Neer Dose Karnataka
Take a fresh look at your lifestyle.

ಮುಸ್ಲಿಂ ಹುಡುಗಿಯನ್ನು ಉಸಿರಿಗಿಂತ ಹೆಚ್ಚಾಗಿ ಪ್ರೀತಿ ಮಾಡಿ, ಕೊನೆಗೂ ಮದುವೆಯಾದ. ಆದರೆ ಹೈಡ್ರಾಮಾ ನಂತರ ಕೊನೆಗೆ ಏನಾಗಿದೆ ಗೊತ್ತೇ??

ಪ್ರೀತಿ ಎನ್ನುವ ಅದೊಂದು ವಿಚಾರ ಎಂಥವರನ್ನು ಸಹ ಮರುಳು ಮಾಡಿಬಿಡುತ್ತದೆ. ಪ್ರೀತಿಗೆ ಬಲೆಗೆ ಬಿದ್ದವರು ಅದರಿಂದ ಹೊರಗೆ ಬರುವುದು ಬಹಳ ಕಷ್ಟ. ಸಾಕಷ್ಟು ಜನರು ಪ್ರೀತಿ ಮಾಡಿ ಮೋಸ ಹೋಗುತ್ತಾರೆ, ಇನ್ನಷ್ಟು ಜನರು ನಿಜವಾಗಿ ಪ್ರೀತಿ ಮಾಡಿದರು ಸಹ, ಒಂದಾಗಲು ಆಗುವುದಿಲ್ಲ. ಮತ್ತು ಕೆಲವರು ಎಲ್ಲವನ್ನು ಮೀರಿ ಮದುವೆಯಾದರು ಸಹ ಇನ್ನೊಂದಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಈಗಿನ ಕಾಲದಲ್ಲಿ ಅಂತರ್ಜಾತೀಯ ಮತ್ತು ಅಂತರ್ ಧರ್ಮಿಯ ವಿವಾಹಗಳು ಕಾಮನ್ ಎಂದು ಹೇಳಿದರು ಸಹ ಅವುಗಳಿಗೆ ಸಮಸ್ಯೆ ಹೆಚ್ಚಾಗಿಯೇ ಇರುತ್ತದೆ..

ಇಲ್ಲೊಬ್ಬ ಹುಡುಗ ಬಯಸಿ ಬಯಸಿ ಮುಸ್ಲಿಂ ಹುಡುಗಿಯನ್ನು ಮದುವೆಯಾದ, ಆದರೆ ನಂತರ ನಡೆದಿದ್ದೆ ಬೇರೆ. ಇವರಿಬ್ಬರ ಮದುವೆಯಲ್ಲಿ ದೊಡ್ಡ ಹೈ ಡ್ರಾಮಾ ನಡೆದು ಹೋಗಿದೆ. ಈ ಘಟನೆ ನಡೆದಿರುವುದು ನಮ್ಮ ರಾಜ್ಯದಲ್ಲೇ. ಹುಡುಗನ ಹೆಸರು ಕನಕರೆಡ್ಡಿ, ಹುಡುಗಿಯ ಹೆಸರು ದಿಲ್ಶಾದ್ ಬೇಗಂ. ಇವರಿಬ್ಬರು ಒಂದು ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸಿದರು, ಆದರೆ ಇವರಿಬ್ಬರ ಮದುವೆಗೆ ಮನೆಯವರು ಒಪ್ಪಿಗೆ ಕೊಡಲಿಲ್ಲ. ಹಾಗಾಗಿ ಇಬ್ಬರು ಓಡಿ ಹೋಗಿ ಮದುವೆಯಾಗಿ ತಮಗೆ ರಕ್ಷಣೆ ಬೇಕು ಎಂದು, ಕನಕಗಿರಿ ಪೊಲೀಸ್ ಠಾಣೆಗೆ ಬಂದರು. ಅಲ್ಲಿಗೆ ಹುಡುಗ ಹುಡುಗಿ ಇಬ್ಬರ ಕುಟುಂಬದವರು ಬಂದು, ಹುಡುಗಿಯನ್ನು ಒಪ್ಪಿಸುವ ಪ್ರಯತ್ನ ಮಾಡಿದರು. ಆದರೆ ಹುಡುಗಿ ಒಪ್ಪಲಿಲ್ಲ.

ತಾನು ಪ್ರೀತಿಸಿದ ಹುಡುಗನ ಜೊತೆಯಲ್ಲೇ ಇರುವುದಾಗಿ ಹಠ ಹಿಡಿಯುತ್ತಾಳೆ. ಆಗ ಪೊಲೀಸರು ಆಕೆಯನ್ನು ಮತ್ತು ಆಕೆಯ ಮನೆಯವರನ್ನು ಮಹಿಳಾ ಸಲಹಾ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಾರೆ, ಅಲ್ಲಿಯೂ ಸಹ ಹುಡುಗಿಯ ಮನವೊಲಿಸಲು ಪ್ರಯತ್ನ ಪಡುತ್ತಾರೆ, ಆದರೆ ಹುಡುಗಿ ಒಪ್ಪುವುದಿಲ್ಲ. ನಂತರ ಎಲ್ಲರನ್ನು ಪೊಲೀಸರು ತಾವರಗೇರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಾಗ, ಹುಡುಗಿಯ ಮನೆಯವರಿಗೆ ಕನ್ವಿನ್ಸ್ ಮಾಡಲು ಅವಕಾಶ ಕೊಡುತ್ತಾರೆ, ಆಗ ಹುಡುಗನ ಮನೆಯವರು ನಮಗೆ ಅವಕಾಶ ಕೊಡುವುದಿಲ್ಲ ಎಂದು ಗಲಾಟೆ ಮಾಡಲು ಶುರು ಮಾಡುತ್ತಾರೆ. ಈ ಗಲಾಟೆ ತಾರಕಕ್ಕೆ ಏರುತ್ತದೆ. ಆದರೆ, ಹುಡುಗಿಯನ್ನು ಮತ್ತೊಮ್ಮೆ ಒಪ್ಪಿಸುವ ಪ್ರಯತ್ನ ಮಾಡಿದರು ಕೂಡ ಆಕೆ ಒಪ್ಪುವುದಿಲ್ಲ. ಪ್ರೀತಿಸಿ ಮದುವೆಯಾದವನ ಜೊತೆಯಲ್ಲೇ ಇರುತ್ತಾಳೆ. ಈ ಪ್ರೀತಿಯ ಕತೆ ಏಳು ಬೀಳುಗಳನ್ನು ಕಂಡರು ಸಹ ಕೊನೆಗೆ ಒಳ್ಳೆಯ ದಾರಿಗೆ ಸಾಗಿತು

Comments are closed.