Neer Dose Karnataka
Take a fresh look at your lifestyle.

ಸೋನು ಗೌಡ ರವರಿಗೆ ಮೊದಲ ಬಾರಿಗೆ ಶಾಕ್ ನೀಡಿದ ಜನತೆ: ಸೈಲೆಂಟ್ ಆಗಿನೇ ಇದ್ದ ಸೋನು ಗೌಡ ಆಟ ಬಯಲಿಗೆಳೆದ ಜನ

ಬಿಗ್ ಬಾಸ್ ಓಟಿಟಿ ಶೋ ಶುರುವಾಗಿ ಮೂರು ವಾರಗಳು ಕಳೆದಿವೆ. ಈ ಶೋ ಮುಗಿಯಲು ಉಳಿದಿರುವುದು ಕೇವಲ 3 ವಾರಗಳು ಮಾತ್ರ. ಸ್ಪರ್ಧಿಗಳೆಲ್ಲರು ಸೀರಿಯಸ್ ಆಗಿ ತಮ್ಮ ಆಟವನ್ನು ಆಡುತ್ತಿದ್ದಾರೆ. ಮನೆಯಲ್ಲಿ ಹೆಚ್ಚು ಹೈಲೈಟ್ ಆಗಿರುವ ಸ್ಪರ್ಧಿ ಸೋನು ಶ್ರೀನಿವಾದ್ ಗೌಡ. ಸೋನು ಮಾತು ಮನರಂಜನೆ ಕೊಡುತ್ತಿದ್ದರು, ಮನೆಯ ಸ್ಪರ್ಧಿಗಳ ಜೊತೆಗೆ ಹೆಚ್ಚಾಗಿ ಜಗಳ ಆಡುತ್ತಿದ್ದಾರೆ ಸೋನು. ಜನರಿಗೂ ಸಹ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಬಂದಿರುವುದು ಇಷ್ಟವಿರಲಿಲ್ಲ. ಸೋನು ಬಗ್ಗೆ ನೆಗಟಿವ್ ಆಗಿ ಸುದ್ದಿಯಾಗಿದ್ದೆ ಹೆಚ್ಚು.

ಈಕೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಗಟಿವ್ ಕಮೆಂಟ್ಸ್ ಗಳು ಹೆಚ್ಚಾಗಿ ಕೇಳಿಬರುತ್ತಿದ್ದವು, ಆದರೆ ಈಗ ಸೋನು ಶೋ ಮುಗಿಯುವವರೆಗೂ ಬಿಗ್ ಬಾಸ್ ಮನೆಯಲ್ಲಿ ಇರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಮೂರು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲೂ ಸೋನು ಶ್ರೀನಿವಾಸ್ ಗೌಡ ಉಳಿದುಕೊಂಡಿದ್ದಾರೆ. ಆದರೆ ಈಗ ಹೊರಗಿರುವ ಜನರು ಸೋನು ಶ್ರೀನಿವಾಸ್ ಗೌಡ ಅವರಿಗೆ ಬಿಗ್ ಶಾಕ್ ನೀಡಿದ್ದಾರೆ. ಇದನ್ನು ನೋಡಿ ಮನೆಯ ಸ್ಪರ್ಧಿಗಳು ನಕ್ಕು ಎಂಜಾಯ್ ಮಾಡಿದ್ದಂತೂ ನಿಜ. ಜನರು ಕೊಟ್ಟ ಆ ಶಾಕ್ ಏನು ಎಂದು ತಿಳಿಸುತ್ತೇವೆ ನೋಡಿ..

ಬಿಗ್ ಬಾಸ್ ವೂಟ್ ಆಪ್ ನಲ್ಲಿ ನಾಳೆ ಮನೆಯ ನಳಮಹಾರಾಜ ಯಾರಾಗಬೇಕು ಎಂದು ಒಂದು ಪ್ರಶ್ನೆ ಕೇಳಿದ್ದರು, ಅದಕ್ಕೆ ಉತ್ತರಿಸಿರುವ ಜನರು ಸೋನು ಶ್ರೀನಿವಾಸ್ ಗೌಡ ಅವರನ್ನು ಸೆಲೆಕ್ಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸೋನು ಒಂದು ಸಾರಿ ಕೂಡ ಅಡುಗೆ ಮಾಡಿಲ್ಲ, ಹಾಗಾಗಿ ಜನರು ಅಡುಗೆ ಮಾಡುವ ಟಾಸ್ಕ್ ಗೆ ಸೋನು ಶ್ರೀನಿವಾಸ್ ಗೌಡ ಅವರನ್ನು ಆಯ್ಕೆ ಮಾಡಿದ್ದು, ಸೋನು ಸಹ ತಾನು ಅಡುಗೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ.. ಇನ್ನು ಮನೆಯ ಸ್ಪರ್ಧಿಗಳು ಸೋನು ಹೆಸರನ್ನು ಕೇಳಿ ನಗಲು ಶುರು ಮಾಡಿದ್ದು, ಸೋನು ಶ್ರೀನಿವಾಸ್ ಗೌಡ ಇಡೀ ಮನೆಯವರಿಗೆ ಹೇಗೆ ಅಡುಗೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

Comments are closed.