Neer Dose Karnataka
Take a fresh look at your lifestyle.

ನೀವಂದುಕೊಂಡಂತೆ ಅಲ್ಲ, ಬಿಳಿ ಬಣ್ಣ ಇಷ್ಟ ಪಡುವ ಶ್ವೇತಾ, ಮೌರ್ಯ ರವರನ್ನು ಮದುವೆಯಾಗುತ್ತಾರೆಯೇ? ಅಥವಾ ಮತ್ತೊಂದು ಪ್ಲಾನ್ ಹಾ??

ಕಲರ್ಸ್ ಕನ್ನಡ ವಾಹಿನಿಯ ಫೇಮಸ್ ಧಾರವಾಹಿಗಳಲ್ಲಿ ಒಂದು ಲಕ್ಷಣ. ಪ್ರತಿ ಸಂಚಿಕೆಯಲ್ಲು ಹೊಸ ತಿರುವುಗಳೊಂದಿಗೆ ಲಕ್ಷಣ ಧಾರವಾಹಿ ಕುತೂಹಲ ಹೆಚ್ಚಿಸುತ್ತದೆ. ಈ ಧಾರವಾಹಿಯಲ್ಲಿ ನಕ್ಷತ್ರಾ ಮತ್ತು ಶ್ವೇತಾ ಮಕ್ಕಳಾಗಿರುವಾಗಲೇ ಅದಲು ಬದಲಾದ ಕಾರಣ, ಇವರಿಬ್ಬರು ಬೇರೆ ಬೇರೆ ಮನೆಯಲ್ಲಿ ಬೆಳೆಯಬೇಕಾಯಿತು, ಶ್ರೀಮಂತ ತಂದೆ ತಾಯಿ ಮಗಳಾದ ನಕ್ಷತ್ರ ಬಡವರ ಮನೆಯಲ್ಲಿ ಅದೇ ರೀತಿ, ಬಡತನದ ಮನೆಯ ಶ್ವೇತಾ ಶ್ರೀಮಂತರ ಮನೆಯಲ್ಲಿ ಬೆಳೆದರು. ದೊಡ್ಡವರಾದ ಭೂಪತಿಯನ್ನು ಮದುವೆಯಾಗಲು ಇವರಿಬ್ಬರು ಸಹ ಬಯಸಿದರು. ಭೂಪತಿ ತಾಯಿ ಶಕುಂತಲಾ ಶ್ವೇತಾಳನ್ನೇ ತನ್ನ ಮನೆಯ ಸೊಸೆಯಾಗಿ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದರು.

ಭೂಪತಿ ಮತ್ತು ಶ್ವೇತಾ ಮದುವೆ ಇನ್ನೇನು ನಡೆದೇ ಹೋಯಿತು ಎನ್ನುವಷ್ಟರಲ್ಲಿ, ಭೂಪತಿ ತಮ್ಮ ಮೌರ್ಯ ಆಕ್ಸಿಡೆಂಟ್ ಕೇಸ್ ನಲ್ಲಿ ಸಿಕ್ಕಿಕೊಂಡ ಕಾರಣ, ಅವನನ್ನು ಬಿಡಿಸಲು, ಭೂಪತಿ ನಕ್ಷತ್ರ ಮದುವೆ ನಡೆಯಬೇಕು ಎಂದು ನಕ್ಷತ್ರ ತಂದೆ ಚಂದ್ರಶೇಖರ್ ಹಠ ಹಿಡಿಯುತ್ತಾರೆ. ಇದರಿಂದ ಭೂಪತಿ ಜೊತೆಗೆ ನಕ್ಷತ್ರ ಮದುವೆ ನಡೆಯಿತು. ಆದರೆ ಮದುವೆ ದಿನ, ಏನೇ ಆದರೂ ನೀನೇ ನನ್ನ ಮನೆ ಸೊಸೆ ಎಂದು ಶಕುಂತಲಾದೇವಿ ಹೇಳಿದ್ದರು. ಇನ್ನು ಶ್ವೇತಾ ತನ್ನ ಮಗಳಲ್ಲ ಎಂದು ಗೊತ್ತಿದ್ದರೂ, ಚಂದ್ರಶೇಕರ್ ಶ್ವೇತಾಳನ್ನು ತಮ್ಮ ಮನೆಯಲ್ಲೇ ನೋಡಿಕೊಳ್ಳುತ್ತಿದ್ದರು, ಆದರೆ ಸಾಕಿದ ತಂದೆ ತಾಯಿಯನ್ನೇ ಶ್ವೇತಾ ಕೊಲೆ ಮಾಡಿಸಲು ಪ್ರಯತ್ನ ಪಟ್ಟಾಗ, ಅವಳನ್ನು ಮನೆಯಿಂದ ಹೊರಹಾಕಲಾಯಿತು.

ಈಗ ಶ್ವೇತಾ, ತನ್ನ ಸ್ವಂತ ತಂದೆ ತುಕಾರಾಮ್ ಮನೆಯಲ್ಲಿದ್ದಾಳೆ. ಇತ್ತ ಶಕುಂತಲಾ ದೇವಿ ಶ್ವೇತಾಳಿಗೆ ಕೊಟ್ಟ ಮಾತಿನ ಕಾರಣ, ತಮ್ಮ ಮಗ ಮೌರ್ಯನಿಗೆ ಶ್ವೇತಾಳ ಜೊತೆ ಮದುವೆ ಮಾಡಿ, ಮನೆಯ ಸೊಸೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದಾರೆ, ಆದರೆ ಮೌರ್ಯನ ಬಣ್ಣ ಕಪ್ಪು, ಇದು ಶ್ವೇತಾಳಿಗೆ ಇಷ್ಟವಿಲ್ಲ, ಆದರೂ ಆಸ್ತಿಗೊಸ್ಕರ ಮೌರ್ಯನನ್ನು ಶ್ವೇತಾ ಮದುವೆ ಆಗ್ತಳಾ? ಇತ್ತ ನಕ್ಷತ್ರ ಗೆ ತೊಂದರೆ ಕೊಡುತ್ತಿರುವುದು ಮೌರ್ಯ ಎಂದು ಯಾರಿಗೂ ಗೊತ್ತಿಲ್ಲ. ಆ ವಿಚಾರ ಗೊತ್ತಾದರೆ, ಭೂಪತಿ ಹೇಗೆ ಪ್ರತಿಕ್ರಿಯೆ ಕೊಡುತ್ತಾನೆ? ಒಂದು ವೇಳೆ ಶ್ವೇತಾಳಿಗೆ ನಕ್ಷತ್ರ ಗೆ ತೊಂದರೆ ಕೊಡುತ್ತಿರುವುದು ಮೌರ್ಯ ಎಂದು ಗೊತ್ತಾದರೆ, ಮೌರ್ಯನ ಜೊತೆಗೆ ಮದುವೆ ಆಗುತ್ತಾಳಾ? ತಿಳಿಯಲು ಮುಂದಿನ ಸಂಚಿಕೆಗಳನ್ನು ನೋಡಬೇಕಿದೆ.

Comments are closed.