Neer Dose Karnataka
Take a fresh look at your lifestyle.

ಹಲವಾರು ವರ್ಷದ ಪ್ರೀತಿ ಮಾಡುವೆ ಬಳಿಕ ಇರಲಿಲ್ಲ, ಸಮಂತಾ ಕೈ ಯಲ್ಲಿ ಆಗಿದ್ದು ಚೈತನ್ಯ ಕೈಯಲ್ಲಿ ಆಗಲಿಲ್ಲ. ಏನಾಗಿತ್ತು ಗೊತ್ತೇ ಅಂದು??

ತಮ್ಮ ಮಾಜಿ ಪತಿ ಅಕ್ಕಿನೇನಿ ನಾಗಚೈತನ್ಯ ಅವರಿಗೆ ಸಂಬಂಧಿಸಿದಂತೆ, ‘ನಮ್ಮಿಬ್ಬರನ್ನು ಒಂದೇ ಕೋಣೆಯಲ್ಲಿ ಇರಿಸಿದರೆ, ನೀವು ಹರಿತವಾದ ಆಯುಧಗಳನ್ನು ಬಚ್ಚಿಡಬೇಕು..’ ಎಂದು ಸೆನ್ಸೇಷನಲ್ ಹೇಳಿಕೆ ನೀಡಿದ್ದಾರೆ ನಟಿ ಸಮಂತಾ. ಕಾಫಿ ವಿಥ್ ಕರಣ್ ಟಾಕ್ ಶೋನಲ್ಲಿ ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಅವರ ‘ಹಾರ್ಡ್ ಫೀಲಿಂಗ್ಸ್’ ಪ್ರಶ್ನೆಗೆ ಸಮಂತಾ ಈ ಮೇಲಿನ ರೀತಿಯ ಉತ್ತರವನ್ನು ನೀಡಿದ್ದಾರೆ.

ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿಯನ್ನು ಬರೋಬ್ಬರಿ ಐದಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಸುಂದರವಾಗಿ ಜೀವನ ಸಹ ಸಾಗಿಸುತ್ತಿದ್ದತು. ಆದರೆ, ಇವರಿಬ್ಬರು ಚೆನ್ನಾಗಿದ್ದರೂ ಸಹ ಇವರ ವೈವಾಹಿಕ ಸಂಬಂಧ ಹೆಚ್ಚು ದಿನಗಳ ಕಾಲ ಮುಂದುವರೆಯಲಿಲ್ಲ. ಮದುವೆಯಾಗಿ ನಾಲ್ಕು ವರ್ಷ ತುಂಬುವುದರ ಒಳಗೆ, ಈ ಜೋಡಿ ವಿಚ್ಛೇದನ ಪಡೆದರು. ಮನಸ್ಸುಗಳು ಸಂಧಿಸಿದಾಗ ಅದು ಪ್ರೀತಿ, ನಂತರ ಮದುವೆ. ನಂತರ, ಮನಸ್ಸುಗಳು ಒಟ್ಟಿಗೆ ಇರದಿದ್ದರೆ, ವಿಚ್ಛೇದನ. ಇದರಲ್ಲಿ ತಪ್ಪೇನಿಲ್ಲ. ಬೇರ್ಪಟ್ಟು, ಅವರ ಹಾದಿಯಲ್ಲಿ ಅವರು ನಡೆಯುತ್ತಿದ್ದಾರೆ.

ಅಕ್ಕಿನೇನಿ ನಾಗ ಚೈತನ್ಯ ತಮ್ಮ ವೈವಾಹಿಕ ಜೀವನದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ವಿಚ್ಛೇದನವನ್ನು ಉಲ್ಲೇಖಿಸಿ ಯಾವ ಹೇಳಿಕೆಯನ್ನು ನೀಡಿಲ್ಲ. ಆದರೆ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸಮಂತಾ, ‘ಗಂಡನಲ್ಲ, ಮಾಜಿ ಪತಿ..’ ಎಂದು ಟಾಕ್ ಶೋನ ನಿರೂಪಕ ಕರಣ್ ಜೋಹರ್ ಕಡೆಗೆ ಒಂದು ಲುಕ್ ನೀಡಿದ್ದಾರೆ. ಇಬ್ಬರನ್ನೂ ಕೋಣೆಯಲ್ಲಿಟ್ಟರೆ ಹರಿತವಾದ ಆಯುಧಗಳನ್ನು ಬಚ್ಚಿಡಬೇಕು ಎನ್ನುವುದರ ಹಿಂದಿನ ಉದ್ದೇಶವೇನು ? ಇದು ನಿಜವಾಗಿಯೂ ಕೆಟ್ಟದ್ದೇ? ಎನ್ನುವ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಮೂಡಿದೆ. ಸಮಂತಾ ಅವರೇನೋ ಈ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ನಾಗಚೈತನ್ಯ ಮಾತ್ರ, ವಿಚ್ಛೇದನದ ವಿಚಾರವಾಗಿ ಒಂದು ಹೇಳಿಕೆಯನ್ನು ಸಹ ಯಾವ ಸಂದರ್ಭದಲ್ಲೂ ನೀಡಿಲ್ಲ.

Comments are closed.