Neer Dose Karnataka
Take a fresh look at your lifestyle.

ನಿಮ್ಮ ಮನೆಯಲ್ಲಿ ಹಣ ಸಮಸ್ಯೆಯೇ? ಹಾಗಿದ್ದರೆ ಒಂದು ನವಿಲು ಗರಿ ತೆಗೆದುಕೊಂಡು ಇಲ್ಲಿ ಇಟ್ಟರೆ, ಜನ್ಮದಲ್ಲಿ ಹಣದ ಸಮಸ್ಯೆ ಇರಲ್ಲ. ಏನು ಮಾಡ್ಬೇಕು ಗೊತ್ತೇ?

ನಮ್ಮ ಮನೆಗಳಲ್ಲಿ ಆಗುವ ಸಮಸ್ಯೆಗಳನ್ನು ಬಗೆಹರಿಸಿ, ಎಲ್ಲವೂ ಚೆನ್ನಾಗಿರುವ ಹಾಗೆ ಮಾಡಲು, ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸಿರಲು ವಾಸ್ತು ಶಾಸ್ತ್ರದಲ್ಲಿ ಹಲವು ಟಿಪ್ಸ್ ಗಳನ್ನು ನೀಡಿರುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನವಿಲುಗರಿ ಇಡುವುದರಿಂದ ಮನೆಯ ಹಣಕಾಸಿನ ಸಮಸ್ಯೆ ಕಡಿಮೆ ಆಗುತ್ತದೆ. ನವಿಲುಗರಿ ಶ್ರೀಕೃಷ್ಣನ ಕಿರೀಟದ ಮೇಲೆ ಇರುವ ನವಿಲುಗರಿ ಮನೆಯಲ್ಲಿರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

*ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ, ಹಣದ ದೇವತೆ ಲಕ್ಷ್ಮೀದೇವಿ, ವಿದ್ಯೆಯ ದೇವತೆ ಸರಸ್ವತಿ ದೇವಿ ಇಬ್ಬರು ಸಹ ಮನೆಯಲ್ಲಿ ನೆಲೆಸಿರುತ್ತಾರೆ.
*ನಿಮ್ಮ ಮನೆಯಲ್ಲಿ ಕೊಳಲಿನ ಜೊತೆಗೆ ನವಿಲುಗರಿಯನ್ನು ಇಡುವುದರಿಂದ, ಸಂಬಂಧಗಳಲ್ಲಿ ಪ್ರೀತಿ ಜಾಸ್ತಿಯಾಗುತ್ತದೆ.
*ಮಲಗುವ ರೂಮ್ ಅಲ್ಲಿ ನವಿಲುಗರಿ ಇಡುವುದರಿಂದ, ದಂಪತಿಗಳ ನಡುವೆ ಇರುವ ಜಗಳಗಳು ಕಡಿಮೆ ಆಗುತ್ತದೆ..
*ನಿಮ್ಮ ಶತ್ರುಗಳ ಜೊತೆಗೆ ದ್ವೇಷವನ್ನು ಅಂತ್ಯ ಮಾಡಲು ಬಯಸಿದರೆ, ನವಿಲುಗರಿಯ ಮೇಲೆ ಹನುಮಂತನ ತಲೆಯ ಸಿಂಧೂರದಿಂದ, ಅವರ ಹೆಸರನ್ನು ಬರೆಯಿರಿ. ಹೆಸರು ಬರೆದ ನವಿಲುಗರಿಯನ್ನು ಮಂಗಳವಾರ ಮತ್ತು ಶನಿವಾರ ಪೂಜೆ ಮಾಡುವ ಸ್ಥಳದಲ್ಲಿ ಇರಿಸಿ. ಮರುದಿನ ನವಿಲುಗರಿಯನ್ನು ನೀರಿನಲ್ಲಿ ತೇಲಿಬಿಡಿ. ಇದರಿಂದ ದ್ವೇಷ ಕೋಣೆಯಾಗುತ್ತದೆ.

*ನಿಮ್ಮ ಜಾತಕದಲ್ಲಿ ಯಾವುದಾದರೂ ಗ್ರಹದಿಂದ ಸಮಸ್ಯೆ ಉಂಟಾಗಿದ್ದರೆ, ಅಶುಭ ಪರಿಣಾಮಗಳನ್ನು ಅಂತ್ಯ ಮಾಡಲು ಬಯಸಿದರೆ. ಆ ಗ್ರಹದ ಮಂತ್ರವನ್ನು 21 ಬಾರಿ ಪಠಿಸಿ, ನವಿಲು ಗರಿಯ ಮೇಲೆ ನೀರು ಸಿಂಪಡಿಸಿ, ಘೋಚರ ಸ್ಪಷ್ಟವಾಗಿರುವ ಜಾಗದಲ್ಲಿ ಇದನ್ನು ಇಡಿ. ಹೀಗೆ ಮಾಡುವುದರಿಂದ, ಗ್ರಹಗಳ ಅಶುಭ ಪರಿಣಾಮ ನಿಲ್ಲುತ್ತದೆ.
*ಮಗುವಿನ ಮೇಲೆ ಕೆಟ್ಟ ದೃಷ್ಟಿ ಬೀರಬಾರದು ಎನ್ನುವುದಾದರೆ, ಬೆಳ್ಳಿಯ ತಾಯತದಲ್ಲಿ ನವಿಲುಗರಿಯನ್ನು ಇಟ್ಟು ಧರಿಸಿ.
ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಇರುವ ತಿಜೋರಿಯಲ್ಲಿ ನಿಂತಿರುವ ನವಿಲುಗರಿಗಳನ್ನು ಇಟ್ಟರೆ ಹಣದ ಸಮಸ್ಯೆ ಬರುವುದಿಲ್ಲ. ಇದರಿಂದ ರಾಹುವಿನ ದೋಷ ಕಡಿಮೆಯಾಗಬೇಕಿದ್ದರೆ, ಪೂರ್ವ ಮತ್ತು ವಾಯುವ್ಯ ದಿಕ್ಕಿಮಲ್ಲಿ ಇಡಿ. ಪೂರ್ವ ಮತ್ತು ವಾಯುವ್ಯ ದಿಕ್ಕಿನ ಗೋಡೆಗಳ ಮೇಲೆ ನವಿಲುಗರಿಗಳನ್ನು ಇಟ್ಟರೆ, ರಾಹುವಿನ ಸಮಸ್ಯೆ ದೂರವಾಗುತ್ತದೆ.

Comments are closed.