Neer Dose Karnataka
Take a fresh look at your lifestyle.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಅಮೂಲ್ಯ ರವರ ಸೀಮಂತ ಶಾಸ್ತ್ರ ಹೇಗಿತ್ತು ಗೊತ್ತೇ?? ಫೋಟೋಗಳು ಬಿಡುಗಡೆ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಮಣಿಯರು ಇದ್ದಾರೆ. ಇನ್ನು ನಾವು ಮಾತನಾಡಲು ಹೊರಟಿರುವ ನಟಿ ಬಾಲ್ಯದಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಮಿಂಚಿಕೊಂಡು ಬಂದವರು. ನಂತರ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಹೌದು ನೀವು ಕರೆಕ್ಟಾಗಿ ಗೆಸ್ ಮಾಡಿದ್ದೀರಾ ನಾವು ಮಾತನಾಡುತ್ತಿರುವುದು ನಟಿ ಅಮೂಲ್ಯ ಅವರ ಕುರಿತಂತೆ. ನಟಿ ಅಮೂಲ್ಯ ಅವರು ಚಿಕ್ಕವಯಸ್ಸಿನಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ರವರಂತಹ ಸ್ಟಾರ್ ನಟರೊಂದಿಗೆ ಬಾಲನಟಿಯಾಗಿ ನಟಿಸಿದ್ದವರು.

ಅವರ ಪ್ರತಿಭೆಯನ್ನುವುದು ಚಿಕ್ಕವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ವೀಕ್ಷಕರಿಗೆ ಪರಿಚಯವಾಗಿತ್ತು. ಇನ್ನು ಅವರು ನಾಯಕ ನಟಿಯಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಹೀಗೆ ತನ್ನ ಸಿನಿ ವೃತ್ತಿಯ ಉತ್ತುಂಗ ದಲ್ಲಿದ್ದ ಸಮಯದಲ್ಲಿಯೇ 2017 ರಲ್ಲಿ ರಾಜಕೀಯ ಹಿನ್ನೆಲೆಯುಳ್ಳಂತಹ ಜಗದೀಶ್ ಅವರನ್ನು ಮದುವೆಯಾಗುತ್ತಾರೆ. ಮದುವೆಯಾದ ಮೇಲೆ ನಟಿ ಅಮೂಲ್ಯ ರವರ ಬಹುತೇಕ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಿರುತ್ತಾರೆ. ಆದರೆ ಈಗ ಮದುವೆಯಾಗಿ ನಾಲ್ಕು ವರ್ಷದ ನಂತರ ನಟಿ ಅಮೂಲ್ಯ ಅವರು ಗರ್ಭಿಣಿಯಾಗುವ ಮೂಲಕ ಎಲ್ಲರಿಗೂ ಸಂತೋಷವನ್ನು ನೀಡಿದ್ದರು.

ನಟಿ ಅಮೂಲ್ಯ ರವರು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಮಗುವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಮುನ್ನ ಎನ್ನುವಂತೆ ಸಂಪ್ರದಾಯದ ಪ್ರಕಾರ ಅಮೂಲ್ಯ ರವರಿಗೆ ಸೀಮಂತ ಶಾಸ್ತ್ರ ನಡೆದಿದೆ. ಈ ಸಮಾರಂಭದ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಅಮೂಲ್ಯ ರವರು ಕೂಡ ತಾವು ತಾಯಿಯಾಗುತ್ತಿರುವ ಸಂತೋಷವನ್ನು ಸೀಮಂತ ಶಾಸ್ತ್ರದಲ್ಲಿ ಅನುಭವಿಸುತ್ತಿರುವುದು ಕ್ಯಾಮರ ಕಣ್ಣಿಗೆ ಕಂಡುಬಂದಿದೆ. ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಕೂಡ ಬಂಧು ಅಮೂಲ್ಯ ರವರಿಗೆ ಹಾರೈಸಿ ಹೋಗಿದ್ದಾರೆ.

Comments are closed.