Neer Dose Karnataka
Take a fresh look at your lifestyle.

ಚೈತನ್ಯ ರವರ ಸಿನಿಮಾ ಜೀವನವನ್ನು ಹಾಳು ಮಾಡಲು ಸ್ವತಃ ನಾಗಾರ್ಜುನ ರವರು ಕೈ ಜೋಡಿಸಿದ್ದಾರೆಯೇ?? ತೆಲುಗು ಚಿತ್ರರಂಗದಲ್ಲಿ ಮತ್ತೊಂದು ಸಂಚಲನ.

ಟಾಲಿವುಡ್ ನಲ್ಲಿ ಸ್ಟಾರ್ ಹೀರೋ, ಹೀರೋಯಿನ್ ಸಮಂತಾ ಮತ್ತು ನಾಗ ಚೈತನ್ಯ. ಇವರಿಬ್ಬರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರು ಪ್ರೀತಿಸಿ ಮದುವೆಯಾಗಿ ಕೆಲಕಾಲ ಚೆನ್ನಾಗಿದ್ದು ಬಳಿಕ ಬೇರೆಯಾದರು. ಇದುವರೆಗೆ ಅವರ ವಿಚ್ಛೇದನದ ಕಥೆಗೆ ಸರಿಯಾದ ಕಾರಣ ಸಿಕ್ಕಿಲ್ಲ. ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡುತ್ತಿಲ್ಲ. ಟಾಲಿವುಡ್ ಹಾಟ್ ಅಂಡ್ ಕ್ಯೂಟ್ ಕಪಲ್ ಗಳಾದ ಸಮಂತಾ ಮತ್ತು ನಾಗ ಚೈತನ್ಯ ಬ್ರೇಕಪ್ ಗೆ ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ ಆದರೆ ಕೆಲ ನೆಟ್ಟಿಗರು ಇವರಿಬ್ಬರ ಬ್ರೇಕಪ್ ಗೆ ಪರೋಕ್ಷ ಕಾರಣ ನಾಗಾರ್ಜುನ ಎಂದು ಹೇಳುತ್ತಿದ್ದಾರೆ.

ನಾಗಾರ್ಜುನ ಎರಡು ಮದುವೆಯಾಗಿದ್ದು ಗೊತ್ತೇ ಇದೆ. ಮೊದಲ ಪತ್ನಿ ಲಕ್ಷ್ಮಿ ಅವರಿಗೆ ವಿಚ್ಛೇದನ ನೀಡಿದ ನಂತರ ನಾಗಾರ್ಜುನ ಅವರು ನಟಿ ಅಮಲಾ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ನಾಗಾರ್ಜುನ ಮತ್ತು ಲಕ್ಷ್ಮಿ ದಂಪತಿಗೆ ಜನಿಸಿದ ಮಗ ನಾಗಚೈತನ್ಯ. ಇದರಿಂದಾಗಿ ನಾಗ ಚೈತನ್ಯಗೆ ತಂದೆ-ತಾಯಿಯೊಂದಿಗೆ ಬೆಳೆಯುವ ಅವಕಾಶವೇ ಇರಲಿಲ್ಲ. ನಾಗ ಚೈತನ್ಯಗೆ ತನ್ನ ಕುಟುಂಬದ ಸದಸ್ಯರೊಂದಿಗೆ ಹೇಗೆ ಇರಬೇಕೋ ಗೊತ್ತಿಲ್ಲ, ಅದಕ್ಕಾಗಿಯೇ ಸಮಂತಾರನ್ನು ದೂರವಿಟ್ಟಿದ್ದಾರೆ ಎಂಬುದು ನೆಟ್ಟಿಗರ ಅಭಿಪ್ರಾಯ. ನಾಗಚೈತನ್ಯ ಅವರಿಗೆ ತಂದೆ ತಾಯಿಯ ಪ್ರೀತಿಯ ಕೊರತೆಗೆ ಪರೋಕ್ಷ ಕಾರಣ ನಾಗಾರ್ಜುನ ಎಂದೇ ಎಲ್ಲರೂ ಭಾವಿಸುತ್ತಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿನ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಾಗ ಚೈತನ್ಯ ವಿರುದ್ಧ ಸಮಂತಾ ಪರೋಕ್ಷವಾಗಿ ಹಲವು ಆರೋಪಗಳನ್ನು ಮಾಡಿದ್ದರು.

ಆದರೆ ನಾಗಚೈತನ್ಯ ಅವರ ಥ್ಯಾಂಕ್ ಯೂ ಚಿತ್ರದ ಪ್ರಚಾರದ ವೇಳೆ ಸಮಂತಾ ಬಗ್ಗೆ ಕೇಳಿದಾಗ ಅವರು ಚೆನ್ನಾಗಿದ್ದಾರೆ ಎಂದು ಉತ್ತರಿಸಿದರು. ಇದರಿಂದ ಅಭಿಮಾನಿಗಳು ಸಂತಸಗೊಂಡಿದ್ದರು. ಇದೇ ನಿನಗೂ ಮತ್ತು ನಮ್ಮ ನೆಚ್ಚಿನ ನಾಯಕನಿಗೂ ಇರುವ ವ್ಯತ್ಯಾಸ ಎಂದು ನಾಗ ಚೈತನ್ಯ ಅಭಿಮಾನಿಗಳು ಸಮಂತಾ ಅವರನ್ನು ಟೀಕಿಸಿದ್ದಾರೆ. ಇಡೀ ನಾಗಚೈತನ್ಯ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪರೋಕ್ಷವಾಗಿ ನಾಗಾರ್ಜುನ ಕಾರಣ ಎಂಬುದು ನೆಟ್ಟಿಗರ ಅಭಿಪ್ರಾಯ. ನಾಗಚೈತನ್ಯ ಅವರಿಗೆ ತಂದೆ ತಾಯಿಯ ಸಂಸ್ಕಾರ, ಕೌಟುಂಬಿಕ ಜೀವನ ಕಲಿಸಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನಲಾಗಿದೆ. ಇದಕ್ಕೆ ನಾಗಾರ್ಜುನ ಅವರೇ ಕಾರಣ ಎಂಬ ನಂಬಿಕೆ ಎಲ್ಲೆಡೆ ಇದೆ.

Comments are closed.