Neer Dose Karnataka
Take a fresh look at your lifestyle.

ನೀವು ಈ ರೀತಿ ದೊಡ್ಡವರ ಚಿತ್ರಗಳು ಮಾಡುವುದು ಏತಕ್ಕೆ ಎಂಬ ಪ್ರಶ್ನೆಗೆ ಷಾಕಿಂಗ್ ಉತ್ತರ ನೀಡಿದ ತೆಲುಗಿನ ಖ್ಯಾತ ನಟಿ. ಹೇಳಿದ್ದೇನು ಗೊತ್ತೇ??

ಬಿಗ್ ಬಾಸ್ ತೆಲುಗು ಖ್ಯಾತಿಯ ತೇಜಸ್ವಿ ಮಡಿವಾಡ, ರಾಮರಾವ್ ಆನ್ ಡ್ಯೂಟಿ ಸಿನಿಮಾದಲ್ಲಿ ಸೀಸಾ ಹಾಡನ್ನು ಹಾಡಿದ ಅನ್ವೇಶಿ ಜೈನ್ ಹಾಗೂ ಇತರರು ನಟಿಸಿರುವ ಕಮಿಟ್ ಮೆಂಟ್ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಇದು ತೆಲುಗು ಪರದೆಯ ಮೇಲೆ ಅಡಲ್ಟ್ ಕಂಟೆಂಟ್ ಸಿನಿಮಾ ಆಗುವ ನಿರೀಕ್ಷೆ ಇದೆ.ಕೆಲವು ವರ್ಷಗಳ ಹಿಂದೆ ಈ ಚಿತ್ರದ ಬಗ್ಗೆ ದೊಡ್ಡ ವಿವಾದವೇ ಎದ್ದಿತ್ತು.

ಭಗವದ್ಗೀತೆಯ ಶ್ಲೋಕವನ್ನು ಉಲ್ಲೇಖಿಸಿ ಅತ್ಯಂತ ಅಸಭ್ಯ ವಿಡಿಯೋ ಪ್ರೋಮೋ ಬಿಡುಗಡೆ ಮಾಡಲಾಗಿದೆ ಎಂಬುದು ಪ್ರಮುಖ ಆರೋಪ ಆಗಿತ್ತು. ಆದರೆ, ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿದ ಕ್ಷಮೆ ಸಹ ಕೇಳಿದೆ. ತೆರೆಯ ಮೇಲೆ ಮೋಜು ಮಸ್ತಿ ಮಾಡುವ ಮಗುವಿನ ಮನಸ್ಥಿತಿಯ ಪಾತ್ರ ಎಂದರೆ ತೇಜಸ್ವಿ ನೆನಪಾಗುತ್ತಾರೆ. ಅಷ್ಟೇ ಅಲ್ಲ ಐಸ್ ಕ್ರೀಮ್ ಸಿನಿಮಾದಲ್ಲೂ ತೇಜಸ್ವಿ ನಟಿಸಿದ್ದರು.

ಮಾಧ್ಯಮದವರು ಇದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ತೇಜಸ್ವಿ, ‘ಅಂದು ಮಾಡಿದ್ದೆ, ಈಗ ಮಾಡುತ್ತಿದ್ದೇನೆ. ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೂ ನನ್ನಲ್ಲಿ ಕಮಿಟ್ಮೆಂಟ್ ಕೇಳುವುದಿಲ್ಲ, ಅವರೆಲ್ಲ ಹೆದರುತ್ತಾರೆ. ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲೆಲ್ಲೂ ಮಹಿಳೆಯರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಲ್ಲಿಯವರೆಗೂ ನಾನು ಯಾವುದೇ ದೊಡ್ಡ ಸಮಸ್ಯೆ ಎದುರಿಸಿಲ್ಲ..’ ಎಂದಿದ್ದಾರೆ ತೇಜಸ್ವಿ ಮಡಿವಾಡ.

Comments are closed.