Neer Dose Karnataka
Take a fresh look at your lifestyle.

ಭಾರತ ವಿರುದ್ದದ ಪಂದ್ಯದಲ್ಲಿ ಆಡುತ್ತಿರುವ ಪಾಕಿಸ್ತಾನ ದೊಡ್ಡ ದೌರ್ಬಲ್ಯವೇನು ಗೊತ್ತೇ?? ಮಾಜಿ ಕ್ರಿಕೆಟಿಗ ಹೇಳಿದ್ದೇನು ಗೊತ್ತೆ??

ಬಹುನಿರೀಕ್ಷಿತ ಏಷ್ಯಾಕಪ್ ಪಂದ್ಯಗಳು ನಾಳೆಯಿಂದ ಶುರುವಾಗುತ್ತಿವೆ. ಅದರಲ್ಲೂ ಭಾನುವಾರ ಭಾರತ ಮತ್ತು ಪಾಕಿಸ್ತಾನದ ನಡುವೆ ಹಣಾಹಣಿ ನಡೆಯಲಿದ್ದು, ಕ್ರಿಕೆಟ್ ಪ್ರಿಯರು ಈ ಪಂದ್ಯ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾಈ. ಕಳೆದ ವರ್ಷ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನ್ ಭಾರತವನ್ನು ಸೋಲಿಸಿತ್ತು, ಹಾಗಾಗಿ ಈ ಬಾರಿ ಭಾರತ ತಂಡ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಅದಕ್ಕಾಗಿ ಭರ್ಜರಿಯಾಗಿ ತಯಾರಿಯನ್ನು ಸಹ ನಡೆಸಿದೆ.

ಈ ನಡುವೆ ಪಾಕಿಸ್ತಾನ್ ತಂಡದ ಬಗ್ಗೆ ನ್ಯೂಜಿಲೆಂಡ್ ನ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ಅವರು ಶಾಕಿಂಗ್ ಕಮೆಂಟ್ಸ್ ಮಾಡಿದ್ದಾರೆ. ಸ್ಕಾಟ್ ಅವರು ಹೇಳಿರುವ ಪ್ರಕಾರ ಪಾಕಿಸ್ತಾನ್ ತಂಡವು ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಈ ಇಬ್ಬರು ಆಟಗಾರರ ಮೇಲೆ ಅವಲಂಬಿತವಾಗಿದೆ. ಇವರಿಬ್ಬರು ಆರಂಭಿಮಾ ಆಟಗಾರರಾಗಿದ್ದು, ಇವರಿಬ್ಬರನ್ನು ಬಹಳ ಬೇಗ ಕ್ರೀಸ್ ಇಂದ ಹೊರಕಳಿಸಿದರೆ, ಭಾರತ ತಂಡ ಸುಲಭವಾಗಿ ಗೆಲ್ಲಬಹುದು ಎಂದಿದ್ದಾರೆ. ಕಳೆದ ಪಂದ್ಯದಲ್ಲಿ ಇವರಿಬ್ಬರೇ ಭಾರತ ಸೋಲು ಕಾಣಲು ಪ್ರಮುಖ ಕಾರಣ ಆಗಿದ್ದರು..ಹಾಗಾಗಿ ಇವರಿಬ್ಬರನ್ನು ಬೇಗ ಔಟ್ ಮಾಡುವುದು ಒಳ್ಳೆಯದು..

ಇನ್ನು ಪಾಕಿಸ್ತಾನ್ ವೇಗಿ ಶಾಹಿನ್ ಅಫ್ರಿದಿ ಅವರು ಸಹ ಪಾಕಿಸ್ತಾನ್ ತಂಡಕ್ಕೆ ಅಲಭ್ಯರಾಗಿದ್ದಾರೆ. ಪಂದ್ಯಗಳು ಶುರುವಾಗುವ ಮೊದಲೇ ಗಾಯಗೊಂಡಿರುವ ಅಫ್ರಿದಿ, ಏಷ್ಯಾಕಪ್ ಪಂದ್ಯಗಳಲ್ಲಿ ಆಡುತ್ತಿಲ್ಲ. ಇದು ಭಾರತಕ್ಕೆ ಪ್ಲಸ್ ಪಾಯಿಂಟ್ ಆಗಿದ್ದರು ಆಗಬಹುದು. ಈ ವಿಚಾರಗಳನ್ನು ಸ್ಕಾಟ್ ಸ್ಟೈರಿಸ್ ಅವರು ಹೇಳಿದ್ದಾರೆ. ಇವರು ಹೇಳಿದ ಹಾಗೆಯೇ, ಭಾರತ ತಂಡ ಭಾನುವಾರದ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಲಿ ಎನ್ನುವುದೇ ಅಭಿಮಾನಿಗಳ ಆಸೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಪ್ರದರ್ಶನ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Comments are closed.