Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡ ರವರು ಸೇಫ್ ಆಗಿ ಉಳಿದುಕೊಳ್ಳಲು ಕಾರಣ ತಿಳಿಸಿದ ಜನ: ಏನು ಅಂತೇ ಗೊತ್ತೇ?

ಬಿಗ್ ಬಾಸ್ ಕನ್ನಡ ಓಟಿಟಿ ಶೋ ಶುರುವಾಗಿ ಒಂದು ವಾರ ಕಳೆದು, ಮೊದಲ ವಾರದ ಎಲಿಮಿನೇಷನ್ ಸಹ ಮುಗಿದಿದೆ. ಮೊದಲ ನಾಮಿನೇಶನ್ ನಲ್ಲಿ ಬಿಗ್ ಮನೆಯಿಂದ 9 ಜನರು ನಾಮಿನೇಟ್ ಆಗಿದ್ದರು. ಸೋನು ಶ್ರೀನಿವಾಸ್ ಗೌಡ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ಅಕ್ಷತಾ ಕುಕ್ಕಿ, ಕಿರಣ್ ರಥೋಡ್ ಹೀಗೆ 9 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರು. ನೆಟ್ಟಿಗರು ಮತ್ತು ಎಲ್ಲರೂ ಅಂದುಕೊಂಡ ಹಾಗೆ, ಸೋನು ಶ್ರೀನಿವಾಸ್ ಗೌಡ ಎಲಿಮಿನೇಟ್ ಆಗುತ್ತಾರೆ ಎಂದುಕೊಂಡಿದ್ದರು. ಆದರೆ ಎಲ್ಲರ ಊಹೆ ಈಗ ಸುಳ್ಳಾಗಿದೆ.

ನಿನ್ನೆಯ ಎಪಿಸೋಡ್ ನಲ್ಲಿ ಮೊದಲ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವವರು ಕಿರಣ್ ರಾಥೋಡ್. ಇವರು ಎಲ್ಲರ ಜೊತೆ ಚೆನ್ನಾಗಿದ್ದರು ಸಹ, ಹೆಚ್ಚಾಗಿ ಟಾಸ್ಕ್ ನಲ್ಲಿ ಪಾಲ್ಗೊಳ್ಳಲಿಲ್ಲ ಹಾಗೂ ಇನ್ನಿತರ ಕಾರಣಗಳಿಗೆ ಎಲಿಮಿನೇಟ್ ಆಗಿದ್ದಾರೆ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಇದೀಗ ಸೋನು ಶ್ರೀನಿವಾಸ್ ಗೌಡ ಯಾಕೆ ಮೊದಲ ವಾರ ಎಲಿಮಿನೇಟ್ ಆಗಲಿಲ್ಲ ಎನ್ನುವ ಚರ್ಚೆ ಸಹ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಸೋನು ಗೌಡ ಸೇಫ್ ಆಗಿದ್ದು, ನೆಟ್ಟಿಗರು ಶಾಕ್ ತಂದಿದ್ದಂತೂ ನಿಜ. ಎಲ್ಲರೂ ಸೋನು ಎಲಿಮಿನೇಟ್ ಆಗುತ್ತಾರೆ ಎಂದುಕೊಂಡಿದ್ದರು.

ಆದರೆ ಸೋನು ಬದಲಾಗಿ ಕಿರಣ್ ರಥೋಡ್ ಎಲಿಮಿನೇಟ್ ಆಗಿದ್ದಾರೆ. ಸೋನು ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ಭಾರಿ ಅಸಮಾಧಾನ ವ್ಯಕ್ತವಾಗಿದ್ದರು ಸಹ, ಆಕೆ ಮನೆಯಿಂದ ಹೊರಬಂದಿಲ್ಲ. ಬಿಗ್ ಬಾಸ್ ಅಭಿಮಾನಿಗಳು ಮತ್ತು ನೆಟ್ಟಿಗರು ಇದರ ಬಗ್ಗೆ ಚರ್ಚೆ ಮಾಡುತ್ತಿದ್ದು, ಸೋನು ಶ್ರೀನಿವಾಸ್ ಗೌಡ ಇಡೀ ವಾರ ಮನೆಯಲ್ಲಿ ಜಗಳ ಆಡುತ್ತಾ ಇದ್ದರು, ಹಾಗಾಗಿ ಇಂತಹ ಸ್ಪರ್ಧಿ ಮನೆಯಲ್ಲಿದ್ದರೆ, ಶೋ ಟಿ.ಆರ್.ಪಿ ಚೆನ್ನಾಗಿ ಬರುತ್ತದೆ ಎನ್ನುವ ಕಾರಣಕ್ಕೆ ಸೋನು ಶ್ರೀನಿವಾಸ್ ಗೌಡ ಅವರನ್ನು ಎಲಿಮಿನೇಟ್ ಮಾಡದೆ ಇದ್ದಾರೆ ಎನ್ನುವ ಅಭಿಪ್ರಾಯ ಈಗ ನೆಟ್ಟಿಗರ ವಲಯದಲ್ಲಿ ವ್ಯಕ್ತವಾಗಿದೆ.

Comments are closed.