Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಅಪ್ಪು ಕನ್ನಡದ ಕೋಟ್ಯಧಿಪತಿ ಮಾಡದೆ ಇರುವಾಗ ಅವರಂತೆಯೇ ನಿರೂಪಣೆ ಮಾಡುವ ಟಾಪ್ ನಟ ಮಾಡಬಹುದು. ಯಾರು ಗೊತ್ತೆ??

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಹೇಗೆ ತಾನೇ ನಾವು ಮರೆಯಲು ಸಾಧ್ಯ. ಕರ್ನಾಟಕ ರತ್ನ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರು ನಿರೂಪಣೆ ಮಾಡುತ್ತಿದ್ದ ಕಾರ್ಯಕ್ರಮ. ಹಿಂದಿಯಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮವನ್ನು ಕನ್ನಡದಲ್ಲಿ ಮಾಡಬೇಕು ಎಂದುಕೊಂಡಾಗ, ಆಯೋಜಕರ ಮೊದಲ ಆಯ್ಕೆಯಾಗಿದ್ದವರು ಕರ್ನಾಟಕದ ಮೆಚ್ಚಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅಪ್ಪು ಅವರಿಗೆ ಈ ಅವಕಾಶ ಬಂದಾಗ, ಮೊದಲಿಗೆ ಭಯ ಪಟ್ಟಿದ್ದರಂತೆ.

ನಂತರ ಎಲ್ಲರ ಸಹಕಾರದಿಂದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಅಪ್ಪು ಒಪ್ಪಿಕೊಂಡರು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೊದಲ ಎರಡು ಸೀಸನ್ ಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಡೆಯಿತು. ಅಭಿಮಾನಿಗಳಿಂದ ಕಾರ್ಯಕ್ರಮಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಹ ವ್ಯಕ್ತವಾಯಿತು. ನಂತರ ಮೂರನೇ ಸೀಸನ್ ಸಮಯದಲ್ಲಿ ಕಾರಣಾಂತರಗಳಿಂದ ಅಪ್ಪು ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಸಾಧ್ಯವಾಗಲಿಲ್ಲ, ಆಗ ನಟ ರಮೇಶ್ ಅರವಿಂದ್ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು.

ನಂತರ ನಾಲ್ಕನೇ ಸೀಸನ್ ನಲ್ಲಿ ಅಪ್ಪು ಅವರೇ ವಾಪಸ್ ಬಂದರು, ಆದರೆ 4ನೇ ಸೀಸನ್ ನಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಯಿತು. ಅದಾದ ಬಳಿಕ 5ನೇ ಸೀಸನ್ ಶುರು ಮಾಡಬೇಕು ಎಂದುಕೊಂಡರು ಸಹ, ಹಲವು ಕಾರಣಗಳಿಂದ ಕಾರ್ಯಕ್ರಮ ಶುರುವಾಗುವುದು ತಡವಾಗಿತ್ತು. ಆದರೆ 5ನೇ ಸೀಸನ್ ಶುರುವಾಗುವ ಮೊದಲೇ ಅಪ್ಪು ಅವರು ಇನ್ನಿಲ್ಲವಾದರು. ಇದೀಗ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ 5ನೇ ಶುರುವಾಗಲಿದ್ದು, ನಿರೂಪಣೆ ಮಾಡುವವರು ಯಾರು ಎನ್ನುವ ಪ್ರಶ್ನೆ ಶುರುವಾಗಿದೆ.

ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಅಪ್ಪು ಅವರ ಹಾಗೆಯೇ ರಮೇಶ್ ಅರವಿಂದ್ ಅವರು ಕನ್ನಡದ ಕೋಟ್ಯಾಧಿಪತಿ ಶೋ ನಿರೂಪಣೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಪ್ಪು ಅವರು ಇಲ್ಲದೆ ಇರುವಾಗ, ರಮೇಶ್ ಅರವಿಂದ್ ಅವರು ಮಾತ್ರ ಈ ಕೆಲಸ ಮಾಡಬಲ್ಲರು ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ನಿಜಕ್ಕೂ ರಮೇಶ್ ಅರವಿಂದ್ ಅವರು ಶೋ ನಿರೂಪಣೆ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ..

Comments are closed.