Neer Dose Karnataka
Take a fresh look at your lifestyle.

ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಹಾಗೂ ವಿಷ್ಣು ಸರ್ ರವರ ಮಟ್ಟಕ್ಕೆ ಬೆಳೆದಿರುವ ಇಂದಿನ ನಟ ಯಾರಂತೆ ಗೊತ್ತೇ?? ತೆಲುಗಿನ ನಟ ಆಲಿ ಹೇಳಿದ್ದೇನು ಗೊತ್ತೇ?

ನಮ್ಮ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಹೃದಯದಲ್ಲೂ ನೆಲೆಸಿರುವ ಕಲಾವಿದರು ವರನಟ ಡಾ.ರಾಜ್ ಕುಮಾರ್, ಸಾಹಸಸಿಂಹ ಡಾ.ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರು. ಈ ಮೂವರು ಕಲಾವಿದರು ಕನ್ನಡ ಚಿತ್ರರಂಗದ ಮೂರು ಪಿಲ್ಲರ್ ಗಳು ಎಂದರೆ ತಪ್ಪಾಗುವುದಿಲ್ಲ. ಕನ್ನಡ ಚಿತ್ರರಂಗ ಎಂದರೆ ಎಲ್ಲರೂ ನೆನಪು ಮಾಡಿಕೊಳ್ಳುವುದು ಈ ಮೂವರನ್ನು. ಇಡೀ ಭಾರತ ಚಿತ್ರರಂಗವೇ ಕನ್ನಡದ ಈ ಮೂವರು ಕಲಾವಿದರನ್ನು ನೋಡಿ ಹೆಮ್ಮೆ ಪಡುತ್ತಿತ್ತು, ಇವರಿಗೆ ವಿಶೇಷ ಗೌರವ ಕೊಡುತ್ತಿತ್ತು. ಈಗಿನ ಜೆನೆರೇಷನ್ ನಲ್ಲಿ ಈ ಕಲಾವಿದರ ಹಾಗೆ ಎತ್ತರಕ್ಕೆ ಬೆಳೆಡಿರುವ ಕನ್ನಡ ಚಿತ್ರರಂಗದ ಕಲಾವಿದ ಯಾರು ಎಂದು ತೆಲುಗು ಚಿತ್ರರಂಗದ ಖ್ಯಾತ ನಟಿ ಆಲಿ ಅವರು ಹೇಳಿದ್ದಾರೆ. ಆ ನಟ ಯಾರು ಗೊತ್ತಾ?

ತೆಲುಗು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವವರು ನಟ ಆಲಿ, ಹಲವು ಹಾಸ್ಯ ಪ್ರಧಾನ ಪಾತ್ರಗಳಲ್ಲಿ ನಟಿಸಿ, ತೆಲುಗಿನಲ್ಲಿ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿ ಕೂಡ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇತ್ತೀಚೆಗೆ ಆಲಿ ಅವರು ನಟ, ಕ್ರಿಕೆಟರ್ ಹಾಗು ಬಿಗ್ ಬಾಸ್ ಸ್ಪರ್ಧಿ  ರಾಜೀವ್ ಅವರ ಉಸಿರೇ ಉಸಿರೇ ಸಿನಿಮಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಗ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ ಆಲಿ ಅವರು, ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಡಾ.ಅಂಬರೀಶ್ ಅವರ ನಂತರ ಎಲ್ಲರ ಮನಸ್ಸನ್ನು ಗೆದ್ದಿರುವ ಕಲಾವಿದ ಅಂದ್ರೆ ಅದು ಸುದೀಪ್ ಅವರು. ಕನ್ನಡ ಇಂಡಸ್ಟ್ರಿ ಮಾತ್ರವಲ್ಲದೆ ನಮ್ಮ ಇಂಡಸ್ಟ್ರಿಯಲ್ಲಿ ಕೂಡ ಸುದೀಪ್ ಅವರನ್ನು ತುಂಬಾ ಇಷ್ಟಪಡುತ್ತಾರೆ..” ಎಂದು ಸುದೀಪ್ ಅವರ ಬಗ್ಗೆ ಮಾತನಾಡಿದ್ದಾರೆ ನಟ ಆಲಿ..

ನಟ ಆಲಿ ಅವರು ಹೇಳಿದ್ದು ನಿಜವೇ.. ಕಿಚ್ಚ ಸುದೀಪ್ ಅವರು ಹುಚ್ಚ ಸಿನಿಮಾ ಮೂಲಕ ಗುರುತಿಸಿಕೊಳ್ಳಲು ಶುರು ಮಾಡಿದರು. ಅದಾದ ಬಳಿಕ ಅವರು ತಿರುಗಿ ನೋಡಿದ್ದೇ ಇಲ್ಲ. ಕನ್ನಡದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳು, ತೆಲುಗಿನಲ್ಲಿ ಈಗ ಸಿನಿಮಾದಲ್ಲಿ ನಟಿಸಿದ ನಂತರ ಅಲ್ಲಿಯೂ ಬಹುಬೇಡಿಕೆಯ ನಟನಾದರು. ಬಳಿಕ ತಮಿಳು, ಹಿಂದಿ ಭಾಷೆಗಳಲ್ಲಿ ಸಹ ನಟಿಸಿ, ಸೈ ಎನ್ನಿಸಿಕೊಂಡರು. ಎಲ್ಲಾ ಭಾಷೆಯ ಚಿತ್ರರಂಗದವರು ಸಹ ಸುದೀಪ್ ಅವರಿಗೆ ಗೌರವ ಕೊಡುತ್ತಾರೆ. ಸುದೀಪ್ ಅವರು ತಮ್ಮ ಸಿನಿಮಾಗೆ ಬೇಕು ಎಂದು ಕಾಲ್ ಶೀಟ್ ಪಡೆಯುವವರು ಸಹ ಇದ್ದಾರೆ. ಈಗಿನ ಜೆನೆರೇಷನ್ ನಲ್ಲಿ, ಎಲ್ಲಾ ಭಾಷೆಗಳಲ್ಲೂ ಬೇಡಿಕೆ ಉಳಿಸಿಕೊಂಡು, ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಸುದೀಪ್ ಅವರು ಎಂದರೆ ತಪ್ಪಾಗುವುದಿಲ್ಲ.

Comments are closed.