Neer Dose Karnataka
Take a fresh look at your lifestyle.

ಒಂದೇ ದಿನ ಮನೆಯಲ್ಲಿ ಮೂರ್ ಮೂರು ಟ್ವಿಸ್ಟ್: ಹರಿಯಿತು ಸಂತೋಷದ ಹೊನಲು, ಕಣ್ಣೀರಿನ ಧರೆ. ದೊಡ್ಮನೆಯಲ್ಲಿ ಏನಾಗಿದೆ ಗೊತ್ತೇ??

ಬಿಗ್ ಬಾಸ್ ಕನ್ನಡ ಓಟಿಟಿ ಶೋ ಕಳೆದ ಶನಿವಾರ ಶುರುವಾಗಿ, ಇನ್ನೇನು ಶೋ ಶುರುವಾಗಿ ಒಂದು ವಾರ ಕಳೆಯುತ್ತಿದೆ. ಈ ಸಮಯದಲ್ಲಿ ಎಲ್ಲರಿಗು ಹೆಚ್ಚಾಗಿ ಕಾಡುತ್ತಿರುವುದು ಎಲಿಮಿನೇಶ ಭೀತಿ. ಮನೆಯ ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ನಾಳಿನ ಪಂಚಾಯಿತಿ ಸಂಚಿಕೆಯಲ್ಲಿ ಮನೆಯಿಂದ ಹೊರ ಹೋಗುವುದು ಯಾರು ಎನ್ನುವ ಪ್ರಶ್ನೆ ಈಗ ಶುರುವಾಗಿದೆ. ಅದರ ನಡುವೆ ಈಗ ಬಿಗ್ ಬಾಸ್ ಮನೆಯಲ್ಲಿ ಮೂರು ಮುಖ್ಯವಾದ ಬದಲಾವಣೆಗಳು ನಡೆದಿದ್ದು. ವೀಕ್ಷಕರ ಅಭಿಪ್ರಾಯಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಒಬ್ಬ ಕ್ಯಾಪ್ಟನ್ ಬಹಳ ಮುಖ್ಯ, ಪ್ರತಿ ವಾರ ಹೊಸ ಕ್ಯಾಪ್ಟನ್ ಆಯ್ಕೆಯಾಗುತ್ತಾರೆ. ಕ್ಯಾಪ್ಟನ್ಸಿಗಾಗಿ ಬಿಗ್ ಬಾಸ್ ಒಂದು ಟಾಸ್ಕ್ ನೀಡುತ್ತಾರೆ, ಅದರಲ್ಲಿ ಗೆದ್ದವರು ಕ್ಯಾಪ್ಟನ್ ಆಗುತ್ತಾರೆ. ಮೊದಲ ವಾರ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಅರ್ಜುನ್ ರಮೇಶ್, ನಂದು, ಚೈತ್ರಾ ಹಳ್ಳಿಕೇರಿ, ಸೋಮಣ್ಣ ಮಾಚಿಮಾಡ ಸ್ಪರ್ಧಿಸಿದರು. ಇದರಲ್ಲಿ ಗೆದ್ದು ಮೊದಲ ಕ್ಯಾಪ್ಟನ್ ಆಗಿರುವುದು ಅರ್ಜುನ್ ರಮೇಶ್ ಅವರು. ಹೆಚ್ಚು ಅಂಕಗಳನ್ನು ಪಡೆದು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು, ಈಗ ಅವರಿಗೆ ನಿದ್ದೆ ಮಾಡಲು ಕ್ಯಾಪ್ಟನ್ ರೂಮ್ ಸಹ ಸಿಕ್ಕಿದೆ. ಇನ್ನು ಎರಡು ಪ್ರಮುಖ ಬದಲಾವಣೆ ಸಹ ನಡೆದಿದೆ. ಬಿಗ್ ಬಾಸ್ ನಲ್ಲಿ ಪ್ರತಿವಾರ ನೀಡುವ ಟಾಸ್ಕ್ ನಲ್ಲಿ, ಬೆಸ್ಟ್ ಪರ್ಫಾರ್ಮರ್ ಮತ್ತು ವರ್ಸ್ಟ್ ಪರ್ಫಾರ್ಮರ್ ಅನ್ನು ಸೆಲೆಕ್ಟ್ ಮಾಡಬೇಕು.

ಮೊದಲ ವಾರದ ಟಾಸ್ಕ್ ನಲ್ಲಿ ಬೆಸ್ಟ್ ಪರ್ಫಾರ್ಮರ್ ಆಗಿ ರಾಕೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಕೇಶ್ ಒಳ್ಳೆಯ ಪ್ರದರ್ಶನ ನೀಡಿದರು. ಜೊತೆಗೆ, ತಮ್ಮ ಟೀಮ್ ಅನ್ನು ಚೆನ್ನಾಗಿ ಸಂಭಾಳಿಸಿ, ತೊಂದರೆ ಆದಾಗ ಮಧ್ಯಸ್ಥಿಕೆ ವಹಿಸಿದರು. ಹಾಗಾಗಿ ಎಲ್ಲರೂ ರಾಕೇಶ್ ಅವರನ್ನು ಬೆಸ್ಟ್ ಪರ್ಫಾರ್ಮರ್ ಆಗಿ ಆಯ್ಕೆ ಮಾಡಲಾಗಿದೆ. ಇನ್ನು ವರ್ಸ್ಟ್ ಪರ್ಫಾರ್ಮರ್ ಆಗಿ ಅಕ್ಷತಾ ಕುಕ್ಕಿ ಅವರನ್ನು ಆಯ್ಕೆ ಮಾಡಲಾಗಿದೆ. ಅಕ್ಷತಾ ಯಾರ ಜೊತೆಗೂ ಹೆಚ್ಚಾಗಿ ಬೆರೆತಿಲ್ಲ, ಟಾಸ್ಕ್ ನಲ್ಲಿ ಸಹ ಅಂದುಕೊಂಡ ಮಟ್ಟಿಗೆ ಪರ್ಫಾರ್ಮ್ ಮಾಡಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಜೈಲಿಗೆ ಕಳಿಸಲಾಗಿದೆ. ವೀಕ್ಷಕರು ವೋಟ್ ಮಾಡಲು ಇದೆಲ್ಲವೂ ಬಹಳ ಮುಖ್ಯ ಆಗುತ್ತದೆ. ಇದೆಲ್ಲವನ್ನು ಗಮನಿಸಿದ ವೀಕ್ಷಕರು ಯಾರಿಗೆ ವೋಟ್ ಮಾಡಿ, ಉಳಿಸುತ್ತಾರೆ ಎಂದು ಕಾದು ನೋಡಬೇಕಿದೆ.

Comments are closed.