Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಸರಣಿಗೂ ಮೊದಲೇ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಶಾಕ್?? ಕೊಹ್ಲಿ ದುಡುಕಿ ಮತ್ತೊಂದು ನಿರ್ಧಾರ ತೆಗೆದುಕೊಳ್ತಾರಾ??

ನಮಸ್ಕಾರ ಸ್ನೇಹಿತರೇ ಭಾರತ ತಂಡದಲ್ಲಿ ಧೀಢೀರ್ ಅಂತ ಆದ ಬೆಳವಣಿಗೆಗಳು ಮತ್ತಷ್ಟು ಚರ್ಚೆಗಳಿಗೆ ಕಾರಣವಾಗುತ್ತಿವೆ. ಮಳೆ ನಿಂತರೂ, ಮಳೆಯ ಹನಿ ನಿಲ್ಲುವುದಿಲ್ಲ ಅಂದ ಹಾಗೆ, ಭಾರತ ತಂಡದಲ್ಲಾದ ನಾಯಕತ್ವ ಬೆಳವಣಿಗೆಗಳು ಏಕೋ ತಂಡದ ಸಮತೋಲನವನ್ನು ಹಾಳು ಮಾಡಬಹುದಾ ಎಂಬ ಚರ್ಚೆಗಳು ನಡೆಯುತ್ತಿವೆ.

ಇನ್ನು ಇದಕ್ಕೆ ಸಂಭಂದಿಸಿದಂತೆ, ದಕ್ಷಿಣ ಆಫ್ರಿಕಾ ವಿರುದ್ದ ಸರಣಿಗೆ ಸದ್ಯ ಟೆಸ್ಟ್ ತಂಡಕ್ಕೆ ತಂಡವನ್ನು ಆಯ್ಕೆ ಮಾಡಿದೆ. ಆದರೇ ಟೆಸ್ಟ್ ಸರಣಿ ನಂತರ ನಡೆಯುವ ಮೂರು ಏಕದಿನ ಸರಣಿಗೆ ಈ ತನಕ ತಂಡವನ್ನು ಪ್ರಕಟಿಸಿಲ್ಲ. ಇನ್ನು ಏರಡರಿಂದ ಮೂರು ದಿನಗಳೊಳಗೆ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ವಾರಾಂತ್ಯದೊಳಗೆ ಭಾರತ ತಂಡ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಲಿದೆ.

ಈ ನಡುವೆ ವಿರಾಟ್ ಕೊಹ್ಲಿಯವರನ್ನ ಏಕಾಏಕಿ ಏಕದಿನ ತಂಡದ ನಾಯಕತ್ವದಿಂದ ಇಳಿಸಿದ್ದು ಹೆಚ್ಚು ಚರ್ಚೆಯಾಗುತ್ತಿದೆ. ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಏಕಪಕ್ಷೀಯವಾಗಿ ವಿರಾಟ್ ರನ್ನ ಕೆಳಗಿಳಿಸಿದೆ. ಈ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಬಹಳಷ್ಟು ಬೇಸರಿಸಿಕೊಂಡಿದ್ದಾರೆ. ಹೀಗಾಗಿ ಟೆಸ್ಟ್ ಸರಣಿ ಮುಗಿದ ಬಳಿಕ ವಿರಾಟ್ ಕೊಹ್ಲಿ ಭಾರತಕ್ಕೆ ವಾಪಸ್ ಆಗುವ ಚಿಂತನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. ಏಕದಿನ ಸರಣಿಯಿಂದ ತಾವಾಗಿಯೇ ಹಿಂದುಳಿಯಲು ಯೋಚಿಸುತ್ತಿರುವ ವಿರಾಟ್ ಕೊಹ್ಲಿ , ಇನ್ನು ದಿನಗಳೊಳಗೆ ತಾವು ಏಕದಿನ ಸರಣಿಗೆ ಆಯ್ಕೆಗೆ ಲಭ್ಯರಿಲ್ಲ ಎಂದು ತಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಘಟನೆ ಸಂಭವಿಸಿದರೇ, ಭಾರತ ತಂಡದ ಸಮತೋಲನತೆಯಲ್ಲಿ ಕೊರತೆ ಉಂಟಾಗಬಹುದು. ಅದನ್ನ ನೂತನ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಹೇಗೆ ಪರಿಹರಿಸುತ್ತಾರೆ ಎಂಬುದೇ ಈಗಿನ ಕುತೂಹಲವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.