Neer Dose Karnataka
Take a fresh look at your lifestyle.

ರಶ್ಮಿಕಾ ಮಂದಣ್ಣ ತನ್ನ ಬಾಯ್ ಫ್ರೆಂಡ್ ನಿಂದ ದೂರ ಆಗಲು ನಾನೇ ಕಾರಣ ಎಂದು ಒಪ್ಪಿಕೊಂಡ ಆತ ಹೇಳಿದ್ದೇನು ಗೊತ್ತೇ??

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲಿ ಖ್ಯಾತಿ ಗಳಿಸಿದ್ದು ಗೊತ್ತೇ ಇದೆ. ಇದೀಗ ತಮಿಳಿನಲ್ಲಿ ದಳಪತಿ ವಿಜಯ್ ಅವರ ಜೊತೆ ನಟಿಸುತ್ತಿರುವಾಗಲೇ, ಮತ್ತೊಬ್ಬ ಸ್ಟಾರ್ ಹೀರೋ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ರಶ್ಮಿಕಾ. ಈ ನಟಿ ಪುಷ್ಪ : ದಿ ರೈಸ್ ಸಿನಿಮಾದಲ್ಲಿ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಜೊತೆಯಲ್ಲಿ ನಟಿಸಿದರು. ಈ ಸಿನಿಮಾ ನಂತರ ರಶ್ಮಿಕಾ ಅವರ ರೇಂಜ್ ಮತ್ತೊಂದು ಹಂತಕ್ಕೆ ತಲುಪಿದೆ. ಸತತವಾಗಿ ಸಿನಿಮಾಗಳನ್ನು ಘೋಷಣೆ ಮಾಡುತ್ತಿದ್ದಾರೆ.  ಅದಕ್ಕಿಂತ ಮುಖ್ಯವಾಗಿ, ಈ ನಟಿ ಕ್ರಮೇಣ ಬಾಲಿವುಡ್ ನಲ್ಲಿ ಸ್ಟಾರ್ ಆಗುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಾಯಕರ ಜೊತೆಗೆ ನಟಿಸುವ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಹಿಂದಿಯಲ್ಲಿ ಈಗಾಗಲೇ ನಾಲ್ಕೈದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ. ಸ್ಟಾರ್ ಹೀರೋಯಿನ್ ಆಗಿ ಫೇಮಸ್ ಆಗಿರುವ, ಕನ್ನಡದ ನಟಿ ರಶ್ಮಿಕಾ ಮಂದಣ್ಣ ತಮ್ಮ ನಿಶ್ಚಿತಾರ್ಥ ಕ್ಯಾನ್ಸಲ್ ಆಗಲು ನಾನೇ ಕಾರಣ ಎಂದು ಸೆನ್ಸೇಷನಲ್ ಕಮೆಂಟ್ ಮಾಡಿದ್ದಾರೆ. ನಮಗೆ ಗೊತ್ತಿರುವ ಹಾಗೆ, ರಶ್ಮಿಕಾ ಮಂದಣ್ಣ ಸಿನಿಮಾಗೆ ಪ್ರವೇಶಿಸಿದ ಆರಂಭದ ದಿನಗಳಲ್ಲಿ ಕ್ಷಿತ್ ಶೆಟ್ಟಿ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.  ಆದರೆ ಅನಿರೀಕ್ಷಿತವಾಗಿ ಆಕೆ ನಿಶ್ಚಿತಾರ್ಥವನ್ನು ಮುರಿದುಕೊಂಡು ರಕ್ಷಿತ್ ಶೆಟ್ಟಿ ಅವರಿಂದ ದೂರವಾದರು. ಈ ಜೋಡಿ ಏಕೆ ಬೇರ್ಪಟ್ಟರು ಎಂಬುದು ಸ್ಪಷ್ಟವಾಗಿಲ್ಲ.  ಇತ್ತೀಚೆಗಷ್ಟೇ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ರಶ್ಮಿಕಾ ನಿಶ್ಚಿತಾರ್ಥದ ವಿಚಾರದ ಬಗ್ಗೆ ಸೆನ್ಸೇಷನಲ್ ಕಮೆಂಟ್ ಮಾಡಿದ್ದರು. 

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ, “ರಶ್ಮಿಕಾಗೆ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಆಗುವಂತೆ ಹೇಳಿದ್ದೆ.  ಏಕೆಂದರೆ ಅವರ ಜಾತಕ ಹೊಂದಾಣಿಕೆಯಾಗುವುದಿಲ್ಲ. ಇಬ್ಬರು ಮದುವೆಯಾದರು, ವಿಚ್ಛೇದನಕ್ಕೆ ಹೋಗುತ್ತದೆ. ರಶ್ಮಿಕಾ ಜಾತಕ ಕೂಡ ತುಂಬಾ ಚೆನ್ನಾಗಿದೆ. ಖಂಡಿತಾ ಇಂಡಸ್ಟ್ರಿಯ ಟಾಪ್ ನಟಿ ಆಗ್ತಾರೆ ಅಜೆತ ಗೊತ್ತು.. ಅದಕ್ಕೇ ಹೇಳ್ತೀನಿ..” ಎಂದು ದೊಡ್ಡ ಬಾಂಬ್ ಸಿಡಿಸಿದ್ದಾರೆ.  ಸಮಂತಾ ನಾಗ ಚೈತನ್ಯ ವಿಚ್ಛೇದನ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದ ಅವರು, ನಯನತಾರಾ ಜಾತಕದಲ್ಲಿ ವಿಚ್ಛೇದನದ ಲಕ್ಷಣಗಳಿವೆ ಎಂದು ಹೇಳಿದ್ದಾರೆ. ಪ್ರಭಾಸ್ ಜಾತಕದಲ್ಲಿ ಮದುವೆ ಯೋಗವಿಲ್ಲ ಎಂದಿದ್ದಾರೆ. ಹಲವು ಸೆಲೆಬ್ರಿಟಿಗಳ ಬಗ್ಗೆ ಇಂಟ್ರೆಸ್ಟಿಂಗ್ ಕಮೆಂಟ್ ಮಾಡಿರುವ ವೇಣು ಸ್ವಾಮಿ ಇದೀಗ ರಶ್ಮಿಕಾ ಬಗ್ಗೆ ಇಂಟ್ರೆಸ್ಟಿಂಗ್ ಕಮೆಂಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.  ವೇಣು ಸ್ವಾಮಿ ಕೂಡ ಸದ್ಯದಲ್ಲೇ ಸಂಸದರಾಗಲಿದ್ದಾರೆ ಎಂದರು.

Comments are closed.