Neer Dose Karnataka
Take a fresh look at your lifestyle.

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್, ಆರ್ಯವರ್ಧನ್ ಪಾತ್ರದಲ್ಲಿ ಬದಲಾವಣೆ. ನಡೆಯುತ್ತಿರುವುದಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಿರುತೆರೆಯ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮಟ್ಟದ ಸಂಚಲನವನ್ನು ಸೃಷ್ಟಿಸಿದೆ ಧಾರವಾಹಿ ಎಂದು ಅನಿರುದ್ಧ ನಟನೆಯ ಜೊತೆ ಜೊತೆಯಲಿ ದಾರವಾಹಿ. ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರವಾಗಲಿ ನಿಂದ ಇಂದಿನವರೆಗೂ ಕೂಡ ಟಿಆರ್ ಪಿ ವಿಚಾರದಲ್ಲಿ ಯಾರು ಕೂಡ ಬರೆಯಲಾಗದಂತಹ ಇತಿಹಾಸದ ದಾಖಲೆಯನ್ನು ಬರೆದಿತ್ತು.

ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾಗಳಿಂದ ದೂರವಾದ ನಂತರ ಅನಿರುದ್ಧ ರವರಿಗೆ ಕಿರುತೆರೆಯ ಮೂಲಕ ಜೊತೆ ಜೊತೆಯಲಿ ದಾರವಾಹಿ ಒಂದು ಒಳ್ಳೆ ಮೈಲೇಜ್ ನೀಡಿತ್ತು. ಆರ್ಯವರ್ಧನ ಪಾತ್ರದಲ್ಲಿ ಅನಿರುದ್ಧ ರವರು ಕರ್ನಾಟಕದ ಮನೆಮನೆಯ ಕೂಡ ಮೆಚ್ಚುವಂತಹ ನಟನಾಗಿ ಬಿಟ್ಟರು. ಕಿರುತೆರೆ ಪ್ರೇಕ್ಷಕರ ಜೊತೆ ಜೊತೆಯಲ್ಲಿ ದಾರವಾಹಿ ಅತ್ಯಂತ ವೇಗವಾಗಿ ಮನಸ್ಸಿಗೆ ಕನೆಕ್ಟ್ ಆಗುತ್ತದೆ. ಆರ್ಯವರ್ಧನ್ ಅನು ಹೀಗೆ ಹಲವಾರು ಪಾತ್ರಗಳು ಬಾಯಿ ಮಾತಾಗಿ ಬಿಟ್ಟಿದೆ. ಅದರಲ್ಲಿ ಪ್ರಮುಖವಾಗಿ ಅನಿರುದ್ಧ ರವರು ಆರ್ಯವರ್ಧನ ಪಾತ್ರವನ್ನು ನಟಿಸಲಿಲ್ಲ ಬದಲಾಗಿ ಆ ಪಾತ್ರದಲ್ಲಿ ಜೀವಿಸಿದ್ದರು. ಅಷ್ಟರಮಟ್ಟಿಗೆ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ಅನಿರುದ್ಧ್ ಅವರ ಆರ್ಯವರ್ಧನ ಪಾತ್ರ ಬೇರೂರಿಬಿಟ್ಟಿತ್ತು. ಆದರೆ ಈಗ ಆರ್ಯವರ್ಧನ ಪಾತ್ರದಲ್ಲಿ ಬದಲಾವಣೆ ತರಲು ನಿರ್ದೇಶಕ ಆರೂರು ಜಗದೀಶ್ ರವರು ನಿರ್ಧರಿಸಿದ್ದಾರಂತೆ. ಬರೋಬ್ಬರಿ ಎರಡು ವರ್ಷಗಳಿಂದ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ರಂಜಿಸುತ್ತಾ ಬರುತ್ತಿದ್ದ ಆರ್ಯವರ್ಧನ ಪಾತ್ರವನ್ನು ಅನಿರುದ್ಧ್ ಅವರ ನಟನೆಯಲ್ಲಿ ಬಿಟ್ಟರೆ ಬೇರೆ ಯಾರ ನಟನೆಯಲ್ಲೂ ಕೂಡ ಊಹಿಸಲು ಸಾಧ್ಯವಿಲ್ಲ.

ಹೌದು ಗೆಳೆಯರೇ ಅನಿರುದ್ ರವರ ಆರ್ಯವರ್ಧನ ಪಾತ್ರದಲ್ಲಿ ಬದಲಾವಣೆ ತೋರಲಿದ್ದಾರೆ. ಅದೇನೆಂದರೆ ಇಲ್ಲಿಯವರೆಗೂ ಕೂಡ ಜೊತೆಯಲ್ಲಿ ದಾರವಾಹಿಯಲ್ಲಿ ಆರ್ಯವರ್ಧನ್ ಅವರ ಒಳ್ಳೆಯ ಗುಣಗಳನ್ನು ತೋರಿಸಲಾಗಿತ್ತು ಹೀರೋ ಮಾದರಿಯಲ್ಲಿ ಅವರು ಕಂಡುಬರುತ್ತಿದ್ದರು. ಆದರೆ ಇನ್ನು ಮುಂದಿನದಿನಗಳಲ್ಲಿ ಕಥೆಯಲ್ಲಿ ಟ್ವಿಸ್ಟ್ ಗಳನ್ನು ತರಲು ಆರ್ಯವರ್ಧನ್ ರವರ ವಿಲನ್ ಮಾದರಿಯ ಪಾತ್ರವನ್ನು ಪರಿಚಯಿಸಲಿದ್ದಾರೆ ಎಂಬುದಾಗಿ ಅನಿರುದ್ಧ ರವರೆ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಗಳಲ್ಲಿ ಹಂಚಿಕೊಂಡಿದ್ದಾರೆ. ಹೀರೋ ಆಗಿ ಕಂಡಿದ್ದ ಆರ್ಯವರ್ಧನ್ ರವರನ್ನು ವಿಲನ್ ಆಗಿ ಕಿರುತೆರೆ ಪ್ರೇಕ್ಷಕರು ಹೇಗೆ ಆದರಿಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Comments are closed.