಂದುವರಿಸಿಕೊಂಡು ಹೋಗುವುದಾಗಿ ಅಶ್ವಿನಿ ಅವರು ನಿರ್ಧರಿಸಿದ್ದಾರಂತೆ. ಅಪ್ಪು ಅವರನ್ನು ಕಳೆದುಕೊಂಡಿರುವ ದುಃಖ ಅಶ್ವಿನಿ ಅವರಿಂದ ದೂರವಾಗಿ ಅಪ್ಪು ಅವರಂತೆ ಜನಸೇವೆ ಮಾಡುವ ಶಕ್ತಿ ಅವರಿಗೆ ಹೆಚ್ಚಾಗಲಿ ಎಂದು ಹಾರೈಸೋಣ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.