Neer Dose Karnataka
Take a fresh look at your lifestyle.

ಇಂದು ನಿಮ್ಮ ಅದೃಷ್ಟ ಆರಂಭ: ಗಣೇಶ ಹಬ್ಬ ಮುಗಿದ ಕೂಡಲೇ ತಾಯಿ ಮಹಾ ಲಕ್ಷ್ಮಿ ಕೃಪೆ ಈ ರಾಶಿಗಳಿಗೆ ಆರಂಭ: ನೀವೇ ಇನ್ಮುಂದೆ ಟಾಪ್.

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಶುಕ್ರ ಗ್ರಹವು, ಆಗಸ್ಟ್ 31 ಗಣೇಶ ಹಬ್ಬದಂದು ಸಿಂಹ ರಾಶಿಗೆ ಪ್ರವೇಶ ಮಾಡಲಿದೆ. ಸಿಂಹ ರಾಶಿಯ ಅಧಿಪತಿ ಸೂರ್ಯ ಗ್ರಹ, ಈಗಾಗಲೇ ಸೂರ್ಯ ಸಿಂಹ ರಾಶಿಯಲ್ಲಿದ್ದಾನೆ. ಈ ಸಮಯದಲ್ಲಿ ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದು, ಈ ಎರಡು ಗ್ರಹಗಳ ಸಂಯೋಜನೆ ಆಗಲಿದೆ. ಶುಕ್ರನು ಸಂತೋಷ, ಸಮೃದ್ಧಿ, ಸೌಂದರ್ಯದ ಸಂಕೇತ, ಇನ್ನು ಸೂರ್ಯ ಯಶಸ್ಸು, ಕೀರ್ತಿ, ಆತ್ಮವಿಶ್ವಾಸ ಹಾಗೂ ಆರೋಗ್ಯದ ಸಂಕೇತ. ಈ ಎರಡು ರಾಶಿಗಳ ಸಂಯೋಗದಿಂದ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ, ಅದರಲ್ಲೂ 4 ರಾಶಿಗಳಿಗೆ ಲಕ್ಷ್ಮೀದೇವಿಯ ಕೃಪೆ ಸಿಗಲಿದೆ. ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯವರಿಗೆ ಸೂರ್ಯ ಶುಕ್ರರ ಸಂಯೋಗ ಲಾಭ ಹಾಗೂ ಅದೃಷ್ಟ ತರುತ್ತದೆ. ಜೀವನದಲ್ಲಿ ಸೌಕರ್ಯ ಹೆಚ್ಚಾಗುತ್ತದೆ, ತಂದೆಯ ಸಹಾಯ ಸಿಗುವುದರಿಂದ ಕಷ್ಟಗಳಿಂದ ಪಾರಾಗುತ್ತೀರಿ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಹೂಡಿಕೆ ಮಾಡಲು ಇದು ಸೂಕ್ತವಾದ ಸಮಯ ಆಗಿದೆ. ಅತಿಹೆಚ್ಚು ಹಣ ಹೂಡಿಕೆ ಮಾಡಿ, ಅದರಿಂದ ಲಾಭ ಪಡೆಯಿರಿ.

ವೃಷಭ ರಾಶಿ :- ಶುಕ್ರನು ಆಳುವ ರಾಶಿ ಇದು, ಹಾಗಾಗಿ ಶುಕ್ರನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳಿತು ಮಾಡುತ್ತದೆ. ಆರ್ಥಿಕವಾಗಿ ಏಳಿಗೆ ಕಾಣುತ್ತೀರಿ, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೆಚ್ಚಿನ ಹಣ ಸಿಗುವುದರಿಂದ ನೆಮ್ಮದಿಯ ಜೀವನ ನಡೆಸುತ್ತೀರಿ..

ಸಿಂಹ ರಾಶಿ :- ಈಗಾಗಲೇ ಸಿಂಹ ರಾಶಿಯಲ್ಲಿ ಸೂರ್ಯ ಇದ್ದು, ಇದೀಗ ಶುಕ್ರ ಬಂದು, ಸೂರ್ಯ ಶುಕ್ರರ ಸಂಯೋಗ ಆಗುವುದರಿಂದ ಈ ರಾಶಿಯವರಿಗೆ ಬಹಳ ಪ್ರಯೋಜನ ತರುತ್ತದೆ. ಹೊಸ ಕೆಲಸಕ್ಕೆ ಆಫರ್ ಸಿಗಬಹುದು, ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಸಂಬಳ ಜಾಸ್ತಿಯಾಗುತ್ತದೆ. ಆರ್ಥಿಕವಾಗಿ ಬಲವಾಗುತ್ತೀರಿ, ಉದ್ಯೋಗದಲ್ಲಿ ಏಳಿಗೆಯಿಂದ ಸಂತೋಷ ಕಾಣುತ್ತೀರಿ.

ಕುಂಭ ರಾಶಿ :- ಸೂರ್ಯ ಶುಕ್ರರ ಸಂಯೋಗ ಕುಂಭ ರಾಶಿಯವರಿಗೆ ಸಂತೋಷ ತಂದುಕೊಡುತ್ತದೆ. ಪ್ರೀತಿ, ಹಣ, ಗೌರವ ಎಲ್ಲವೂ ಈ ರಾಶಿಯವರಿಗೆ ಸಿಗುತ್ತದೆ. ಜೀವನದಲ್ಲಿ ಸೌಕರ್ಯ ಜಾಸ್ತಿಯಾಗುತ್ತದೆ, ನಿಮ್ಮ ವೃತ್ತಿ ಜೀವನದಲ್ಲಿ ಸಹ ಏಳಿಗೆ ಕಾಣುತ್ತೀರಿ, ಹಿರಿಯರ ಬೆಂಬಲ ಸಹಾಯ ಸಿಗುತ್ತದೆ. ವ್ಯಾಪಾರ ವೃದ್ಧಿಯಾಗುತ್ತದೆ.

Comments are closed.