Neer Dose Karnataka
Take a fresh look at your lifestyle.

ಭರ್ಜರಿ ಆಟವಾಡಿ ಪಂದ್ಯ ಗೆಲ್ಲಿಸಿದ ದಿನೇಶ್ ಕಾರ್ತಿಕ್ ರವರ ಕುರಿತು ಪಂತ್ ಪಂದ್ಯ ಮುಗಿದ ಬಳಿಕ ಹೇಳಿದ್ದೆ ಬೇರೆ. ಏನಾದ್ರು ಗೊತ್ತೇ ನಾಯಕ??

ದಿನೇಶ್ ಕಾರ್ತಿಕ್ ಅವರು ಈ ವರ್ಷ ಆರ್.ಸಿ.ಬಿ ತಂಡದ ಪರಗಾಗಿ ಅದ್ಭುತವಾದ ಪ್ರದರ್ಶನ ನೀಡಿ, ಆರ್.ಸಿ.ಬಿ ತಂಡದ ಆಪತ್ಬಾಂಧವ ಎಂದು ಹೆಸರು ಪಡೆದುಕೊಂಡಿದ್ದರು. ಐಪಿಎಲ್ ಪಂದ್ಯಗಳು ನಡೆಯುವ ಸಮಯದಲ್ಲಿ ದಿನೇಶ್ ಕಾರ್ತಿಕ್ ಅವರು ಆರ್.ಸಿ.ಬಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು, ಅಲ್ಲದೆ ಐಪಿಎಲ್ ಪಂದ್ಯಗಳು ನಡೆಯುವಾಗ ಟೀಮ್ ಇಂಡಿಯಾಗೆ ಮತ್ತೆ ಬರುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅವಕಾಶ ಸಿಕ್ಕರೆ, ಮತ್ತೆ ಟೀಮ್ ಇಂಡಿಯಾಗೆ ಬರುವ ಆಸೆ ಇದೆ ಎಂದು ಹೇಳಿದ್ದರು.

ದಿನೇಶ್ ಕಾರ್ತಿಕ್ ಅವರಿಗೆ ಇದ್ದ ಇಂಗಿತ ಜೊತೆಗೆ, ಅವರು ಆರ್.ಸಿ.ಬಿ ತಂಡದ ಪರವಾಗಿ ನೀಡಿದ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನದಿಂದ ದಿನೇಶ್ ಕಾರ್ತಿಕ್ ಅವರು ಈಗ ಭಾರತದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವರ್ಸಸ್ ಭಾರತದ ಸರಣಿ ಪಂದ್ಯಗಳಿಗೆ ಸೆಲೆಕ್ಟ್ ಆಗಿದ್ದು, ಬಹಳ ಸಮಯದ ಬಳಿಕ ಟೀಮ್ ಇಂಡಿಯಾಗೆ ವಾಪಸ್ ಬಂದಿದ್ದಾರೆ. ಇದರಿಂದಾಗಿ ಡಿಕೆ ಅವರಿಗೆ ಬಹಳ ಸಂತೋಷವಾಗಿದೆ. ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಆಗಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದ ಕೊನೆಯ ಓವರ್ ಗಳಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ ಡಿಕೆ ಅವರು 30 ರನ್ ಗಳನ್ನು ಭಾರಿಸಿ, ಟೀಮ್ ಇಂಡಿಯಾಗೆ ಸಹಾಯಕವಾಗಿತ್ತು.

ಸೌತ್ ಆಫ್ರಿಕಾ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಕೇವಲ 27 ರನ್ ಗಳಲ್ಲಿ ದಿನೇಶ್ ಕಾರ್ತಿಕ್ ಅವರು 55 ರನ್ ಗಳನ್ನು ಸಿಡಿಸಿ, 9 ಫೋರ್ಸ್ ಮತ್ತು 2 ಸಿಕ್ಸರ್ ಗಳನ್ನು ಬಾರಿಸಿ ಅರ್ಧ ಶತಕ ಪೂರೈಸಿದರು. ಇದರ ಬಗ್ಗೆ ಕ್ಯಾಪ್ಟನ್ ಆಗಿರುವ ರಿಷಬ್ ಪಂತ್ ಅವರು ಏನು ಹೇಳಿದ್ದು ಹೀಗೆ..”ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರ ಜೊತೆಯಾಟ ಆಕ್ರಮಣಕಾರಿಯಾಗಿತ್ತು, ಇಬ್ಬರ ಜೊತೆಯಾಟದ ಬಗ್ಗೆ ಬಹಳ ಖುಷಿ ಇದೆ. ಇವರಿಬ್ಬರು ಸಹ ಎದುರಾಳಿ ತಂಡದ ಬೌಲರ್ ಗಳ ಮೇಲೆ ಒತ್ತಡ ಹೇರಿದ್ದರು. ವೈಯಕ್ತಿಕವಾಗಿ ನಾವೆಲ್ಲರೂ ಇನ್ನು ಸುಧಾರಣೆ ಅಗಬೇಕು.” ಎಂದು ಇಬ್ಬರನ್ನು ಹೊಗಲಿದ್ದಾರೆ ರಿಷಬ್ ಪಂತ್.

Comments are closed.