Neer Dose Karnataka
Take a fresh look at your lifestyle.

ಶುರುವಾಯ್ತು ಬಿಗ್ ಬಾಸ್ ನಲ್ಲಿ ಅಸಮಾಧಾನದ ಹೋಗೆ: ಆರ್ಯವರ್ಧನ್ ಹಾಗೂ ಸೋನು ಬೆಂಕಿ ಇಟ್ಟಿದ್ದು ಹೇಗೆ ಗೊತ್ತೇ?

ಬಿಗ್ ಬಾಸ್ ಶೋ ಶುರುವಾಗುವುದೇ ತದ ಎಂದು ಕಿರುತೆರೆ ಅಭಿಮಾನಿಗಳು ಕಾಯುತ್ತಿದ್ದರು. ಬಿಗ್ ಬಾಸ್ ಶೋ ಎಂದರೆ ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರಿಗೂ ಕುತೂಹಲ ಹೆಚ್ಚು. ಇದೀಗ ಈ ಶೋ ಮತ್ತೊಮ್ಮೆ ವೀಕ್ಷಕರ ಎದುರು ಬಂದಿದೆ. ಈ ಬಾರಿ ಬೇರೆ ರೂಪದಲ್ಲಿ ಓಟಿಟಿ ಮೂಲಕ ಬರುತ್ತಿದೆ ಬಿಗ್ ಬಾಸ್. 8 ಓಟಿಟಿ ಸೀಸನ್ ಮುಗಿದ ಬಳಿಕ, ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಲಿದೆ. ಈ ಸೀಸನ್ ನ ಟಾಪ್ ಸ್ಪರ್ಧಿಗಳು ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಗೆ ಆಯ್ಕೆಯಾಗುತ್ತಾತೆ ಎನ್ನಲಾಗುತ್ತಿದೆ.

ಇನ್ನು ಪ್ರತಿ ಸಾರಿ ಬಿಗ್ ಬಾಸ್ ಶುರುವಾಗಲಿದೆ ಎಂದರೆ ಸ್ಪರ್ಧಿಗಳ ಬಗ್ಗೆ ಚರ್ಚೆ ಶುರುವಾಗುತ್ತದೆ. ಈ ಬಾರಿ ಕೂಡ ಬಿಗ್ ಬಾಸ್ ಮನೆಗೆ ಹೋಗಬಹುದಾದಂತಹ ಸ್ಪರ್ಧಿಗಳ ಹೆಸರುಗಳು ಕೇಳಿಬಂದಿದ್ದವು. ಆದರೆ ಅಂತಿಮವಾಗಿ ಬಿಗ್ ಮನೆಯೊಳಗೆ ಹೋಗಿರುವವರೆ ಬೇರೆ ಆಗಿದ್ದಾರೆ. ಅದರಲ್ಲೂ ಆ ಇಬ್ಬರು ಸ್ಪರ್ಧಿಗಳನ್ನು ನೋಡಿ, ವೀಕ್ಷಕರು ಇವರಿಬ್ಬರು ಬೇಕಿತ್ತಾ ಎನ್ನುತ್ತಿದ್ದಾರೆ. ಸೋನು ಶ್ರೀನಿವಾಸ್ ಗೌಡ ಮತ್ತು ಆರ್ಯವರ್ಧನ್ ಗುರೂಜಿ ಈ ಇಬ್ಬರನ್ನು ಸೆಲೆಕ್ಟ್ ಮಾಡಿರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿದೆ. ಸೋನು ಅವರ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಚಾರ ಎಲ್ಲರಿಗೂ ಗೊತ್ತೇ ಇದೆ.

ಆ ಕಾರಣದಿಂದ ಸೋನು ರೀತಿ ಕೆಲಸ ಮಾಡಿದರೆ, ಬಿಗ್ ಬಾಸ್ ಗೆ ಹೋಗಬಹುದೇ ಎಂದು ಭಾರಿ ವಿರೋಧ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಆರ್ಯವರ್ಧನ್ ಗುರೂಜಿ ವಿಚಾರದಲ್ಲಿ ಇಂಥದ್ದೇ ವಿರೋಧ ವ್ಯಕ್ತವಾಗುತ್ತಿದೆ. ಇಂಥವರನ್ನೆಲ್ಲ ಬಿಗ್ ಬಾಸ್ ಗೆ ಕರೆಸಿದ್ದಾರೆ ಎಂದು ನೆಟ್ಟಿಗರು ವಾಹಿನಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು, ಸುದೀಪ್ ಅವರ ನಿರೂಪಣೆ ಬಗ್ಗೆ ಕೂಡ ಬೇಸರ ವ್ಯಕ್ತವಾಗಿದೆ. ಇಂಥವರ ಜೊತೆಗೆ ಸ್ಟೇಜ್ ಶೇರ್ ಮಾಡಿಕೊಂಡು, ವೆಲ್ಕಮ್ ಮಾಡುವ ಹಾಗೆ ಆಗಿದೆ ಸುದೀಪ್ ಅವರ ಪರಿಸ್ಥಿತಿ ಎಂದು ಬೇಸರಗೊಳ್ಳುತ್ತಿದ್ದಾರೆ ನೆಟ್ಟಿಗರು. ಆರಂಭದಲ್ಲೇ ಹೀಗಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ

Comments are closed.