Neer Dose Karnataka
Take a fresh look at your lifestyle.

ಮನೆಯಲ್ಲಿ ಎರಡನೇ ಮದುವೆಗೆ ಒತ್ತಾಯ ಎಂದು ಕಠಿಣ ನಿರ್ಧಾರ ಮಾಡಿ ಸರ್ಜರಿ ಮಾಡಿಸಿಕೊಂಡರೆ ಸಮಂತಾ: ಕಣ್ಣೀರಿಟ್ಟ ಫ್ಯಾನ್ಸ್. ಮದುವೆ ಬೇಡ ಎಂದರೆ ಹೀಗಾ ಮಾಡೋದು??

ನಟಿ ಸಮಂತಾ ರುತ್ ಪ್ರಭು ವಿಚ್ಛೇದನದ ಬಳಿಕ ಸೋಷಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿದ್ದಾರೆ. ಸಾಮಾನ್ಯವಾಗಿ ನಟಿಯರು ಮದುವೆ ಬಳಿಕ ನಟನೆಯಿಂದ ಹಿಂದೆ ಸರಿಯುತ್ತಾರೆ, ಆದರೆ ಸಮಂತಾ ಅವರಿಗೆ ಇದ್ದ ಕ್ರೇಜ್ ಮದುವೆ ಬಳಿಕ ಇನ್ನು ಹೆಚ್ಚಾಯಿತು ಎಂದರೆ ತಪ್ಪಾಗುವುದಿಲ್ಲ. ಇನ್ನು ವಿಚ್ಛೇದನ ಪಡೆದ ಬಳಿಕ ಸಹ ಸಮಂತಾ ಕೆಲಸದಲ್ಲಿ ಹಿಂದೆ ಉಳಿದಿಲ್ಲ. ಸಾಲು ಸಾಲು ಸಿನಿಮಾಗಳು, ವೆಬ್ ಸೀರೀಸ್ ಗಳು, ಜಾಹೀರಾತುಗಳು ಇವುಗಳಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಸಮಂತಾ ಅವರಿಗೆ ಬೇಡಿಕೆ ಇದೆ..

ಆದರೆ ಇದೀಗ ನಟಿ ಸಮಂತಾ ಅವರ ಬಗ್ಗೆ ಟಾಲಿವುಡ್ ನಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಸಮಂತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ವಿಚ್ಛೇದನದ ಬಳಿಕ ಸಮಂತಾ ಅವರು ತಮ್ಮ ಫ್ರೆಂಡ್ಸ್ ಜೊತೆಗೆ ಜಾಲಿ ಟ್ರಿಪ್ ಹೋಗುತ್ತಾ ಎಂಜಾಯ್ ಮಾಡುತ್ತಿದ್ದರು, ಫೋಟೋಸ್ ಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ಒಂದೆರಡು ತಿಂಗಳಿನಿಂದ ಸಮಂತಾ ಅವರು ಸೋಷಿಯಲ್ ಮೀಡಿಯಾ ಇಂದ ದೂರ ಉಳಿದಿದ್ದಾರೆ. ಅದರ ಬಗ್ಗೆ ಈಗ ಜೋರಾದ ಚರ್ಚೆಗಳೇ ನಡೆಯುತ್ತಿದೆ. ಸಮಂತಾ ಅವರು ಸೋಷಿಯಲ್ ಮೀಡಿಯಾ ಡಿಟಾಕ್ಸ್ ಆಗುತ್ತಿರುವ ಕಾರಣ ದೂರ ಉಳಿದಿರುವುದಾಗಿ ಹೇಳಿದ್ದರು. ಆದರೆ ಬೇರೆಯದೇ ಸುದ್ದಿ ಈಗ ಕೇಳಿ ಬರುತ್ತಿದೆ.

ಸಮಂತಾ ಅವರಿಗೆ ಮನೆಯಲ್ಲಿ ಎರಡನೇ ಮದುವೆಗೆ ಒತ್ತಡ ಹೆಚ್ಚಾಗಿದೆಯಂತೆ. ಆದರೆ ಸ್ಯಾಮ್ ಅವರಿಗೆ ಈಗ ಎರಡನೇ ಮದುವೆ ಆಗಲು ಇಷ್ಟವಿಲ್ಲ. ಮದುವೆ ವಿಚಾರದಲ್ಲಿ ಯಾರಿಗೂ ಬಲವಂತ ಮಾಡಬಾರದು ಎನ್ನುವುದು ಸಮಂತಾ ಅವರ ಅಭಿಪ್ರಾಯ, ಹಾಗಾಗಿ ಕಠಿಣವಾದ ನಿರ್ಧಾರ ಮಾಡಿ ಸರ್ಜರಿ ಮಾಡಿಸಿಕೊಂಡಿದ್ದಾರಂತೆ ಸಮಂತಾ. ಚೈತನ್ಯ ಹಾಗೂ ಸಮಂತಾ ಅವರಿಗೆ ಮಕ್ಕಳಾಗಿರಲಿಲ್ಲ, ಅದೇ ಕಾರಣದಿಂದ ಬೇರೆ ಆಗಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದ್ದವು. ಇದರ ಜೊತೆಗೆ ಮನೆಯಲ್ಲಿ ಒತ್ತಡ ಹೆಚ್ಚಾಗಿರುವ ಕಾರಣ ಮಕ್ಕಳಾಗದ ಹಾಗೆ ಸರ್ಜರಿ ಮಾಡಿಸಿಕೊಂಡಿದ್ದಾರಂತೆ ಸಮಂತಾ. ಈ ರೀತಿಯ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಇದು ನಿಜವೋ ಸುಳ್ಳೋ ತಿಳಿದುಬಂದಿಲ್ಲ. ಆದರೆ ಈ ಸುದ್ದಿ ನಿಜವೇ ಇರಬಹುದು ಎಂದುಕೊಂಡ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Comments are closed.