Neer Dose Karnataka
Take a fresh look at your lifestyle.

ಇದಪ್ಪ ಅದೃಷ್ಟ ಅಂದ್ರೆ: ಮದುವೆಯಾದ ಕೂಡಲೇ ಮಹಾಲಕ್ಷ್ಮಿ ರವರಿಗೆ ಬಂತು ದುಬಾರಿ ಉಡುಗೊರೆಗಳು. ಪತಿ ನಿರ್ಮಾಪಕ ಕೊಟ್ಟಿರುವ ಉಡುಗೊರೆ ಏನು ಗೊತ್ತೆ??

ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ವಿಚಾರ ಕಿರುತೆರೆ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಮದುವೆ ಸುದ್ದಿ. ಇವರಿಬ್ಬರು ಮದುವೆ ಆಗಿದ್ದು, ಅಭಿಮಾನಿಗಳಿಗೆ ಹಾಗೂ ನೆಟ್ಟಿಗರು ದೊಡ್ಡ ಶಾಕ್ ನೀಡಿತು ಎಂದರೆ ತಪ್ಪಾಗುವುದಿಲ್ಲ. ಬಹಳ ಸುಂದರವಾದ ನಟಿ ಮಹಾಲಕ್ಷ್ಮಿ ಅಷ್ಟು ದಪ್ಪಗಿರುವ ಹುಡುಗನ ಜೊತೆಗೆ ಹೇಗೆ ಮದುವೆಯಾದರು ಎನ್ನುವ ಪ್ರಶ್ನೆಯೇ ಎಲ್ಲಾ ಕಡೆ ಕೇಳಿಬರುತ್ತಿದೆ.

ಅದಕ್ಕೆ ಕೆಲವು ಉತ್ತರಗಳು ಸಿಕ್ಕವು, ಇವರಿಬ್ಬರ ಮದುವೆ ತಿರುಪತಿಯಲ್ಲಿ ನಡೆಯಿತು. ಮದುವೆ ಬಳಿಕ ಒಂದೆರಡು ಸಂದರ್ಶನದಲ್ಲಿ ಸಹ ಪಾಲ್ಗೊಂಡು, ರವೀಂದ್ರನ್ ಅವರೇ ಮದುವೆ ಪ್ರೊಪೋಸಲ್ ಮಾಡಿದರು ಎಂದು ಮಹಾಲಕ್ಷ್ಮಿ ಹೇಳಿಕೊಂಡರು. ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಂತೋಷದಿಂದ ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮಹಾಲಕ್ಷ್ಮಿ ಅವರು ತಮಿಳು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯವಾಗಿದ್ದು, ಹಲವು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ರವೀಂದ್ರನ್ ಅವರು 2013ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದು, ಅದರಲ್ಲಿ ಫಿಟ್ನೆಸ್ ಟಿಪ್ಸ್ ನೀಡುತ್ತಾರೆ.

ಇನ್ನು ಮದುವೆಗಾಗಿ ಮಹಾಲಕ್ಷ್ಮಿ ಅವರಿಗೆ ಬಹಳಷ್ಟು ದುಬಾರಿ ಉಡುಗೊರೆಗಳನ್ನು ರವೀಂದ್ರನ್ ನೀಡಿದ್ದಾರೆ ಎನ್ನಲಾಗುತ್ತಿದೆ. ಮಹಾಲಕ್ಷ್ಮಿ ಅವರು ಮಲಗುವ ಮಂಚಕ್ಕೆ ಚಿನ್ನದ ಲೇಪನ ಮಾಡಿಸಲಾಗಿದೆಯಂತೆ. ಹಾಗೂ 300ಕ್ಕಿಂತ ಹೆಚ್ಚು ರೇಷ್ಮೆ ಸೀರೆಗಳನ್ನು ಮಹಾಲಕ್ಷ್ಮಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರಂತೆ, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಭರಣಗಳನ್ನು ಮಹಾಲಕ್ಷ್ಮೀ ಅವರಿಗೆ ಗಿಫ್ಟ್ ನೀಡಿದ್ದಾರಂತೆ, ಹೆಂಡತಿಗಾಗಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಸುಂದರವಾದ ಮನೆ ಕಟ್ಟಿಸುವ ಪ್ಲಾನ್ ಕೂಡ ಮಾಡಿಕೊಂಡಿದ್ದಾರಂತೆ ರವೀಂದ್ರನ್. ಇದರಲ್ಲಿ ಸತ್ಯಾಂಶ ಎಷ್ಟಿದೆ ಎನ್ನುವುದು ಗೊತ್ತಿಲ್ಲ, ಆದರೆ ಈ ಸುದ್ದಿಯಂತೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜೊತೆಗೆ ಇವರಿಬ್ಬರು ಇದು ಎರಡನೇ ಮದುವೆ ಆಗಿದೆ.

Comments are closed.