Neer Dose Karnataka
Take a fresh look at your lifestyle.

ಕೊನೆಗೂ ಸ್ಥಾನ ಪಲ್ಲಟ ಮಾಡಿದ ಸೂರ್ಯ ದೇವಾ: ಹಲವಾರು ರಾಶಿಗಳ ಕಷ್ಟ ಕಾಲ ಮುಗಿದು, ಅದೃಷ್ಟ ಯಾರಿಗೆಲ್ಲ ಸಿಗಲಿದೆ ಗೊತ್ತೇ??

ಜುಲೈ 16ರಂದು ರಾತ್ರಿ, ಸೂರ್ಯದೇವನು ಮಿಥುನ ರಾಶಿಯಿಂದ ಬಂದು, ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ಪ್ರವೇಶವನ್ನು ಸೂರ್ಯ ಸಂಕ್ರಾಂತಿ ಎಂದು ಕರೆಯುತ್ತಾರೆ. ಆಗಸ್ಟ್ 17ರ ವರೆಗೆ ಸೂರ್ಯದೇವ ಅದೇ ರಾಶಿಯಲ್ಲಿ ಇರಲಿದ್ದಾನೆ. ಈ ಸಂಕ್ರಮಣದ ಪರಿಣಾಮ, 12 ರಾಶಿಗಳ ಮೇಲೆ ಇರಲಿದೆ. ಇದರಿಂದಾಗಿ ಕೆಲವು ರಾಶಿಗಳಿಗೆ ತೊಂದರೆ ಸಹ ಆಗಲಿದೆ. ಸೂರ್ಯ ಸಂಚಾರ ಕೆಲವು ರಾಶಿಗಳಿಗೆ ಲಾಭ ತರಲಿದೆ. ಸೂರ್ಯ ಸಂಚಾರದ ಪರಿಣಾಮ 12 ರಾಶಿಗಳ ಮೇಲೆ ಹೇಗಿರಲಿದೆ ಎಂದು ನೋಡೋಣ ಬನ್ನಿ..

ಮೇಶ ರಾಶಿ :- ನಿರೀಕ್ಷೆ ಮಾಡಿರದ ಕೆಲವು ಘಟನೆಗಳು ನಡೆಯಲಿದೆ. ವಿವಾದಗಳು ಅಥವಾ ಕೆಟ್ಟ ಸುದ್ದಿಗಳನ್ನು ನೀವು ಕೇಳಬಹುದು. ಆಸ್ತಿಗೆ ಸಂಬಂಧ ಪಟ್ಟ ವಿಚಾರಗಳು, ಸರಿಹೋಗಲಿದೆ. ಕಾರ್ ಖರೀದಿ ಮಾಡುವ ಯೋಗವಿದೆ.

ವೃಷಭ ರಾಶಿ :- ಈ ಸಮಯದಲ್ಲಿ ಧೈರ್ಯ ಮತ್ತು ಶೌರ್ಯ ನಿಮ್ಮ ಜೊತೆ ಇರುತ್ತದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರಿಂದ, ಯಶಸ್ಸು ನಿಮ್ಮದಾಗುತ್ತದೆ. ಮನೆಯಲ್ಲಿ ಒಳ್ಳೆಯದಾಗುತ್ತದೆ. ಹಣದ ವಿಚಾರದಲ್ಲಿ ಲಾಭ ಆಗಲಿದೆ.

ಮಿಥುನ ರಾಶಿ :- ಜಗಳಗಳಿಂದ ತಪ್ಪಿಸಿಕೊಳ್ಳಿ, ನಿಮಗೆ ಕಣ್ಣಿನ ಸಮಸ್ಯೆ ಎದುರಾಗಬಹುದು. ಹಣದ ವಿಚಾರದಲ್ಲಿ ಲಾಭ ಪಡೆಯುತ್ತೀರಿ. ಕೆಲಸ ಮಾಡುವ ಕಡೆ ನಿಮ್ಮ ವಿರುದ್ಧ ಪಿತೂರಿ ನಡೆಯಬಹುದು. ಕೋರ್ಟ್ ಕೇಸ್ ಗಳನ್ನು ಇತ್ಯರ್ಥ ಮಾಡಿಕೊಳ್ಳಿ.

ಕರ್ಕಾಟಕ ರಾಶಿ :- ಇದು ನಿಮಗೆ ಒಳ್ಳೆಯ ಸಮಯ ಆಗಿದ್ದರು ಸಹ, ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಇನ್ನು ಕ್ರಿಯಾಶೀಲರಾಗುತ್ತೀರಿ.

ಸಿಂಹ ರಾಶಿ :- ನಿಮಗೆ ಧನಲಾಭ ಆಗುತ್ತದೆ. ಕಷ್ಟ ಪಟ್ಟು ಕೆಲಸ ಮಾಡಿದರೆ, ಯಶಸ್ಸು ಸಿಗುತ್ತದೆ. ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಶುರುವಾಗಬಹುದು. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರುತ್ತದೆ.

ಕನ್ಯಾ ರಾಶಿ :- ನಿಮ್ಮ ಆದಾಯ ಹೆಚ್ಚಾಗುತ್ತದೆ. ಯಶಸ್ಸು ಪಡೆಯುತ್ತೀರಿ. ನಿಮ್ಮ ನಿರ್ಧಾರ ಸರಿಯಾಗಿರುತ್ತದೆ. ದೊಡ್ಡ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಸಂತೋಷದ ಸುದ್ದಿಯನ್ನು ಪಡೆಯುತ್ತೀರಿ.

ತುಲಾ ರಾಶಿ :- ಅದ್ಭುತವಾದ ಯಶಸ್ಸು ನಿಮ್ಮದಾಗುತ್ತದೆ. ದೊಡ್ಡ ಹುದ್ದೆ ಸಿಗುತ್ತದೆ. ಶತ್ರುಗಳನ್ನು ಸೋಲಿಸುತ್ತೀರಿ. ಸರ್ಕಾರದಿಂದ ನಿಮಗೆ ಲಾಭ ಸಿಗುತ್ತದೆ. ತಾಯಿಯ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ.

ವೃಶ್ಚಿಕ ರಾಶಿ :- ನಿಮಗೆ ಯಶಸ್ಸು ಸಿಗುತ್ತದೆ. ಅದೃಷ್ಟ ನಿಮಗೆ ಬೆಂಬಲ ನೀಡುತ್ತದೆ. ಹಣದ ಲಾಭ ಸಿಗುತ್ತದೆ. ದೇವರ ಕೆಲಸಗಳನ್ನು ಮಾಡುತ್ತೀರಿ. ನಿಮ್ಮ ಆರ್ಥಿಕ ಶಕ್ತಿ ಚೆನ್ನಾಗಿರುತ್ತದೆ. ನಿಮ್ಮ ಹೊಸ ಯೋಜನೆಗಳ ಬಗ್ಗೆ ಯಾರಿಗೂ ತಿಳಿಸಬೇಡಿ.

ಧನು ರಾಶಿ :- ಅನಿರೀಕ್ಷಿತ ಘಟನೆಗಳನ್ನು ಕೇಳುತ್ತೀರಿ, ಕೆಟ್ಟ ಸುದ್ದಿಗಳನ್ನು ಕೇಳುವ ಹಾಗೆ ಆಗುತ್ತದೆ. ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಕೆಲಸದ ಜಾಗದಲ್ಲಿ ಬೇರೆಯವರು ತೊಂದರೆ ಉಂಟು ಮಾಡಬಹುದು. ವಿವಾದಗಳನ್ನು ತಾಳ್ಮೆಯಿಂದ ಬಗೆಹರಿಸಿ.

ಮಕರ ರಾಶಿ :- ದಾಂಪತ್ಯ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು. ವಿವಾದ ಮಾಡಿಕೊಳ್ಳಬೇಡಿ. ಸರ್ಕಾರದ ಸಹಾಯ ಸಿಗುತ್ತದೆ. ಸಂಬಂಧಿಕರ ಜೊತೆಗೆ, ಆರಾಮವಾಗಿ ಮಾತನಾಡಿ.

ಕುಂಭ ರಾಶಿ :- ಇದು ನಿಮಗೆ ಒಳ್ಳೆಯ ಸಮಯ ಆಗಿದ್ದು, ಯೋಚನೆ ಮಾಡಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡರೆ, ನಿಮಗೆ ಖಂಡಿತ ಯಶಸ್ಸು ಸಿಗುತ್ತದೆ. ಲಾಭ ಸಿಗುತ್ತದೆ ಹಾಗೂ ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ.

ಮೀನ ರಾಶಿ :- ನಿರೀಕ್ಷೆ ಮಾಡಿರದ ಫಲಿತಾಂಶ ನಿಮಗೆ ಸಿಗುತ್ತದೆ. ಹಣದಿಂದ ನಿಮಗೆ ಪ್ರಯೋಜನವಾಗಲಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಕುಟುಂಬದ ಹಿರಿಯರ ಬೆಂಬಲ ಸಿಗುತ್ತದೆ. ಜೀವನ ಸಂತೋಷದಿಂದ ಕೂಡಿರುತ್ತದೆ

Comments are closed.