Neer Dose Karnataka
Take a fresh look at your lifestyle.

ರಾಮ ಭಕ್ತ ಹನುಮನ ಆಶೀರ್ವಾದ ಹೊಂದಿರುವ ನಾಲ್ಕು ರಾಶಿಗಳು ಯಾವ್ಯಾವು ಗೊತ್ತೇ?? ಸದಾ ಹನುಮನ ಕೃಪೆ ಇವರ ಮೇಲೆ..

ನಮ್ಮ ಹಿಂದೂ ದೇವರುಗಳ ಪೈಕಿ ಆಂಜನೇಯ ಸ್ವಾಮಿಯನ್ನು ಪ್ರಧಾನ ದೇವರು ಎಂದು ಪರಿಗಣಿಸಲಾಗುತ್ತದೆ. ಆಂಜನೇಯ ಸ್ವಾಮಿ ಅಮರರು, ಅವರು ಅಮರರಾಗಿ ಇರುವಂತೆ ಸೀತಾಮತೆ ವರ ನೀಡಿದ್ದರು ಎಂದು ನಂಬಲಾಗುತ್ತದೆ. ಆಂಜನೇಯ ಸ್ವಾಮಿಯನ್ನು ಪೂಜಿಸಿ ಅವರ ಕೃಪೆಗೆ ಪಾತ್ರರಾದರೆ, ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಎಂದು ನಂಬಿಕೆ ಇದೆ. ನಮಗೆಲ್ಲ ಗೊತ್ತಿರುವ ಪ್ರಕಾರ ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳಿವೆ ಅವುಗಳಲ್ಲಿ ಕೆಲವು ರಾಶಿಗಳ ಮೇಲೆ ಆಂಜನೇಯ ಸ್ವಾಮಿಯ ವಿಶೇಷ ಕೃಪೆ ಇದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಜ್ಯೋತಿಷ್ಯದ ಪ್ರಕಾರ ಮೇಷ ರಾಶಿಯವರ ಮೇಲೆ ಆಂಜನೇಯ ಸ್ವಾಮಿಯ ವಿಶೇಷ ಕೃಪೆ ಇರುತ್ತದೆ. ಮೇಷ ರಾಶಿಯವರಲ್ಲಿ ಬಲವಾದ ಇಚ್ಛಾ ಶಕ್ತಿಯಿದೆ. ಮೇಷ ರಾಶಿಯಲ್ಲಿ ಜನಿಸಿರುವವರು ಆಂಜನೇಯ ಸ್ವಾಮಿಯ ಕೃಪೆ ಪಡೆಯಲು, ಪ್ರತಿದಿನ ಶ್ರೀರಾಮನಾಮವನ್ನು ಜಪಿಸಬೇಕು. ಈ ಜಪ ಮಾಡುವುದರಿಂದ ಆಂಜನೇಯ ಸ್ವಾಮಿಯ ಅನುಗ್ರಹ ದೊರೆತು, ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಕುಂಭ ರಾಶಿ :-ಈ ರಾಶಿಯ ಮೇಲೆ ಆಂಜನೇಯ ಸ್ವಾಮಿಯ ಕೃಪೆ ಇರುವ ಕಾರಣ, ಕುಂಭ ರಾಶಿಯವರು ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತಾರೆ. ಆಂಜನೇಯ ಸ್ವಾಮಿಯ ವಿಶೇಷ ಕೃಪೆ ಇರುವುದರಿಂದ, ಕುಂಭ ರಾಶಿಯವರಿಗೆ ಹಣದ ಸಮಸ್ಯೆ ಬರುವುದೇ ಇಲ್ಲ. ಆಂಜನೇಯ ಸ್ವಾಮಿಯ ಕೃಪೆ ಇರುವುದರಿಂದ, ಕುಂಭ ರಾಶಿಯವರ ಕಷ್ಟಗಳು ಕ್ಷಣಗಳಲ್ಲಿ ದೂರವಾಗುತ್ತದೆ.

ಸಿಂಹ ರಾಶಿ :- ಜ್ಯೋತಿಷ್ಯದ ಪ್ರಕಾರ, ಸಿಂಹ ರಾಶಿಯವರ ಮೇಲೆ ಆಂಜನೇಯ ಸ್ವಾಮಿಯ ಕೃಪೆ ಇರುವ ಕಾರಣ ಇವರ ಜೀವನದಲ್ಲಿರುವ ಅಡೆತಡೆಗಳು ದೂರವಾಗುತ್ತದೆ. ಇದರಿಂದಾಗಿ ಕುಂಭ ರಾಶಿಯವರ ಆರ್ಥಿಕ ಸ್ಥಿತಿ ಸಹ ಬದಲಾಗುತ್ತದೆ. ಆಂಜನೇಯ ಸ್ವಾಮಿಯ ಅನುಗ್ರಹದಿಂದ ಈ ರಾಶಿಯವರ ಕೆಲಸ ಕಾರ್ಯಗಳಲ್ಲಿ ಏಳಿಗೆ ಹೊಂದುತ್ತಾರೆ..

ವೃಶ್ಚಿಕ ರಾಶಿ :- ಈ ರಾಶಿಯವರ ಮೇಲೆ ಆಂಜನೇಯ ಸ್ವಾಮಿಯ ವಿಶೇಷವಾದ ಆಶೀರ್ವಾದ ಇದೆ. ವೃಶ್ಚಿಕ ರಾಶಿಯವರು ಯಾವುದೇ ಕೆಲಸ ಆರಂಭಿಸಿದರು ಸಹ, ಅದರಲ್ಲಿ ಯಶಸ್ಸನ್ನು ನೋಡುತ್ತಾರೆ. ಇವದು ಶುರುಮಾಡುವ ಯಾವ ಕೆಲಸದಲ್ಲೂ ಅಡೆತಡೆ ಎನ್ನುವುದು ಬರುವುದೇ ಇಲ್ಲ. ಆಂಜನೇಯ ಸ್ವಾಮಿಯ ಕೃಪೆಯಿಂದ ಕೆಲಸದಲ್ಲಿ ಪ್ರೊಮೋಷನ್ ಸಿಗುತ್ತದೆ. ಆಂಜನೇಯ ಸ್ವಾಮಿಯ ಕೃಪೆಯಿಂದ ಇವರಿಗೆ ಅದೃಷ್ಟ ಒಲಿಯುತ್ತದೆ.

Comments are closed.